Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಶುಕ್ರವಾರ-ಆಗಸ್ಟ್-14,2020 ರಾಶಿ ಭವಿಷ್ಯ

  • ಸೂರ್ಯೋದಯ: 06:10, ಸೂರ್ಯಸ್ತ: 18:37
  • ಶಾರ್ವರಿ ನಾಮ ಸಂವತ್ಸರ
  • ಶ್ರಾವಣ ಮಾಸ ದಕ್ಷಿಣಾಯಣ
  • ತಿಥಿ: ದಶಮೀ – 14:01 ವರೆಗೆ
  • ನಕ್ಷತ್ರ: ಮಾರ್ಗಶಿರ – ಪೂರ್ಣ ರಾತ್ರಿ ವರೆಗೆ
  • ಯೋಗ: ವ್ಯಾಘಾತ – 09:47 ವರೆಗೆ
  • ಕರಣ: ವಿಷ್ಟಿ – 14:01 ವರೆಗೆ ಬವ – 26:16+ ವರೆಗೆ
  • ದುರ್ಮುಹೂರ್ತ: 08:40 – 09:29
  • ದುರ್ಮುಹೂರ್ತ : 12:49 – 13:38
  • ರಾಹು ಕಾಲ: 10:30 – 12:00
  • ಯಮಗಂಡ: 15:00 – 16:30
  • ಗುಳಿಕ ಕಾಲ: 07:30 – 09:00
  • ಅಮೃತಕಾಲ: 21:21 – 23:01
  • ಅಭಿಜಿತ್ ಮುಹುರ್ತ: 11:59 – 12:49

ಮದುವೆ ಬಗ್ಗೆ ಚಿಂತನೆ ಮಾಡುವವರಿಗೆ ಇಲ್ಲಿದೆ ಪರಿಹಾರ ಹಾಗೂ ಮಾರ್ಗದರ್ಶನ

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕವಿಶ್ಲೇಷಣೆಗಾರರು ರಾಶಿಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ
ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ.
ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ.
ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ
ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನ್ನು ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ.
ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ .ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ.
ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲಗ್ನದಿಂದ ಸಪ್ತಮ ಸ್ಥಾನ ಕಂಕಣಬಲ ಸೂಚಿಸುತ್ತದೆ. ಒಂದು ವೇಳೆ ಶನಿ ಸ್ವಾಮಿ ಸಪ್ತಮ ಸ್ಥಾನದಲ್ಲಿದ್ದರೆ ಮದುವೆ ವಿಳಂಬವಾಗುತ್ತದೆ. ಅಷ್ಟೇ ಅಲ್ಲ ಉದ್ಯೋಗದಲ್ಲಿ ಏರಿಳಿತ ಅನುಭವಿಸುವಿರಿ. ಶನಿ ಸ್ವಾಮಿಯು ನಮ್ಮ ದೇಹಕ್ಕೆ ಹೋಲಿಕೆ ಮಾಡಿದಾಗ ಕಾಲು ಮತ್ತು ಪಾದಗಳಿಗೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ಕಾಲು ನೋವು ,ಮಂಡಿ ನೋವು, ಪಾದಗಳಲ್ಲಿ ಉರಿ, ವಾಯು, ಆಕಸ್ಮಿಕವಾಗಿ ಕಾಲುಗಳಿಗೆ ಪೆಟ್ಟು ,ನೋವು ಉಂಟಾಗುವ ಸಾಧ್ಯತೆ ಹೆಚ್ಚು.
ವ್ಯಾಪಾರದಲ್ಲಿ ತೀವ್ರ ಸಂಕಟ ಅನುಭವಿಸಬೇಕಾಗುತ್ತದೆ.

ಪರಿಹಾರಗಳು
1) ನಿಮ್ಮ ಲಗ್ನ ಕುಂಡಲಿಯಲ್ಲಿ ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ “ವಿಷ್ಣುಸಹಸ್ರನಾಮ ಪಾರಾಯಣ “ಮಾಡುವುದು ಉತ್ತಮ.
2) ಪ್ರತಿ ಶನಿವಾರ ಎಳ್ಳೆಣ್ಣೆ ದೀಪ ಶನೇಶ್ವರ ಸ್ವಾಮಿಗೆ ಹಚ್ಚಿರಿ.
3) ಸ್ತೋತ್ರ ದಿನಾಲು ಪಠಾಣ ಮಾಡಿರಿ.
ನೀಲಾಂಜನಂ ಸಮಾಭಾಸಂ। ರವಿಪುತ್ರಂ ಯಮಾಗ್ರಜಂ। ಛಾಯಾ ಮಾರ್ತಂಡ। ಸಂಭೂತಂ ತಂ ನಮಾಮಿ ಶನೇಶ್ವರ ನಮಃ।।

ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ…….

