Connect with us

Dvgsuddi Kannada | online news portal | Kannada news online

ಮೊಬೈಲ್ ನೆಟ್ ವರ್ಕ್  ಸಿಗದಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಏನು ಮಾಡಿದರು ಗೊತ್ತಾ..?

ಕ್ರೀಡೆ

ಮೊಬೈಲ್ ನೆಟ್ ವರ್ಕ್  ಸಿಗದಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಏನು ಮಾಡಿದರು ಗೊತ್ತಾ..?

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ಇಡೀ ಜಗತ್ತೆ ಲಾಕ್‍ಡೌನ್ ವಿಧಿಸಿಕೊಂಡಿದೆ, ಇದರ ಪರಿಣಾಮ ಯಾವುದೇ ಕ್ರೀಡಾ  ಚಟುವಟಿಕೆ ಸಹ ನಡೆಯುತ್ತಿಲ್ಲ. ಇದಕ್ಕೆ ಕ್ರಿಕೆಟ್ ಸಹ ಹೊರತಾಗಿಲ್ಲ.  ಹೀಗಾಗಿ ಭಾರತದ ಮೂಲದ ಐಸಿಸಿ ಅಂಪೈರ್ ಅನಿಲ್ ಚೌಧರಿ ತಮ್ಮ ಸ್ವಗ್ರಾಮದಲ್ಲೇ ಉಳಿದುಕೊಂಡಿದ್ದರು. ಆದರೆ, ತಮ್ಮ ಗ್ರಾಮದಲ್ಲಿ ಮೊಬೈಲ್ ಸಿಗ್ನಲ್ ಸಿಗದಕ್ಕೆ ಮರನ್ನೇರಿದ್ದರು. ಈ ಸುದ್ದಿ ಎಲ್ಲ ಕಡೆ ಹರಡುತ್ತಿದ್ದಂತೆ  ಖಾಸಗಿ ಕಂಪನಿಗಳು  ನೆಟ್‍ವರ್ಕ್ ವ್ಯವಸ್ಥೆ ಸರಿ ಮಾಡಿದ್ದಾರೆ.

ಕೊರೊನಾ ವೈರಸ್  ಕ್ರೀಡಾ ಜಗತ್ತು ಕಳೆದ 3-4 ತಿಂಗಳಿನಿಂದ ಸ್ತಬ್ಧಗೊಂಡಿದ್ದು, ಹಲವು ಕ್ರಿಕೆಟ್ ಟೂರ್ನಿಗಳು ಸಹ ಮುಂದೂಡಲ್ಪಿಟ್ಟಿವೆ. ಪರಿಣಾಮ ಐಸಿಸಿ ಅಂಪೈರ್ ಆಗಿರುವ ಅನಿಲ್ ಚೌಧರಿ ಉತ್ತರದ ಪ್ರದೇಶದ ಡಾಂಗ್ರೋಲ್ ಬಳಿಯ ತಮ್ಮ ಸ್ವಗ್ರಾಮದಲ್ಲಿ ತಮ್ಮ ಇಬ್ಬರು ಪುತ್ರರೊಂದಿಗೆ ಉಳಿದುಕೊಂಡಿದ್ದಾರೆ.

ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಅನಿಲ್ ಅವರಿಗೆ ನೆಟ್‍ವರ್ಕ್ ಸಮಸ್ಯೆ ಬಹುದೊಡ್ಡದಾಗಿ ಕಾಡಿತ್ತು. ಅಲ್ಲದೇ ಮೊಬೈಲ್ ಸಿಗ್ನಲ್ ಪಡೆಯಲು ಮರವನ್ನೇರಿದ್ದರು. ಬಳಿಕ ಮೊಬೈಲ್ ನೆಟ್‍ವರ್ಕ್ ಸಂಸ್ಥೆಗಳೊಂದಿಗೆ ಮಾತನಾಡಿದ ಅವರು ಗ್ರಾಮಕ್ಕೆ ಮೊಬೈಲ್ ಟವರ್ ವ್ಯವಸ್ಥೆ ಮಾಡಿಸಿದ್ದಾರೆ. ಅನಿಲ್ ಚೌದರಿ ಅವರು ಗ್ರಾಮಕ್ಕೆ ಬಂದಿದ್ದರಿಂದ ಗ್ರಾಮಸ್ಥರು ಖುಷಿಯಾಗಿದ್ದು, ನೆಟ್ ವರ್ಕ್ ಸಮಸ್ಯೆ ಬಗೆಹರಿದಿದೆ.

ಎಲ್ಲರು ಯಾವುದೇ ಸಮಸ್ಯೆ ಇಲ್ಲದೇ ಸಂಬಂಧಿಗಳೊಂದಿಗೆ ಮಾತನಾಡುತ್ತಿದ್ದಾರೆ. ಮಕ್ಕಳು ಆನ್‍ಲೈನ್ ಕ್ಲಾಸ್‍ಗೆ ಹಾಜರಾಗುತ್ತಿದ್ದಾರೆ. ನಾನು ಕೂಡ ಐಸಿಸಿ ವಿಡಿಯೋ ಕಾನ್ಫರೆನ್ಸ್, ವರ್ಕ್ ಶಾಪ್‍ಗಳಿಗೆ ಗ್ರಾಮದಿಂದಲೇ ಹಾಜರಾಗುತ್ತಿದ್ದೇನೆ ಎಂದು ಅನಿಲ್ ಚೌಧರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‍ನಲ್ಲಿ ಗ್ರಾಮದಲ್ಲಿದ್ದ ನೆಟ್‍ವರ್ಕ್ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅನಿಲ್ ಅವರು, ದೆಹಲಿಯಲ್ಲಿರುವ ತಮ್ಮ ಪತ್ನಿ ಹಾಗೂ ಐಸಿಸಿ ಕಾನ್ಫರೆನ್ಸ್‍ಗಳಿಗೆ ಹಾಜರಾಗಲು ಗ್ರಾಮದ ಹೊರವಲಯದ ಎತ್ತರದ ಮರವೇರಿ ಮಾತನಾಡಬೇಕಿದೆ ಎಂದು ತಿಳಿಸಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೀಡೆ

To Top