Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಗುರುವಾರ ರಾಶಿ ಭವಿಷ್ಯ-ಅಕ್ಟೋಬರ್-22,2020

  • ಸರಸ್ವತಿ ಪೂಜಾ
  • ಸೂರ್ಯೋದಯ: 06:14, ಸೂರ್ಯಸ್ತ: 17:53
  • ಶಾರ್ವರಿ ನಾಮ ಸಂವತ್ಸರ
  • ಆಶ್ವಯುಜ ದಕ್ಷಿಣಾಯಣ
  • ತಿಥಿ: ಷಷ್ಠೀ – 07:39 ವರೆಗೆ
  • ನಕ್ಷತ್ರ: ಪೂರ್ವ ಆಷಾಢ – 24:58+ ವರೆಗೆ
  • ಯೋಗ: ಸುಕರ್ಮ – 26:36+ ವರೆಗೆ
  • ಕರಣ: ತೈತಲೆ – 07:39 ವರೆಗೆ ಗರಜ – 19:12 ವರೆಗೆ
  • ದುರ್ಮುಹೂರ್ತ: 10:07 – 10:54
    ದುರ್ಮುಹೂರ್ತ : 14:47 – 15:33
  • ರಾಹು ಕಾಲ: 13:30 – 15:00
  • ಯಮಗಂಡ: 06:00 – 07:30
  • ಗುಳಿಕ ಕಾಲ: 09:00 – 10:30
  • ಅಮೃತಕಾಲ: 20:13 – 21:48
  • ಅಭಿಜಿತ್ ಮುಹುರ್ತ: 11:40 – 12:27
    _________

ನಿಮ್ಮ ಜನ್ಮಕುಂಡಲಿಯ ಕುಜದೋಷದ ಬಗ್ಗೆ ಮಾಹಿತಿ.

ಜನ್ಮ ಕುಂಡಲಿಯಲ್ಲಿ ಯಾವ ಯಾವ ಮನೆಯಲ್ಲಿ ಕುಜ( ಮಂಗಳ, ಮಾಂಗಲೀಕ) ಇದ್ದರೆ ಕುಜದೋಷ ಪರಿಣಾಮ ಬೀರುವುದು ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ..

ಮದುವೆಗೂ ಮುನ್ನ ಗಂಡು-ಹೆಣ್ಣಿನ ಜಾತಕವನ್ನು ಪರೀಕ್ಷಿಸಬೇಕು. ಒಂದು ವೇಳೆ ಕುಜ ದೋಷ ಇದ್ದರೆ, ಕುಜದೋಷ ಇರುವಂತವರ ಜೊತೆ ಮದುವೆ ಮಾಡಬೇಕು. ಕುಜ ದೋಷವಿದ್ದರೆ ಅದು ಮದುವೆ ಹಾಗೂ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆದರೆ ನಮ್ಮ ಜಾತಕದ ಕೆಲವೊಂದು ಮನೆಯಲ್ಲಿ ಮಂಗಳನಿದ್ದರೆ ಕುಜದೋಷ ಪರಿಣಾಮ ಬೀರುವುದಿಲ್ಲ.

ಮಂಗಳ ಗ್ರಹವು ವೈವಾಹಿಕ ಜೀವನದಲ್ಲಿ ಬಹಳ ಸಂತೋಷ ಹಾಗೂ ಮದುವೆಗೆ ನೇರ ಹೊಣೆಯಾಗಿರುವನು. ದಾಂಪತ್ಯದ ಜೀವನದಲ್ಲಿ ಮಂಗಳನ ಪ್ರಭಾವವು ದಂಪತಿಗಳ ನಡುವೆ ಸುಖ ಹಾಗೂ ಕಷ್ಟ ಅನುಭವಿಸುವವರು. ಅದೇ ಮಂಗಳನು ಅಶುಭ ಸ್ಥಾನದಲ್ಲಿದ್ದಾಗ ಎಲ್ಲವನ್ನು ಕಳೆದುಕೊಂಡು ಕಷ್ಟದಲ್ಲಿರುವ ಹಾಗೆ ಮಾಡುವನು. ಹಾಗಾಗಿಯೇ ಮದುವೆಗೂ ಮುನ್ನ ಕುಂಡಲಿ ಅಥವಾ ಜಾತಕ ನೋಡುವಾಗ ಕುಜ ದೋಷವಿದೆಯೇ ಎನ್ನುವುದನ್ನು ನೋಡುತ್ತಾರೆ. ಈ ದೋಷವನ್ನು ಕುಜ ದೋಷ, ಮಾಂಗಲಿಕ ದೋಷ, ಮಂಗಲ ದೋಷ ಅಥವಾ ಭೌಮ ದೋಷವೆಂದೂ ಕರೆಯುತ್ತಾರೆ.