ಜನನ ಹಾಗೂ ಮರಣ ದೈವಾನುಗ್ರಹ ಹಾಗೆಯೇ ಮೂಲ ನಕ್ಷತ್ರದಲ್ಲಿ ಹೆಣ್ಣಾಗಲಿ ಗಂಡಾಗಲಿ ಜನನವಾದರೆ ಅವರವರ ಶಕ್ತಿ ಅನುಸಾರವಾಗಿ ದೋಷ ನಿವಾರಣೆ ಪೂಜಾ ಮಾಡಿಸಿಕೊಳ್ಳಬೇಕು. ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ದೋಷ ಅಂಟುವುದು ಎಂಬುದರ ಬಗ್ಗೆ ಮಾಹಿತಿ ನೋಡೋಣ.
(1) ಮೂಲ ನಕ್ಷತ್ರದಲ್ಲಿ ಜನಿಸಿದರೆ ತಂದೆಗೆ ಸಮಸ್ಯೆಗೆ ಒಳಗಾಗುವ ಸಂಭವ.
(2) ಮೂಲಾ ನಕ್ಷತ್ರದಲ್ಲಿ 4ನೇ ಚರಣದಲ್ಲಿ ಜನಿಸಿದರೆ ಯಾವುದೇ ದೋಷ ಇರುವುದಿಲ್ಲ.

ಇದಕ್ಕಾಗಿ ಹಸು ಹಾಗೂ ಪುರೋಹಿತರನ್ನು ಕರೆದು ಪೂಜೆ ಸಲ್ಲಿಸಿ ಪುರೋಹಿತರಿಗೆ ನವಧಾನ್ಯ ,ವಸ್ತ್ರ ದಾನ ಮಾಡಬೇಕು. ಅದರ ಜೊತೆಗೆ ಹಸುವಿನ ಪೂಜೆ ಮಾಡಬೇಕು ಇದರಿಂದ ಮುಕ್ತಿ.

ಆರ್ಥಿಕವಾಗಿ ಉಳ್ಳವರು ನಕ್ಷತ್ರ ಹೋಮ ಶಾಂತಿ ಮಾಡಬಹುದು.

ಆರ್ಥಿಕಸ್ಥಿತಿ ಉತ್ತಮವಾಗಿದ್ದರೆ ಗೋದಾನ ಮಾಡಬಹುದು. ನನ್ನದನ್ನು ಮಾಡಬಹುದು.

ವಿವಾಹ ಕಾರ್ಯಕ್ಕೆ ಮೂಲ ನಕ್ಷತ್ರ ಅಡ್ಡಿಯೆ?

ಹೌದು ಮದುವೆ ವಿಳಂಬವಾಗುವ ಸಾಧ್ಯತೆ ಇರುತ್ತದೆ, ಅದಕ್ಕಾಗಿ ತಾವು ಸದಾ ಪೂಜೆ-ಪುನಸ್ಕಾರ ಅನ್ನದಾನ ಮಾಡಿ ಮುಕ್ತಿ ಹೊಂದಿರಿ ಇದಕ್ಕಾಗಿ
ಸಂಬಂಧಿಸಿದಂತೆ ತೊಂದರೆಗಳು ಆಗುತ್ತಿದ್ದಲ್ಲಿ ಈ ಮಂತ್ರ ಪಠಿಸಿರಿ. “ಓಂ ಹ್ರೀಂ ಸ್ವಯಂವರಪಾರ್ವತಿ ಜಪಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗ ಭಯಂಕರಿ ಸಕಲ ಸ್ಥಾವರಸ್ಯ ಜಂಗಮ ಮುಖ ಹೃದಯಂ ಮಮ ವಶಂ ಆಕರ್ಷಯ ಆಕರ್ಷಯ” ಈ ಮಂತ್ರವನ್ನು ನಿತ್ಯ ಜಪ ಮಾಡಿದರೆ ಎಷ್ಟು ದೊಡ್ಡ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಶೀಘ್ರ ವಿವಾಹ ಆಗುತ್ತದೆ.

