ಚನ್ನಗಿರಿ: ತಾಲ್ಲೂಕಿನ ಅರೇಹಳ್ಳಿಗೆ ಇಂದು ನಟ ರಿಯಲ್ ಸ್ಟಾರ್ ಹಾಗೂ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಆಗಮಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಜನರು ನೂಕುನುಗ್ಗಲು ಉಂಟಾಗಿತ್ತು.

ಅರೇಹಳ್ಳಿ ಜನತೆಯಿಂದ ಉಪೇಂದ್ರಗೆ ಅದ್ದೂರಿ ಸ್ವಾಗತ ನೀಡಿದರು. ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ,ಪ್ರಜಾಕೀಯ ಪರವಾಗಿ ಈ ಹಳ್ಳಿ ದೇಶಕ್ಕೆ ಮಾದರಿಯಾಗಿದೆ.ನಿಜವಾದ ಪ್ರಜಾಪ್ರಭುತ್ವದ ಪ್ರಭುಗಳು ನೀವು.ಎಲ್ಲ ಹಳ್ಳಿಗೂ ನಿಮ್ಮಗ್ರಾಮದ ಮಾದರಿಯನ್ನು ಸಾರುತ್ತೇನೆ. ಪ್ರತಿ ಹಳ್ಳಿಗೂ ನೀವೇ ಮಾಡೆಲ್. ನೀವು ಗೆಲ್ಲಿಸಿರುವ ಅಭ್ಯರ್ಥಿ ಅವನು ನಾಯಕನಲ್ಲ, ಕೆಲಸಗಾರ ಎಂದರು.




