ಡಿವಿಜಿ ಸುದ್ದಿ, ದಾವಣಗೆರೆ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಹೊಡೆದು 1.80 ಲಕ್ಷ ದೋಚಿದ ಘಟನೆ ಘಟನೆ ದಾವಣಗೆರೆಯ ಪಿಬಿ ರಸ್ತೆಯ ಸುಲ್ತಾನ್ ಜ್ಯೂವೆಲರ್ಸ್ ಬಳಿ ನಡೆದಿದೆ.

ಕಂಟ್ರಾಕ್ಟರ್ ಮಹೇಶ್ ಎಂಬುವರಿಗೆ ಸೇರಿದ 1.80 ಲಕ್ಷ ಹಣ ಕಳೆದುಕೊಂಡಿದ್ದಾರೆ. ಜ್ಯೂವೆಲರ್ಸ್ ಮುಂಭಾಗ ನಿಲ್ಲಿಸಿದ ಕಾರಿನ ಬಳಿ ಬಂದ ಕಳ್ಳರ ಗ್ಯಾಂಗ್, ಸ್ವಲ್ಪ ಹೊತ್ತು ಕಾರಿನ ಬಳಿ ನಿಂತು ನಮ್ಮನ್ನು ಯಾರಾದರು ನೋಡುತ್ತಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ತಮ್ಮ ಕಡೆ ಯಾರು ಗಮನಹರಿಸುತ್ತಿಲ್ಲ ಎಂಬುದನ್ನು ತಿಳಿದ ನಂತರ ಬೇಬಿನಲ್ಲಿದ್ದ ಚ್ಯಾಟರ್ಬಿಲ್ ಹೊರ ತಗೆದು, ಕಾರಿನ ಕ್ಲಾಸ್ ಹೊಡೆದು ಹಣ ಎತ್ತುಕೊಂಡು ಓಡಿತ್ತಾನೆ. ಅವನ ಸುತ್ತಮುತ್ತ ಇದ್ದ ಸಹಚರರು ಕೂಡ ಅವನ ಹಿಂದೆಯೇ ಓಡುತ್ತಾರೆ. ಹಣ ಕಳವು ಮಾಡುತ್ತಿದ್ದಂತೆ ಸ್ಥಳೀಯರು ಹಿಡಿಯಲು ಪ್ರಯತ್ನಿಸಿದರು ಆದರೆ ಕಣ್ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಖತರ್ನಕ್ ಗ್ಯಾಂಗಿಗಾಗಿ ಬಲೆ ಬೀಸಿದ್ದಾರೆ.
ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಮಹೇಶ್ ಎನ್ನುವರು ಬ್ಯಾಂಕ್ ಗೆ ಕಟ್ಟಲು ಹಣ ಕಾರಿನಲ್ಲಿ ಇಟ್ಟುಕೊಂಡು ಬಂದಿದ್ದರು. 1.80 ಲಕ್ಷ ಹಣವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು. ಇದನ್ನೇ ನೋಡಿಕೊಂಡಿದ್ದ ಕಳ್ಳ, ಕಾರಿನ ಗ್ಲಾಸ್ ಹೊಡೆದು ಹಣವನ್ನು ಲಪಟಾಯಿಸಿದ್ದಾನೆ. ಇನ್ನು ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.



