ಲಕ್ನೋ: ಉತ್ತರ ಪ್ರದೇಶದ ಬಿಎಸ್ಪಿ ಶಾಸಕ ಮುಖ್ತರ್ ಅನ್ಸಾರಿ ಅವರ ಎರಡು ಅಕ್ರಮ ಕಟ್ಟಡಗಳನ್ನು ಸರ್ಕಾರಿ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಈ ಹಿಂದೆ ಗ್ಯಾಂಗ್ಸ್ಟಾರ್ ಆಗಿದ್ದ ಶಾಸಕ ಮುಖ್ತರ್ ಅನ್ಸಾರಿಗೆ ಸೇರಿದ್ದ ಎರಡು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಸಿಸಲಾಗಿದೆ. ಕಟ್ಟಡ ನೆಲಸಮದ ಖರ್ಚುಗಳನ್ನು ಅವರಿಂದಲೇ ಪಡೆದುಕೊಂಡಿದೆ. ಕ್ರಿಮಿನಲ್ ಗಳು ಅಪರಾಧ ಪ್ರಕರಣಗಳಿಂದ ಹೊರ ಬರಬೇಕಿದೆ. ಇದಕ್ಕೆ ಇಂತಕ ಕಠಿಣ ನಿರ್ಧಾರ ಅಗತ್ಯ ಎಂದು ಸಿಎಂ ಯೋಗಿ ಆದಿತ್ಯನಾಥ್ ಮಾಧ್ಯಮ ಸಲಹೆಗಾರ ಮೃತ್ಯಂಜಯ್ಯ ತಿಳಿಸಿದ್ದಾರೆ.

ಲಕ್ನೋ ನಗರದ ದಾಲಿಬಾಘ ನಲ್ಲಿನ ಶಾಸಕರ ಕಟ್ಟಡ ನೆಲಸಮ ಮಾಡಲಾಗಿದೆ. ಮುನ್ನೇಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಟ್ಟಡಕ್ಕೆ ನಿಷ್ಕ್ರಾಂತ್ ಸಂಪತಿ ಎಂದು ಹೆಸರಿಡಲಾಗಿದ್ದು, ಇಲ್ಲಿ ಪಾಕಿಸ್ತಾನದ ಅಕ್ರಮ ವಲಸಿಗರು ವಾಸವಾಗುತ್ತಿದ್ದರು ಸರ್ಕಾರದ ವಕ್ತಾರರು ಹೇಳಿದ್ದಾರೆ.