________

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

ಮೇಷ ರಾಶಿ
ಖಾಸಗಿ ಕ್ಷೇತ್ರದಲ್ಲಿ ನಿರ್ವಹಿಸುವ ಉದ್ಯೋಗಿಗಳು ಸ್ಥಾನ ಬದಲಾವಣೆ ಬೇಡ, ಅಲ್ಲಿಯೇ ಮುಂದುವರೆಯಿರಿ.
ನೌಕರಿಗೆ ಬಯಸಿದವರು ಪೂರ್ವ ಸಿದ್ಧತೆ ಮಾಡಿಕೊಳ್ಳಿ.
ಆರೋಗ್ಯದ ಸಮಸ್ಯೆ ನಿಮಗೆ ಹೆಚ್ಚು ತೊಂದರೆ ನೀಡಬಹುದಾಗಿದೆ. ಎಲ್ಲರಲ್ಲೂ ಬೆರೆಯುವ ನಿಮ್ಮ ಸ್ವಭಾವ ಆಕರ್ಷಣೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತದೆ. ಮೋಜಿನ ಮತ್ತು ಮನರಂಜನೆಗಾಗಿ ಅವಕಾಶ ಸಿಗಲಿದೆ. ಹೆಚ್ಚುವರಿ ಜ್ಞಾನ ಪಡೆಯಲು ಸಶಕ್ತರಾಗಿ, ಕೌಶಲ್ಯಗಳಲ್ಲಿ ಸಮಯವನ್ನು ವಿನಿಯೋಗಿಸುವುದು ಸೂಕ್ತ. ನಿಮ್ಮ ಮಡದಿಯು ಇಂದು ನಿಮ್ಮ ಕಣ್ಣಿಗೆ ಅತಿಸುಂದರವಾಗಿ ಕಾಣುತ್ತಾರೆ. ನಿಮ್ಮಲ್ಲಿನ ಉತ್ಸಾಹದಿಂದ ಅನುಕೂಲಕರ ಪಲಿತಾಂಶ ಬರಲಿದೆ.
ಸೋಮಶೇಖರ್B.Sc
Mob.93534 88403

ವೃಷಭ ರಾಶಿ
ವಿದ್ಯಾರ್ಥಿಗಳು ಓದುವುದು ಕಡೆ ಗಮನವಿರಲಿ. ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣುವಿರಿ.ಹಣಕಾಸಿನ ಸಮಸ್ಯೆಗೆ ಉತ್ತಮ ಮಾರ್ಗಗಳನ್ನು ಯೋಚಿಸುತ್ತೀರಿ ಹಾಗೂ ಕಾರ್ಯಗಳನ್ನು ರಚನಾತ್ಮಕವಾಗಿ ಮಾಡಲಿದ್ದೀರಿ. ಬಾಲ್ಯ ಸ್ನೇಹಿತರನ್ನು ಸೇರಿಸಬಹುದಾದ ದಿನವಿದು. ಕುಟುಂಬದ ಸದಸ್ಯರೊಂದಿಗೆ ಒತ್ತಡದ ಪರಿಸ್ಥಿತಿಯನ್ನು ಅನುಭವಿಸುವ ಸಾಧ್ಯತೆ ಇದೆ. ಆದಷ್ಟು ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಮದುವೆ ಚಿಂತನೆ ಕಾಡಲಿದೆ.
ಸೋಮಶೇಖರ್B.Sc
Mob.93534 88403

