ಡಿವಿಜಿಸುದ್ದಿ.ಕಾಂ. ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ರಿಂಗ್ ರಸ್ತೆ ಅಭಿವೃದ್ದಿಗೆ 51 ಕೋಟಿ ಟೆಂಡರ್ ಕರೆದು 5 ತಿಂಗಳು ಆಗಿದ್ದರೂ, ಕಾಮಗಾರಿ ಆರಂಭವಾಗಿಲ್ಲದಿರುವುದು ಖಂಡನೀಯ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ನಾಗರಿಗಕ ಮೂಲ ಸೌಕರ್ಯ ಹೋರಾಟ ವೇದಿಕೆ ಸಂಚಾಲಕ ಜೆ. ಅಮಾನುಲ್ಲಾಖಾನ್ ಆಗ್ರಹಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿಯನ್ನು ಬೇರೆಯಡಿ ಸ್ಥಳಂತರಿಸಲು 350 ಕೋಟಿ ಮೀಸಲಿಡಲಾಗಿತ್ತು. ಆದರೆ, ಇದೀಗ ಮಾಲೀಕರು ಕಾರ್ಮಿಕರ ನಡುವೆ ಸಮನ್ವಯ ಸಾಧಿಸದೆ ಯೋಜನೆಯ ಹಣ ಬೇರೆಯಡೆ ವರ್ಗಾವಣೆ ಆಗುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಮಂಡಕ್ಕಿ ಭಟ್ಟಿ ವರ್ಗಾಯಿಸುವ ಯೋಜನೆ ಕೈ ಬಿಟ್ಟರೆ ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶವೇ ಈಡೇರದಂತಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ 2020 ವೇಳೆಗೆ ಮುಕ್ತಾಯಗೊಳ್ಳಲಿದೆ. ನಿಗಧಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕಿದೆ. ಈ ಕೂಡಲೇ ಅಧಿಕಾರಿಗಳು ಎಚ್ಚತ್ತು ಟೆಂಟರ್ ಆಗಿರುವ ಕಾಮಗಾರಿಯನ್ನು ಮಗಿಸಬೇಕು. ಜೊತೆಗೆ ರಿಂಗ್ ರಸ್ತೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ಎ. ಶ್ರೀನಿವಾಸ್, ಇನಾಯತ್ ಆಲಿ ಖಾನ್, ಸಲೀಮ್ ಸಾಬ್ ಬಾಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



