Connect with us

Dvgsuddi Kannada | online news portal | Kannada news online

ಪಂಚಮಸಾಲಿ ಪಾದಯಾತ್ರೆ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು:ವಚನಾನಂದ ಶ್ರೀ

ದಾವಣಗೆರೆ

ಪಂಚಮಸಾಲಿ ಪಾದಯಾತ್ರೆ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು:ವಚನಾನಂದ ಶ್ರೀ

ನಾವು ನಡೆಯುತ್ತಿದ್ದೇವೆ. ಕೋಟಿಕೋಟಿ ಹೆಜ್ಜೆಗಳು ಒಟ್ಟಿಗೆ ಮೂಡುತ್ತಿವೆ. ನಮ್ಮ ದನಿ ಸ್ಟ್ರಾಂಗ್ ಆಗಿದೆ.ಒಂದು ಒಳ್ಳೆ ಕಾರಣಕ್ಕಾಗಿ ಸಮುದಾಯದ ಶ್ರೇಯಸ್ಸಿಗಾಗಿ ನಮ್ಮ ಸಂವಿಧಾನಬದ್ಧ ಹಕ್ಕಿಗಾಗಿ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ದಣಿವರಿಯದೆ ನಾವು ಮತ್ತು ಶ್ರೀಜಯಮೃತ್ಯುಂಜಯ ಮಹಾಸ್ವಾಮಿಗಳು ಸಾವಿರಾರು ಸದ್ಭಕ್ತರ ಜೊತೆ ಹೆಜ್ಜೆ ಹಾಕುತ್ತಿದ್ದೇವೆ. ಈಗಾಗಲೇ ನಾವು ದಾವಣಗೆರೆಯಿಂದ 35 ಕಿಲೋಮೀಟರ್ ದೂರ ನಡೆದಿದ್ದೇವೆ. ಇದೊಂದು ಮಹಾ ನಡಿಗೆ.ಪಂಚಮಸಾಲಿ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವ ತನಕ ನಮ್ಮ ನಡಿಗೆ ನಿಲ್ಲುವುದಿಲ್ಲ. ಕಾಲು ದಣಿಯುವುದಿಲ್ಲ.ನಡೆದು ನಡೆದು ನಮ್ಮ ಪಾದಗಳಲ್ಲಿ ಬೊಬ್ಬೆ ಬಂದಿವೆ. ಅದೊಂದು ಯಮಹಿಂಸೆ. ಬಿಸಲಿನ ಝಳ ನಡೆಯುವವರನ್ನು ನೆತ್ತಿಯಿಂದಿಡಿದು ಅಂಗಾಲಿನ ತನಕ ಸುಡುಸುಡುಸುಡುತ್ತಿದೆ. ಆದರೂ ನಾವು ನಡೆಯುತ್ತೇವೆ. ಕಾಲುಬಿದ್ದರೂ ತೆವಳಿಕೊಂಡಾದರೂ ಗುರಿ ಮುಟ್ಟುತ್ತೇವೆ ಅನ್ನುವ ಆತ್ಮವಿಶ್ವಾಸ ನಮ್ಮಲ್ಲಿದೆ. ನಮ್ಮ ಒಗ್ಗಟ್ಟಿನಲ್ಲಿದೆ. ಈ ಸಲ ನಾವಿಟ್ಟಿರೋದು ನಿರ್ಣಾಯಕ ಹೆಜ್ಜೆ.ನಿರ್ಣಾಯಕ ಹೋರಾಟ.
ಅದಕ್ಕೆ ಏನೆ ಅಡೆತಡೆ ಬಂದರೂ ಬಗ್ಗಲ್ಲ. 2ಎ ಮೀಸಲಾತಿ ಸಿಗದ ಹೊರತು ವಿಶ್ರಮಿಸಲ್ಲ.
ಇದು ಶಪಥ.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top