ಡಿಕೆಶಿಗೆ ಜಾಮೀನು ನಿರಾಕಣೆಗೆ ಕಾರಣ ಏನು ಗೊತ್ತಾ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿಸುದ್ದಿ.ಕಾಂ, ದೆಹಲಿ:  ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ , ಕಾಂಗ್ರೆಸ್  ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಡಿಕೆಶಿಗೆ ಜಾಮೀನು ಅರ್ಜಿ ನಿರಾಕರಣೆಗೆ ನ್ಯಾಯಾಲಯ 10 ಕಾರಣ ನೀಡಿದ್ದು, ಡಿ.ಕೆ. ಶಿವಕುಮಾರ್  ಇನ್ನಷ್ಟು ದಿನ ಜೈಲಿನಲ್ಲಿ ಕಾಲ ಕಳೆಯಬೇಕಿದೆ.

ಡಿಕೆ ಶಿವಕುಮಾರ್‌ ಪರ  ಅಭಿಷೇಕ್‌ ಮನು ಸಿಂಘ್ವಿ, ಮುಕುಲ್‌ ರೋಹಟಗಿ, ದಯಾನ್‌ ಕೃಷ್ಣನ್‌, ಮಯಾಂಕ್‌ ಜೈನ್‌, ಪರಮಾತ್ಮ ಸಿಂಗ್‌, ಮಧು ಜೈನ್‌ ವಾದಿಸಿದರು. ಇನ್ನು ಜಾರಿ ನಿರ್ದೇನಾಲಯದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌, ಎನ್‌ಕೆ ಮಟ್ಟಾ, ನಿತೀಶ್‌ ರಾಣಾ, ಶರತ್‌ ನಂಬಿಯಾರ್‌, ಸಂಜನಾ ರಜಪೂತ್‌, ಸೌರಭ್ ಮೆಹ್ತಾ ವಾದ ಮಂಡಿಸಿದರು.

ಈ  ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌  ಜಾಮೀನು ನಿರಾಕರಿಸಿದರು. ಈ ಮೂಲಕ ಡಿ.ಕೆ. ಶಿವಕುಮಾರ್ ಮತ್ತೆ ತಿಹಾರ್‌ ಜೈಲಿಗೆ ಕಳುಹಿಸಿದರು.ಇನ್ನು ಡಿಕೆಶಿ ಜಾಮೀನು ನಿರಾಕರಣೆಗೆ ನ್ಯಾಯಾಲಯ  ಪ್ರಮುಖ 10 ಕಾರಣ ನೀಡಿದೆ. ಆ ಕಾರಣಗಳು ಈ ರೀತಿ ಇವೆ.

  • ತನಿಖೆಯು ಇನ್ನೂ ಪ್ರಾಥಮಿಕ   ಹಂತದಲ್ಲಿದೆ.
  • ಇಡಿ 317 ಬ್ಯಾಂಕ್‌ ಖಾತೆಗಳ ದಾಖಲೆ ನೀಡಿದ್ದು,ಪರಿಶೀಲನೆಗೆ  ಕಾಲಾವಕಾಶ ಬೇಕಾಗಿದೆ.
  • ಆರೋಪಿ ಪ್ರಭಾವಿ ರಾಜಕಾರಣಿಯಾಗಿದ್ದು ಸಾಕ್ಷ್ಯಗಳ ಮೇಲೆ ಪ್ರಬಾವ ಬೀರುವ ಸಾಧ್ಯತೆ ಇದೆ
  • ಇಡಿ ಭಾರೀ ಪ್ರಮಾಣದಲ್ಲಿ ದಾಖಲೆ ಸಂಗ್ರಹಿಸಿದೆ. ತನಿಖೆಗೆ ಮುಕ್ತ ಮತ್ತು  ಪಾರದರ್ಶಕವಾಗಿ ತನಿಖೆಗೆ ಅವಕಾಶ ನೀಡಬೇಕಿದೆ
  •  ಅನಾರೋಗ್ಯ ಕಾರಣಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ. ಕಸ್ಟಡಿಯಲ್ಲಿಯೇ ಅತ್ಯುತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೈದ್ಯಕೀಯ ವರದಿಗಳ
  • ಪರಿಶೀಲನೆ ನಡೆಸಿದ ನಂತರ ಆರೋಗ್ಯ ಸುಧಾರಣೆಯಾಗಿರುವುದು ಕಂಡುಬಂದಿದೆ.
  • ಈ ಪ್ರಕರಣ ಆರ್ಥಿಕ ಅಪರಾಧವಾಗಿರುವುದರಿಂದ ಕಠಿಣ ಕಾನೂನು ಕ್ರಮ ಅಗತ್ಯವಾಗಿರುತ್ತದೆ.
  • ಕೋಟ್ಯಂತರ ರೂಪಾಯಿ ಆರೋಪಿಯದ್ದೇ ಎಂದು ಆಪ್ತರೇ ಹೇಳಿಕೆ ನೀಡಿ ನಂತರ ಬದಲಾವಣೆ ಹೇಳಿಕೆ ನೀಡುತ್ತಿದ್ದಾರೆ.
  •  ತೆರಿಗೆ ಕಟ್ಟಿದ್ದಾರೆ ಎಂಬ ಮಾತ್ರಕ್ಕೆ ಕಪ್ಪು ಹಣ ಬಿಳಿಯಾಗುವುದಿಲ್ಲ. ದೇಶದ ಆರ್ಥಿಕತೆ ಅಪಾಯ ಇದೆ.
  •  ಅಕ್ರಮ ಹಣ ವರ್ಗಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುವ ಅಗತ್ತಯವಿದೆ
  • ಹಲವು ಆಸ್ತಿಗಳನ್ನು ನಗದು ನೀಡಿಯೇ ಖರೀದಿಸಲಾಗಿದೆ. ಈ ಬಗ್ಗೆ ದಾಖಲೆಗಳ ಪರಿಶೀಲನೆ ಕೂಡ ನಡೆಯುತ್ತದ್ದು, ಈ ಸಂದರ್ಭದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ.
Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *