ಡಿವಿಜಿಸುದ್ದಿ.ಕಾಂ, ದಾವಣಗೆರೆ: ವನಿತ ಸಮಾಜ ಮತ್ತು ಜಿಲ್ಲಾ ಕ್ರೀಡಾಪಟುಗಳ ಸಂಘ ಸಹಯೋಗದೊಂದಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಸೆ. ೭ ರಂದು ಸಂಜೆ ೫.೩೦ಕ್ಕೆ ವನಿತ ಸಮಾಜ ಸಭಾಂಗಣದಲ್ಲಿ ಪೊಲೀಸ್ ನಿರ್ಭಯ ತಂಡದ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ಗಳಾದ ನಾಗಮ್ಮ ಕೆ, ಶೈಲಶ್ರೀ ಎ.ಎಸ್, ಕಾನ್ಸ್ಟೆಬಲ್ಗಳಾದ ವತ್ಸಲಾ, ಗೌರಮ್ಮ, ಸಿದ್ಲಿಂಗಮ್ಮ, ಮಾಲತಿ ಬಾಯಿ, ಪುಷ್ಬಾಲತಾ, ಗಿರಿಯಮ್ಮ, ಭವಾನಿ, ನೇತ್ರಾವತಿ, ರೂಪ, ಲಕ್ಷ್ಮೀದೇವಿ, ಸಂಗೀತಾ, ಕಸ್ತೂರಿ, ಶಿವಲಿಂಗಮ್ಮ, ಮಮತಾ ಅವರಿಗೆ ಸನ್ಮಾನಿಸಲಾಗುವುದು ಎಂದು ಜಿಲ್ಲಾ ಕ್ರೀಡಾಪಟು ಸಂಘದ ಅಧ್ಯಕ್ಷ ಕೆ. ದಿನೇಶ್ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅಥಿತಿಗಳಾಗಿ ವೀರಶೈವ ಮಹಾಸಭಾದ ದಾವಣಗೆರೆ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಎಸ್ಪಿ ಹನುಮಂತರಾಯಪ್ಪ, ವನಿತ ಸಮಾಜದ ಗೌರವಧ್ಯಕ್ಷೆ ನಾಗಮ್ಮ ಕೇಶವಮೂರ್ತಿ, ಲಯನ್ಸ್ ಕ್ಲಬ್ ನ ಅಧ್ಯಕ್ಷ ವೈ.ಬಿ. ಸತೀಶ್, ಜಿಲ್ಲಾ ಕ್ರೀಡಾ ಪಟುಗಳ ಸಂಘದ ಉಪಾಧ್ಯಕ್ಷ ಶಿವಗಂಗಾಶ್ರೀನಿವಾಸ್ ಭಾಗಿಯಾಗಲಿದ್ದಾರೆ. ಆದ್ಯಕ್ಷತೆಯನ್ನು ವನಿತ ಸಮಾಜದ ಅಧ್ಯಕ್ಷೆ ಮಂಜುಳ ಬಸವಲಿಂಗಪ್ಪ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ವಹಿಸಿಕೊಳ್ಳಲಿದ್ದಾರೆ ಎಂದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ:9844460336, 7483892205