ಮಿಥುನ ರಾಶಿ
ಪ್ರೇಮಿಗಳ ವಿವಾಹ ಕಾರ್ಯ ವಿಳಂಬ.ವ್ಯಾಪಾರಗಳಲ್ಲಿ ನಿಮ್ಮ ಸ್ವಂತ ಅಭಿಪ್ರಾಯವಿರಲಿ ಇತರರ ನಿರ್ಧಾರಗಳಿಗೆ ನೀವು ಮಣಿಯಬೇಡಿ. ಆತ್ಮೀಯರು ಇಂದು ನಿಮಗಾಗಿ ಉಡುಗೊರೆಯನ್ನು ನೀಡುವ ಸಾಧ್ಯತೆ ಕಂಡುಬರುತ್ತದೆ, ಇದು ನಿಮಗೆ ಆಶ್ಚರ್ಯ ತರುವುದು ನಿಶ್ಚಿತ. ಮಾಡುವ ಕೆಲಸದಲ್ಲಿ ಸುಲಭ ದಾಯಕ ವಿಚಾರಗಳು ನಡೆಯಲಿದೆ. ನಿಮ್ಮಲ್ಲಿನ ಅಪಾರ ವಿಶ್ವಾಸ ಮತ್ತು ಜ್ಞಾನದಿಂದ ಕೆಲಸದಲ್ಲಿ ಉತ್ತಮ ಬದ್ಧತೆ ತೋರಿಸುತ್ತೀರಿ. ಸಾಲಗಾರರಿಂದ ಕಿರಿಕಿರಿ ಸಂಭವ ನಿಮ್ಮ ಸಮಾಧಾನವೇ ಅಸ್ತ್ರ.
ಸೋಮಶೇಖರ್B.Sc
Mob.93534 88403

ಕರ್ಕಾಟಕ ರಾಶಿ
ಸ್ನೇಹಿತರ ಮೂಲಕ ಉದ್ಯೋಗ ಲಭಿಸುವುದು.ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮನೋಭಾವನೆಯಲ್ಲಿ ಇರುವಿರಿ. ಹೂಡಿಕೆಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ, ವ್ಯವಹಾರಗಳನ್ನು ನೋಡಿ ಸಹ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರ. ಬಂದು ವರ್ಗಗಳೊಡನೆ ವಿಶ್ವಾಸವನ್ನು ಕಾಯ್ದುಕೊಳ್ಳಿ. ಪಿತ್ರಾರ್ಜಿತ ಆಸ್ತಿ ಪಾಲುದಾರಿಕೆ ಗೊಂದಲ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಬಗ್ಗೆ ಚಿಂತನೆ.
ಸೋಮಶೇಖರ್B.Sc
Mob.93534 88403

ಸಿಂಹ ರಾಶಿ
ಮಾತಾಪಿತೃ ಆರೋಗ್ಯದಲ್ಲಿ ಕಿರಿಕಿರಿ.ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳು ಹಾಗೂ ಸಹವರ್ತಿಗಳಿಂದ ಪ್ರಶಂಸೆ ದೊರೆಯಲಿದೆ. ನಿಮ್ಮ ಅಭಿಪ್ರಾಯಗಳನ್ನು ಕಡೆಗಣನೆ ಮಾಡುವರು ಆದಷ್ಟು ಕೆಲಸದ ಬಗ್ಗೆ ಮಾತ್ರ ಚಿಂತನೆ ನಡೆಸಿ. ಹಣಕಾಸಿನ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಉತ್ತಮ ಆಹಾರ ಸೇವನೆಯು ಒಳಿತು. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಜರುಗುವುದು. ಹೊಸ ಉದ್ಯಮ ಪ್ರಾರಂಭ ಇಷ್ಟವಿದ್ದರೆ ಮಾಡಬಹುದು. ಪತ್ನಿಯ ಮಾರ್ಗದರ್ಶನದಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಶಿಕ್ಷಕದವರಿಗೆ ವರ್ಗಾವಣೆ ಚಿಂತನೆ ಕಾಡಲಿದೆ.
ಸೋಮಶೇಖರ್B.Sc
Mob.93534 88403

ಕನ್ಯಾ ರಾಶಿ
ಆರ್ಥಿಕತೆ ಉತ್ತಮವಾಗಿ ಇರಲಿದೆ, ಆದರೆ ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ಸರಿಯಲ್ಲ. ನಿಮ್ಮ ಆಕರ್ಷಕ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕಾರ್ಯದಲ್ಲಿ ದುಮುಕುವ ಸಾಧ್ಯತೆ ಇದೆ. ಆದಾಯದ ಪ್ರಮಾಣ ಹೆಚ್ಚಾಗಲಿದೆ. ಸಂಗಾತಿಯ ಮನ ಸಂತೋಷಪಡಿಸುವ ಕಾರ್ಯವನ್ನು ಮಾಡುವುದು ಉತ್ತಮ. ದೀರ್ಘಕಾಲದ ಆರೋಗ್ಯದ ಸಮಸ್ಯೆ ನಿವಾರಣೆ ಯಾಗುವ ಕಾಲ ಬಂದಿದೆ. ಹೊಸಮನೆ ಕಟ್ಟಡ ನಿರ್ಮಾಣದ ಚಿಂತನೆ ಮಾಡಲಿದ್ದೀರಿ. ಉದ್ಯಮ ದಾರರಿಗೆ ಕೊಂಚ ನೆಮ್ಮದಿ ಪ್ರಾಪ್ತಿ, ಆರ್ಥಿಕ ಸ್ಥಿತಿ ಪುನಶ್ಚೇತನ ವಾಗಲಿದೆ.
ಸೋಮಶೇಖರ್B.Sc
Mob.93534 88403

ತುಲಾ ರಾಶಿ
ಸಮಾಜದಲ್ಲಿ ಅಗೌರವ ಮನಸ್ತಾಪ.ಜನರೊಂದಿಗೆ ಬೆರೆಯುವುದರಿಂದ ನೀವು ಮತ್ತಷ್ಟು ಕಳೆಯಲಿದ್ದೀರಿ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ವಾಗಬಹುದು. ಸಮಯದ ಅಭಾವ ನಿಮ್ಮ ಕಾರ್ಯಗಳಲ್ಲಿ ಕಾಣಬಹುದು. ಮಡದಿಯ ಸೌಂದರ್ಯವನ್ನು ನೀವು ಹೊಗಳಲಿದ್ದೀರಿ. ಆರ್ಥಿಕ ವ್ಯವಹಾರಗಳನ್ನುಉತ್ತಮವಾಗಿ ಪ್ರಸ್ತುತಪಡಿಸಲು ರೂಪರೇಷೆ ಅಗತ್ಯವಿದೆ. ರಾಜಕಾರಣಿಗಳಿಗೆ ಶುಭಸುದ್ದಿ ಪ್ರಾಪ್ತಿ. ಯುವ ರಾಜಕಾರಣಿಗೆ ರಾಜಕೀಯದಲ್ಲಿ ಪ್ರವೇಶದ ಚಿಂತನೆ ಕಾಡಲಿದೆ. ಕೃಷಿಕರು ಆಧುನೀಕರಣದ ವ್ಯವಸಾಯದ ಬಗ್ಗೆ ಚಿಂತನೆ ಮಾಡಲಿದ್ದೀರಿ.
ಸೋಮಶೇಖರ್B.Sc
Mob.93534 88403

ವೃಶ್ಚಿಕ ರಾಶಿ
ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ.ಕೌಟುಂಬಿಕ ಸಮಸ್ಯೆಗಳು ನಿಮಗೆ ಬಾದೆ ನೀಡಬಹುದು. ನಿಂತಿರುವ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿಮ್ಮ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಕಂಡು ಬರಲಿದೆ. ಕ್ಷಮಿಸುವ ಗುಣಗಳಿಂದ ನಿಮ್ಮ ವ್ಯಕ್ತಿತ್ವವನ್ನು ದೊಡ್ಡಮಟ್ಟದಲ್ಲಿ ಬೆಳೆಸಿಕೊಳ್ಳುತ್ತೀರಿ. ಭವಿಷ್ಯದ ಭದ್ರ ಬುನಾದಿಯ ಯೋಜನೆಗಳನ್ನು ಮಾಡುವ ಸಾಧ್ಯತೆ ಇದೆ. ಕೆಲವು ವ್ಯವಹಾರಗಳು ಹಣಕಾಸಿನ ಸಮಸ್ಯೆಯಿಂದ ಕೂಡಿರಬಹುದು. ಸಹೋದರಿಯರಿಂದ ಆಸ್ತಿ ಪಾಲುದಾರಿಕೆಯ ಬೇಡಿಕೆ ಸಂಭವ. ನಿಂತುಹೋದ ಶುಭಮಂಗಳ ಕಾರ್ಯ ಮರಳಿ ಬರುವುದು. ನಿಮಗೆ ಉದ್ಯೋಗ ಪ್ರಾಪ್ತಿ ಸಿಗಲಿದೆ. ಕುಟುಂಬದಲ್ಲಿ ಸಂತಾನದ ಸಿಹಿಸುದ್ದಿ ಕೇಳುವಿರಿ.
ಸೋಮಶೇಖರ್B.Sc
Mob.93534 88403

ಧನಸ್ಸು ರಾಶಿ
ಹೊಸ ವಾಹನ ಖರೀದಿ ಲಭಿಸುವುದು. ಸಂತಾನದ ಸಮಸ್ಯೆ ಕಾಡಲಿದೆ. ದಂಪತಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆವಹಿಸಿ. ತುಂಬಿ ಗರ್ಭಿಣಿಯರು ಜಾಗೃತಿವಹಿಸಿ.
ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ನೀವು ತ್ವರಿತವಾಗಿ ಹಣ ಮಾಡುವ ಬಯಕೆಯಿಂದ ಇನ್ನೊಬ್ಬರ ಮಾತುಗಳನ್ನು ಕೇಳಿ ಕಷ್ಟದಲ್ಲಿ ಸಿಲುಕಬೇಡಿ. ಬಂಧುವರ್ಗದವರೊಡನೆ ಆದಷ್ಟು ಪ್ರೇಮ ಮಯದ ವರ್ತನೆ ತೋರಿಸುವುದು ಸೂಕ್ತ. ಕೆಲವರು ನಿಮ್ಮನ್ನು ವಿನಾಕಾರಣ ಕೆಣಕಬಹುದು ನಿಮ್ಮ ತಾಳ್ಮೆಕಳೆದುಕೊಳ್ಳಬೇಡಿ. ಕದನ ಕಲಹದಂತಹ ವಿಷಯಗಳಿಂದ ಆದಷ್ಟು ದೂರವಿರುವುದು ಸೂಕ್ತ. ವಿರೋಧಿಗಳಲ್ಲಿ ಒಳಸಂಚು ಸಂಭವ. ಏಕಾಂಗಿತನ ಬೇಡ. ಅಕ್ಕ-ಪಕ್ಕ ಮಾಲೀಕರಿಂದ ತೊಂದರೆ ಕಾಡಲಿದೆ.
ಸೋಮಶೇಖರ್B.Sc
Mob.93534 88403

ಮಕರ ರಾಶಿ
ಪ್ರೇಮಪರ್ವ ಮನಸ್ತಾಪ ಪ್ರಾಯಶ್ಚಿತ್ತ.ಒಂದು ಗುಂಪಿನ ಮುಂದಾಳತ್ವವನ್ನು ವಹಿಸುವ ಸಾಧ್ಯತೆ ಕಾಣಬಹುದು. ಕಳೆದುಹೋಗಿರುವ ವಸ್ತುಗಳು ಆಕಸ್ಮಿಕವಾಗಿ ಸಿಗಬಹುದಾದ ಸಾಧ್ಯತೆ ಇದೆ. ಸಂಗಾತಿ ನಿಮ್ಮ ಪ್ರೀತಿಗಾಗಿ ಹಂಬಲಿಸುತ್ತಾರೆ ಅವರನ್ನು ಹತಾಶೆ ಮಾಡದಂತೆ ನೋಡಿಕೊಳ್ಳುವುದು ಒಳ್ಳೆಯದು. ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಸಮಾಜದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುವುದು. ದೀರ್ಘಕಾಲದ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಸುಗಮ ರೀತಿಯಲ್ಲಿ ಯಶಸ್ಸು ಕಾಣುವಿರಿ. ಹಣಕಾಸಿನ ಗೊಂದಲ ನಿವಾರಣೆಯಾಗುವ ಸಮಯ ಬಂದಿದೆ. ಹೊಸ ಉದ್ಯಮ ಪ್ರಾರಂಭ ಮಾಡಿದರೆ ಒಳಿತಾಗುವುದು.
ಸೋಮಶೇಖರ್B.Sc
Mob.93534 88403

ಕುಂಭ ರಾಶಿ
ಹೊಸ ಜಮೀನು ಖರೀದಿ ಹಾಗೂ ಹೊಸ ನಿವೇಶನ ಖರೀದಿ.ಅತಿ ಸಣ್ಣ ವಿಷಯಗಳನ್ನು ನಿರ್ಲಕ್ಷ ಮಾಡುವುದು ಸರಿಯಲ್ಲ ಮುಂದೆ ಅದು ದೊಡ್ಡ ಪ್ರಮಾಣದಲ್ಲಿ ನಿಮಗೆ ಕಾಡಬಹುದು. ಹೊಸ ಆರ್ಥಿಕ ಒಪ್ಪಂದಗಳು ಈ ದಿನ ನಿರೀಕ್ಷಿಸಬಹುದಾದ ಸಾಧ್ಯತೆ ಇದೆ. ಬಾಕಿ ಪಾವತಿಗಳನ್ನು ಯಶಸ್ವಿಯಾಗಿ ನಡೆದುಕೊಳ್ಳುವಿರಿ. ಕುಟುಂಬದಿಂದ ಶುಭಸುದ್ದಿ ವಾತಾವರಣ ಇರಲಿದೆ. ಯಾವುದೋ ಒತ್ತಡದ ನಡುವೆಯೂ ಸಹ ಈ ದಿನ ನಿಮ್ಮಲ್ಲಿ ಕೃತಕವಾದ ನಗು ಮೂಡಬಹುದು ಒತ್ತಡವನ್ನು ಆದಷ್ಟು ಬೇಗಪರಿಹರಿಸಿಕೊಳ್ಳಲು ಮುಂದಾಗಿ. ನಿಮ್ಮ ನೇತೃತ್ವದಲ್ಲಿ ಧರ್ಮದ ಕಾರ್ಯಕ್ರಮ ಜರುಗುವುದು. ಸಂಜೆಯೊಳಗೆ ಧನಪ್ರಾಪ್ತಿ ಲಭ್ಯವಾಗಲಿದೆ. ಸಾಲ ಕೇಳಲು ಸೂಕ್ತ ಸಮಯ. ಕುಲಕಸುಬುದಾರರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ. ಮದುವೆ ಪ್ರಸ್ತಾಪ ಮಾಡಿದರೆ ಒಳಿತು.
ಸೋಮಶೇಖರ್B.Sc
Mob.93534 88403

ಮೀನ ರಾಶಿ
ಮಕ್ಕಳ ಮದುವೆ ಕಾರ್ಯ ಚಿಂತನೆ. ಪ್ರೇಮಿಗಳ ಮದುವೆಗೆ ವಿರೋಧ.ಪ್ರವಾಸದ ಯೋಜನೆಗಳು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳದಿರುವುದು ಸೂಕ್ತ, ಮಾತಿನ ಭರದಲ್ಲಿ ಗುಟ್ಟು ರಟ್ಟಾಗ ಬಹುದು ಎಚ್ಚರದಿಂದ ಇರುವುದು ಲೇಸು. ಮರಳಿ ಯತ್ನವ ಮಾಡು ಮುಂದೆ ಫಲ ನೀಡುವುದು, ಕೆಲಸದಿಂದ ಹಿಂದೆ ಸರಿಯಬೇಡಿ ಮತ್ತು ಹಿಂದಿನದನ್ನು ಯೋಚಿಸುತ್ತಾ ಕೂರಬೇಡಿ, ಸಾಧಿಸಲು ಹಲವಾರು ಮಾರ್ಗಗಳಿವೆ ನಿಮ್ಮ ಮನಸ್ಸನ್ನು ಪರಿಪಕ್ವಗೊಳಿಸಿಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ. ಇಂದು ಹಣ ಹೂಡಿಕೆಗೆ ಸೂಕ್ತ ದಿನವಾಗಿದೆ. ಬೆಲೆಬಾಳುವ ಆಭರಣ ಖರೀದಿಸುವಿರಿ. ನಿವೇಶನ ಖರೀದಿಸುವಿರಿ. ಹಳೆಯ ಮನೆ ವಾಸ್ತು ಪ್ರಕಾರ ಬದಲಾಯಿಸು ವಿರಿ. ಕೃಷಿ ಭೂಮಿಯಲ್ಲಿ ಬೋರ್ವೆಲ್ ಕೊರೆಯುವ ಸಾಧ್ಯತೆ. ಕೃಷಿಕರಿಗೆ ಧನಲಾಭ.
ಜ್ಯೋತಿಷ್ಯರು.
ಸೋಮಶೇಖರ್B.Sc
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

ದಾವಣಗೆರೆ

Advertisement
Advertisement Enter ad code here

Title

To Top