Connect with us

Dvgsuddi Kannada | online news portal | Kannada news online

ರಾಜ್ಯ, ರಾಜಕೀಯ ಏರಿಳಿತ ಬಗ್ಗೆ  ಕೋಡಿ ಮಠದ ಶ್ರೀಗಳ ಭವಿಷ್ಯ ಏನು ಗೊತ್ತಾ..?

ಪ್ರಮುಖ ಸುದ್ದಿ

ರಾಜ್ಯ, ರಾಜಕೀಯ ಏರಿಳಿತ ಬಗ್ಗೆ  ಕೋಡಿ ಮಠದ ಶ್ರೀಗಳ ಭವಿಷ್ಯ ಏನು ಗೊತ್ತಾ..?

ದಾವಣಗೆರೆ: ಆಶ್ವೀಜ ಕಾರ್ತೀಕ ಮಾಸದಲ್ಲಿ ಕರೊನಾ ಸೋಂಕು ಉಲ್ಬಣವಾಗುತ್ತೆ ಎಂದಿದ್ದೆ. ಇದೀಗ ಯುಗಾದಿವರೆಗೂ ಸೋಂಕು ಕಡಿಮೆ ಆಗುವ ಲಕ್ಷಣಗಳಿಲ್ಲ. ಶಾಲಾ-ಕಾಲೇಜಗಳು ಪುನರ್​ ಆರಂಭವಾದರೂ ಮತ್ತೆ ಮುಚ್ಚಲಿವೆ. ಕರೊನಾ ಎರಡನೇ ಹಂತದಲ್ಲಿ ಪರಿವರ್ತನೆಯಾಗಲಿದೆ. ಅದು ಮಾನಸಿಕ ಕ್ಷೋಭೆಯಿಂದ ಬರಲಿದೆ, ಸಾವು ತರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮಹಾಮಾರಿ ಕರೊನಾ ಸೋಂಕು, ರಾಜ್ಯ ರಾಜಕೀಯ ಬಗ್ಗೆ ಭವಿಷ್ಯ ಹೇಳಿದ್ದಾರೆ.

ಉತ್ತರ ಕರ್ನಾಟಕ ಜಲಪ್ರಳಯ ಆಗುತ್ತೆ ಎಂದು ಭವಿಷ್ಯ ಹೇಳಿದ್ದೆವು. ಅದು ಸತ್ಯವಾಗಿದೆ. ಡಿಸೆಂಬರ್​ವರೆಗೆ ಅಂಥ ಪ್ರಸಂಗಗಳು ಇವೆ. ಮನುಷ್ಯ ಎಲ್ಲ ಮರೆತ್ತಿದ್ದಾನೆ. ದುಡ್ಡು ದೊಡ್ಡಪ್ಪ ಆಗಿದೆ, ತತ್ವಗಳಿಗೆ ಬೆಲೆ ಇಲ್ಲದಂತಾಗಿದೆ. ಸತ್ಯ ಸತ್ತು ಹೋಗಿದೆ, ಜನರು ಮೋಸದಲ್ಲಿ ತೊಡಗಿದ್ದಾರೆ. ಗ್ರಹಣದ ಹಿನ್ನೆಲೆ ರಾಜ್ಯ ರಾಜಕೀಯ ವಿಪ್ಲವವಾಗಲಿದೆ. ರಾಜ್ಯ ರಾಜಕಾರಣದಲ್ಲಿ ಏರಿಳಿತ- ಅಶಾಂತಿ ಕಾಣಲಿದೆ ಎಂದು ಶ್ರೀಗಳು ಹೇಳಿದರು. ಇನ್ನು ಸಿಎಂ ಬಿ.ಎಸ್‌. ಯಡಿಯೂರಪ್ಪ ಅಧಿಕಾರಾವಧಿ ಪೂರ್ಣಗೊಳಿಸುತ್ತಾರಾ? ಎಂಬ ಪ್ರಶ್ನೆಗೆ  ಶ್ರೀಗಳು  ಪ್ರತಿಕ್ರಿಯೆ ನೀಡಿಲ್ಲ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top