ಜಾತಕದಲ್ಲಿ ಮಂಗಳದೋಷ
ಜಾತಕದಲ್ಲಿ ಮಂಗಳನು ವಧು ವರರ ಎರಡನೇ ಮನೆಯಲ್ಲಿದ್ದರೆ ಮಂಗಳ ದೋಷವು ರೂಪುಗೊಳ್ಳುತ್ತದೆ. ಅದೇ ಉತ್ತರ ಭಾರತದ ಕಡೆ 1,4,7,8 ಅಥವಾ 12ನೇ ಮನೆಯಲ್ಲಿದ್ದರೆ ಕುಜ ದೋಷವು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ವಧು ವರರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು.

ಯಾವುದೇ ಶುಭ ಗ್ರಹಗಳೊಂದಿಗೆ ಮಂಗಳ ಗ್ರಹವು ಇಲ್ಲದಿದ್ದಾಗ ವ್ಯಕ್ತಿಯ ಜೀವನದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಈ ಗ್ರಹವು ಶುಭ ಗ್ರಹಗಳ ಅಂಶವನ್ನು ಹೊಂದಿದ್ದರೆ ಅಥವಾ ಬುಧ, ಗುರು ಮತ್ತು ಶುಕ್ರನಸಂಯೋಗವನ್ನು ಹೊಂದಿದ್ದರೆ ದಾಂಪತ್ಯಜೀವನದಲ್ಲಿ ಮಂಗಳನು ಮಾರಕನಾಗುವುದಿಲ್ಲ.

ಕುಜನು ಯಾವ್ಯಾವ ಮನೆಯಲ್ಲಿದ್ದರೆ ಕುಜದೋಷ ಸಂಭವಿಸುವುದು? ಕುಜದೋಷಕ್ಕೆ ಏನು ಪರಿಹಾರ ಗೊತ್ತಾ?

ಜಾತಕದಲ್ಲಿನ ಮನೆಗಳು ಅಂದರೆ
ಜಾತಕದಲ್ಲಿ 1,2,4,7,8 ಮತ್ತು 12ನೇ ಮನೆಗಳು ವೈವಾಹಿಕ ಜೀವನವನ್ನು ಲೆಕ್ಕಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ಒಂದನೇ ಮನೆ ತನು ಅಂದರೆ ಆರೋಗ್ಯವನ್ನು ಸೂಚಿಸಿದರೆ, ಎರಡನೇ ಮನೆ ಧನ ಅಂದರೆ ಸಂಪತ್ತು, ಮೂರನೇ ಮನೆ ಕುಟುಂಬ ಅಂದರೆ ಭಾತೃ/ ಸಹೋದರ, ಮಾತು ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಇದರ ಜೊತೆಗೆ ನಾಲ್ಕನೇ ಮನೆ ಸಂತೋಷ ಮತ್ತು ಭೌತಿಕಸುಖವನ್ನು ಪ್ರತಿನಿಧಿಸುತ್ತದೆ. ಏಳನೇ ಮನೆ ಮದುವೆ ಅಂದರೆ ವೈವಾಹಿಕ ಜೀವನ ಮತ್ತು ಪತ್ನಿಯೊಂದಿಗೆ ಸಂಬಂಧವನ್ನು ಸೂಚಿಸುತ್ತದೆ.

ಎಂಟನೇ ಮನೆಯು ಆಯಸ್ಸು, ವಧುವಿಗೆ ಅದೃಷ್ಟ ಹಾಗೂ ಯೋಗದ ಮನೆಯಾಗಿ ಮುಖ್ಯವಾಗಿದೆ. ಇದು ಮಹಿಳೆಯ ಗಂಡ ಮತ್ತು ಆಯಸ್ಸನ್ನು ಸೂಚಿಸುತ್ತದೆ. ಜೊತಗೆ ಇದು ಸಂತೋಷವನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಹೇಳುವಂತೆ ಮಂಗಳ ದೋಷವನ್ನು ನಿವಾರಿಸಲು ಸಾಧ್ಯವಿಲ್ಲ,ಆದರೆ ಪೂಜಾ ಶಾಂತಿ ಮಾಡಿಸುವುದರ ಮೂಲಕ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ ದಾನ ,ಧರ್ಮ, ದೈವಭಕ್ತಿ ಮೂಲಕ ಕೆಲವೊಬ್ಬರ ಜಾತಕದಲ್ಲಿ ಮಾಂಗಲಿಕ ದೋಷವು ತನ್ನಿಂದ ತಾನಾಗಿಯೇ ನಿವಾರಣೆಯಾಗುತ್ತದೆ.

ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ

ಈ ಕೆಳಕಂಡ ರಾಶಿಯಲ್ಲಿದ್ದಾಗ ಮಂಗಳನು ಪರಿಣಾಮ ಬೀರುವುದಿಲ್ಲ.

ಮಂಗಳ ಗ್ರಹವು ಈ ನಾಲ್ಕು ರಾಶಿಚಿಹ್ನೆಗಳಲ್ಲಿದ್ದಾಗ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಆ ರಾಶಿಗಳು ಯಾವುದೆಂದರೆ ಮೇಷ, ಕಟಕ, ತುಲಾ ಮತ್ತು ಮಕರ ರಾಶಿ. ಮಂಗಳನು ತನ್ನದೇ ಅಧಿಪತ್ಯವಿರುವ ರಾಶಿಗಳಾದ ಮೇಷ ಮತ್ತು ವೃಶ್ಚಿಕ ರಾಶಿ ಹಾಗೂ ಪ್ರಭಾವಶಾಲಿ ರಾಶಿಯಾದ ಮಕರದಲ್ಲಿದ್ದಾಗ ದುರುದ್ದೇಶಪೂರಿತ ಫಲವನ್ನು ನೀಡುವುದಿಲ್ಲ. ಆ ರಾಶಿಯಲ್ಲಿದ್ದಾಗ ಮಂಗಳ ದೋಷವು ನಿವಾರಣೆಯಾಗುತ್ತದೆ.

ಮಂಗಲ ದೋಷ
ಅದೇ ರೀತಿ ಸೂರ್ಯ, ಚಂದ್ರ ಮತ್ತು ಗುರುವಿನಂತಹ ಸ್ನೇಹಪರ ಗ್ರಹಗಳ ಸಂಯೋಜನೆಯಲ್ಲಿಯೂ ಮಂಗಳ ದೋಷ ಅಥವಾ ಕುಜ ದೋಷವು ನಡೆಯುವುದಿಲ್ಲ. ಜೊತೆಗೆ ಕಟಕ ರಾಶಿಯಲ್ಲೂ ಇದ್ದಾಗ ಮಂಗಳನು ದೋಷವನ್ನುಂಟು ಮಾಡುವುದಿಲ್ಲ. ಜಾತಕದ ಕೇಂದ್ರ ಮನೆಯಲ್ಲಿ ಚಂದ್ರನಿದ್ದಾಗಲೂ ಕುಜನ ದೋಷ ಪರಿಣಾಮ ಬೀರದು.

ಮಂಗಳನ ದೋಷಪೂರಿತ ಪರಿಣಾಮ
ಜಾತಕದಲ್ಲಿ ಮಂಗಳನು ಕೆಟ್ಟ ಸ್ಥಾನದಲ್ಲಿದ್ದರೆ ಅದು ವ್ಯಕ್ತಿಯ ವಿನಾಶಕ್ಕೆ ಕಾರಣವಾಗುತ್ತದೆ. ಆದರೆ ಶುಭ ಗ್ರಹ ಅಥವಾ ಸೂರ್ಯನೊಂದಿಗೆ ಮಂಗಳನು ವಕ್ರಿಯಾಗಿದ್ದರೆ ಕುಜ ದೋಷವು ಉಂಟಾಗುವುದಿಲ್ಲ. ಉತ್ತರ ಭಾರತದ ಪ್ರಕಾರ ಮಂಗಲ ದೋಷವು ಒಂದೇ ಮನೆಯಲ್ಲಿ ಅಥವಾಆ ಲಗ್ನದ ಮನೆಯಲ್ಲಿ ಮಂಗಳನಿದ್ದಾಗ ಸಂಭವಿಸುತ್ತೆ. ದಕ್ಷಿಣ ಭಾರತದಲ್ಲಿ ಕುಂಡಲಿಯ ಎರಡನೇ ಮನೆಯಲ್ಲಿ ಮಂಗಳನಿದ್ದರೆ ಕುಜ ದೋಷವೆನ್ನಲಾಗುತ್ತದೆ.

 

ಎರಡನೇ ಮನೆಯಲ್ಲಿ ಮಂಗಳನಿದ್ದರೆ ಕುಜ ದೋಷವಿರುತ್ತದೆ. ಇದು ಪುರುಷರಲ್ಲೂ, ಮಹಿಳೆಯರಲ್ಲೂ ಕಂಡು ಬರುವ ದೋಷವಾಗಿದೆ. ಮಹಿಳೆಯರ ಜಾತಕದಲ್ಲಿ 1,2, 4,5,7, 8, ಮತ್ತು 12ನೇ ಮನೆಯಲ್ಲಿ ಮಂಗಳನಿದ್ದರೆ ಮಾಂಗಲಿಕ ದೋಷ ಕಂಡುಬರುತ್ತದೆ. 8ನೇ ಮನೆಯು ಮಾಂಗಲ್ಯವನ್ನು ಪ್ರತಿನಿಧಿಸುವ ಮನೆಯಾದ್ದರಿಂದ ಮಹಿಳೆಯರಿಗೆ ಏಳನೇ ಮನೆಯಷ್ಟೇ ಎಂಟನೇ ಮನೆಯೂ ಬಹಳ ಮುಖ್ಯವಾಗಿರುತ್ತದೆ.

ನಿಖರವಾಗಿ ಮಂಗಳ ದೋಷವನ್ನು ಲಗ್ನ ಕುಂಡಲಿ, ಚಂದ್ರ ಮತ್ತು ಶುಕ್ರ ಕುಂಡಲಿಯಿಂದ ಲೆಕ್ಕ ಹಾಕಲಾಗುತ್ತದೆ. ಅದರ ಪರಿಣಾಮವನ್ನು ನಿರ್ಧರಿಸುವ ಮೂಲಕ, ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.

ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
:::::::::::::::::::::::::::::::::::::::::::

ಇಂದಿನ ರಾಶಿ ಭವಿಷ್ಯ

ಮೇಷ
ಆತ್ಮಸ್ಥೈರ್ಯದಿಂದ ರಾಜಕೀಯದಲ್ಲಿ ಪ್ರವೇಶ.
ಆತ್ಮಸ್ಥೈರ್ಯ ಮುನ್ನುಗ್ಗಿ ಜಯ ನಿಮ್ಮದು. ಸಂಗಾತಿ ನಿಮಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳುವರು ಹಾಗೂ ಮದುವೆ ಮಾರ್ಗದರ್ಶನ ಮಾಡುವಳು. ಬಂದು ಬಾಂಧವರಿಂದ ಜಾಣತನದಿಂದ ಸಹಾಯ ಪಡೆದು ಅರ್ಧಕ್ಕೆ ನಿಂತಿದ್ದ ಕಟ್ಟಡ ಪೂರ್ಣಗೊಳಿಸುವಿರಿ. ಆಸ್ತಿ ಬಗ್ಗೆ ತೊಂದರೆ ಕೊಡುತ್ತಿದ್ದ ಸೋದರಿಯರು ರಾಜಿ ಆಗುವರು. ಚರ್ಮದ ಕಾಯಿಲೆ ವೈದ್ಯರ ಮಾರ್ಗದರ್ಶನ ಪಡೆಯಿರಿ. ಸಂಗಾತಿಗೆ ಅವರ ಕಡೆಯವರಿಂದ ಧನಸಹಾಯ ಬರಬಹುದು. ವೃತ್ತಿಯಲ್ಲಿ ಸ್ವಲ್ಪ ಮಧ್ಯಸ್ಥಿಕೆ ಜನರಿಂದ ಒತ್ತಡ ಕಾಣಬಹುದು. ಸಾಹಿತಿಗಳ ಬರಹಗಾರರ ಕೃತಿಗಳು ಮುದ್ರಣ ಕಾಣುತ್ತವೆ. ಸಿದ್ಧ ಉಡುಪು ತಯಾರಿಸುವವರಿಗೆ ಧನಲಾಭ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ವೃಷಭ
ನವ ಯುವಕರಿಗೆ ರಾಜಕೀಯದಲ್ಲಿ ಪ್ರವೇಶದ ಚಿಂತನೆ ಮಾಡುವಿರಿ.
ಬಹಳ ಉಲ್ಲಾಸದಿಂದ ಪತಿ-ಪತ್ನಿ ಇರುವಿರಿ. ಆಕಸ್ಮಿಕ ಧನಪ್ರಾಪ್ತಿ. ವ್ಯಾಪಾರದಲ್ಲಿ ಹಣಕಾಸಿನ ಹರಿವು ಏರುವಿಕೆಯ ಬಗ್ಗೆ ಸಮಾಚಾರ ದೊರೆಯುತ್ತದೆ. ರಾಜಕಾರಣಿಗಳಿಗೆ ಭಾಷಣ ದಿಂದ ಉತ್ತಮ ವೇದಿಕೆ ಹಾಗೂ ಜನ ಆಕರ್ಷಣೆ ಭಾಗ್ಯ. ಜನಮನ್ನಣೆ ಗಳಿಸುವರು. ಮಾಡುವ ಕೆಲಸಗಳಲ್ಲಿ ಪಾದರಸದಂತೆ ಕೆಲಸ ಮಾಡುವಿರಿ. ಆಸ್ತಿ ಮಾರಾಟದಿಂದ ಧನವನ್ನು ಒಗ್ಗೂಡಿಸುವಿರಿ ಅದೇ ಧನಸಂಗ್ರಹದಿಂದ ಹೊಸ ಮನೆ ಕಟ್ಟುವ ಭಾಗ್ಯ. ಮಕ್ಕಳಿಗೆ ಅಥವಾ ಮಾತಾಪಿತೃ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ಗರ್ಭಿಣಿ ಸ್ತ್ರೀಯರು ಪ್ರಸೂತಿ ತಜ್ಞರಿಗೆ ಬೇಟಿ ಸಂಭವ. ಉದ್ಯೋಗದಲ್ಲಿ ಯಾವುದೇ ಬದಲಾವಣಿ ಬೇಡ. ಕೃಷಿಕರಿಗೆ ಬೆಳೆಗೆ ತಕ್ಕ ಧನ ಲಾಭ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮಿಥುನ
ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ನಿಮ್ಮ ಹೆಸರೇ ಹೆಚ್ಚಾಗಿ ಪ್ರಸ್ತಾಪ ಬರಲಿದೆ.
ಕೆಲಸದಲ್ಲಿ ಜಡತ್ವ ಇರಬಹುದು. ತಾಯಿಗಾಗಿ ಅಥವಾ ಹಿರಿಯ ಅಕ್ಕನಿಗಾಗಿ ಆರೋಗ್ಯ ದೃಷ್ಟಿಯಿಂದ ಹಣ ಖರ್ಚು ಮಾಡಬೇಕಾಗಬಹುದು. ಹಳೆಯ ಸಾಲ ಹಂತಹಂತವಾಗಿ ಮರುಪಾವತಿ. ಚಾಡಿ ಮಾತಿನಿಂದ ನಿಮ್ಮ ಬಾಂಧವ್ಯ ಕಳೆದುಕೊಳ್ಳಬೇಡಿ. ಸಂಬಂಧಿಸಿದ ಬೀಜ ಉತ್ಪಾದಕರಿಗೆ ಉತ್ತಮ ಬೇಡಿಕೆ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಬೆಳವಣಿಗೆ ಸಹಿಸದವರು ಇರುತ್ತಾರೆ ಜಾಗ್ರತೆವಹಿಸಿ. ಸಂಗಾತಿಯ ಸಂತೋಷಕ್ಕಾಗಿ ಪ್ರೇಮದ ಕಾಣಿಕೆ ನೀಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕರ್ಕಾಟಕ
ಧನ ಸಮತೋಲನ ಕಾಯ್ದುಕೊಳ್ಳಿ. ವಿರೋಧಿಗಳಿಂದ ರಾಜೀ ಮೂಲಕ ತಾವು ರಾಜಕೀಯ ಪ್ರವೇಶ ಆಗುವುದು ಖಚಿತ. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಪ್ರಸ್ತಾಪ. ಅಹಂಕಾರದಿಂದ ನೀವಾಡುವ ಮಾತು ನಿಮಗೇ ತಿರುಗುಬಾಣವಾಗಬಹುದು. ಒಡಹುಟ್ಟಿದವರು ನಿಮಗೆ ವಿರೋಧಿಸುವವರು. ಸ್ತ್ರೀಯರು ನಡೆಸುವ ವ್ಯವಹಾರಗಳು ನಿಧಾನವಾಗಿ ಪ್ರಗತಿ. ಹೊಟ್ಟೆಯಲ್ಲಿ ದೋಷ ಕಾಣಬಹುದು. ಪತಿ-ಪತ್ನಿ ಒದಗುವ ಭಾಗ್ಯ. ಸ್ನೇಹಿತರ ಮೂಲಕ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನೌಕರಿಗಾಗಿ ಕೊಟ್ಟಿರುವ ದುಡ್ಡು ವಿಳಂಬ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಸಿಂಹ
ಬಹುದಿನಗಳಿಂದ ಕಾಡುತ್ತಿದ್ದ ರಾಜಕೀಯ ಪ್ರವೇಶ, ಇಂದು ಕನಸು ನನಸಾಗುವ ಸಂಭವ ಹತ್ತಿರದಲ್ಲಿದೆ.
ಬಹುದಿನದಿಂದ ನಿಂತಿದ್ದ ವ್ಯವಹಾರಗಳು ಈಗ ಪುನಃ ಆರಂಭವಾಗುತ್ತವೆ. ಆಸ್ತಿಯ ಸಂಬಂಧಪಟ್ಟ ಕಾಗದ ಪತ್ರ ತಲೆನೋವು ಆಗಲಿದೆ . ವ್ಯಾಪಾರದಲ್ಲಿ ಒಳಹರಿವು ನಿಧಾನವಾಗಿ ಆರಂಭವಾಗುತ್ತದೆ. ಉದ್ಯೋಗದಲ್ಲಿ ಸ್ತ್ರೀ ಮೇಲಧಿಕಾರಿಯಿಂದ ನಿಮಗೆ ಕಿರಿಕಿರಿ ಸಾಧ್ಯತೆ. ನಿಮಗೆ ಶಸ್ತ್ರಚಿಕಿತ್ಸೆ ಸಂಭವ ವೈದ್ಯರ ಸಲಹೆ ಪಡೆಯುವುದು ಉತ್ತಮ. ಮಕ್ಕಳ ನಡುವಿನ ಹೊಂದಾಣಿಕೆ ದೊಡ್ಡ ತಲೆನೋವು ಆಗಲಿದೆ. ನಿಮಗೆ ಮೂಳೆ ನೋವು ಅಥವಾ ಶೀತ ಬಾಧೆ ಕಾಣಬಹುದು. ಸಂಗಾತಿಯು ನಿಮ್ಮೊಡನೆ ಮನಬಿಚ್ಚಿ ಮಾತನಾಡುವರು. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಉತ್ತಮ ಧನಲಾಭ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕನ್ಯಾ
ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ,ಅಲ್ಲಿಂದ ನಿಮಗೆ ರಾಜಕೀಯ ಪ್ರವೇಶಕ್ಕಾಗಿ ಮನಸ್ಸು ಬರಲಿದೆ.
ಹಂಗಾಮಿ ವೃತ್ತಿಯಲ್ಲಿದ್ದ ಕೆಲವರಿಗೆ ಕೆಲಸ ಕಾಯಂ ಆಗುವ ಒಬ್ಬ ಅಧಿಕಾರಿಯಿಂದ ವಿಳಂಬ. ಹಿರಿಯರ ಮಾರ್ಗದರ್ಶನದಿಂದ ಉದ್ಯೋಗದ ಸಾಧ್ಯತೆ. ಒಡಹುಟ್ಟಿದವರೊಡನೆ ವೈರತ್ವ ಅದು ನಿಮಗೆ ಶೋಭಿತ ಅಲ್ಲ. ಆಸ್ತಿ ವಿಚಾರದಲ್ಲಿ ತೀವ್ರ ಬಿಕ್ಕಟ್ಟ . ಮಕ್ಕಳ ಪ್ರಗತಿ ಭವಿಷ್ಯ ಮಂದಗತಿ. ಬೆನ್ನು ನೋವು ನಿಮ್ಮನ್ನು ಕಾಡಬಹುದು. ಸ್ನೇಹಿತರು ಹಾಗೂ ಬಂಧುಗಳಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ಅನಿರೀಕ್ಷಿತ ಅಪಘಾತ ಸಂಭವ. ಆದ್ದರಿಂದ ದೂರದ ಪ್ರಯಾಣದಲ್ಲಿ ಎಚ್ಚರ. ಶಿಕ್ಷಣ ಸಂಘ ಸಂಸ್ಥೆಗಳ ಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ತುಲಾ
ರಾಜಕೀಯದಲ್ಲಿ ಪ್ರವೇಶ ವಿರೋಧವಿದ್ದರೂ, ಗೆಲುವು ನಿಮ್ಮದಾಗಲಿದೆ.
ವೈಯಕ್ತಿಕ ಸ್ವಾರ್ಥ ಮನಸ್ಸಿನಿಂದ ಪಶ್ಚಾತಾಪ. ಮಿತಿಮೀರಿ ತಮ್ಮ ನಡವಳಿಕೆಯಿಂದ ಸಿಗುವ ಸೌಲಭ್ಯವನ್ನು ಕಳೆದುಕೊಳ್ಳುವಿರಿ. ಮಾತಿನಲ್ಲಿ ಹಿಡಿತ ಇರಲಿ. ಆಸ್ತಿ ವ್ಯವಹಾರ ದಾಖಲೆ ಪತ್ರಗಳ ಬಗ್ಗೆ ಚಿಂತಾಕ್ರಾಂತ. ಕೆಲಸ ಮಾಡುವಾಗ ಆಕಸ್ಮಿಕವಾಗಿ ಹರಿತವಾದ ಆಯುಧಗಳಿಂದ ತೊಂದರೆ. ಸಂಗಾತಿಯ ಕಡೆಯವರು ಮದುವೆ ವಿಷಯ ಮಾತನಾಡಲು ಬರಬಹುದು. ಆಭರಣ ವ್ಯಾಪಾರದಲ್ಲಿ ಏರಿಕೆ. ಪಿತ್ರಾರ್ಜಿತ ಆಸ್ತಿಗಳ ದಾಖಲೆ ಕಳೆದುಕೊಳ್ಳುವ ಸಾಧ್ಯತೆ. ಸರ್ಕಾರದಿಂದ ಇಂಟರ್ವ್ಯೂ ಬರುವ ಸಾಧ್ಯತೆ ಪೂರ್ವ ತಯಾರಿ ಮಾಡಿಕೊಳ್ಳಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ವೃಶ್ಚಿಕ ರಾಶಿ
ಕುಟುಂಬದವರ ಕಡೆಯಿಂದ ರಾಜಕೀಯದಲ್ಲಿ ಪ್ರವೇಶಕ್ಕಾಗಿ ಸಹಕರಿಸುವರು.
ಸಂಗಾತಿಯ ಪ್ರೇರಣೆಯಿಂದ ಮನಸ್ಸಿಗೆ ಶಾಂತಿ . ಸಂಗಾತಿಯ ಸಲಹೆಯಿಂದ ಪುನಃ ಜೀವನ ಸೃಷ್ಟಿ. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮ ಇರುವುದಿಲ್ಲ. ಒಡಹುಟ್ಟಿದವರೊಡನೆ ಶೀತಲ ಸಮರ. ಕೃಷಿಭೂಮಿಯ ವಿಚಾರದಲ್ಲಿ ಹೊಂದಾಣಿಕೆ ಮೂಡುವುದು. ಮಕ್ಕಳಿಂದ ತಂದೆ ತಾಯಿಗೆ ಸೂಕ್ತ ಸಹಾಯ ದೊರೆಯುವುದು. ಬಹುಮುಖ್ಯ ಕೆಲಸಗಳು ನಿಧಾನವಾಗಬಹುದು. ತಾಯಿಗಾಗಿ ಅನಿರೀಕ್ಷಿತವಾಗಿ ಶಸ್ತ್ರಚಿಕಿತ್ಸೆಗಾಗಿ ಖರ್ಚು. ಶಿಕ್ಷಕ ವೃತ್ತಿಯಲ್ಲಿ ವರ್ಗಾವಣೆಯ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಧನಸ್ಸು
ಪತ್ನಿಗೆ ರಾಜಕೀಯದಲ್ಲಿ ಪ್ರವೇಶ ಮಾಡುವ ಕುರಿತು ಚರ್ಚೆ ಮಾಡುವಿರಿ. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ.
ದೇವರ ಪ್ರತಿಷ್ಠಾಪನೆ ಬಗ್ಗೆ ಗಮನ ಹರಿಯುತ್ತದೆ. ಸಾಲ ಮರು ಪಾವತಿ ವಿಳಂಬ ಕಿರಿಕಿರಿ ಸಾಧ್ಯತೆ. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟವಿದ್ದರೂ ಸೂಕ್ತಸಮಯದಲ್ಲಿ ಅವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ಆಸ್ತಿ ಖರೀದಿಯ ವಿಚಾರದಲ್ಲಿ ಹಣ ಕೂಡಿಸಿ ನಂತರ ಹೈನುಗಾರಿಕೆ ಉದ್ಯಮ ಪ್ರಾರಂಭ ಮಾಡುವಿರಿ. ಮಕ್ಕಳಿಗೆ ಶೀತ ಬಾಧೆ ಕಾಣಿಸಬಹುದು. ಸಂಗಾತಿಯ ಕೋಪಕ್ಕೆ ತಾಳ್ಮೆಯ ಉತ್ತರ ನೀಡಿ .ಹಿರಿಯರೊಡನೆ ಅನುಬಂಧ ಉತ್ತಮ. ಉದ್ಯೋಗದಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಪ್ರೇಮಿಗಳ ಮದುವೆ ವಿಳಂಬ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮಕರ
ಸಾಲಗಾರರಿಂದ ಕೊಂಚ ನೆಮ್ಮದಿ. ರಾಜಕೀಯ ಅಖಾಡಕ್ಕೆ ಭರ್ಜರಿ ಪ್ರವೇಶ.
ಹಣಕಾಸಿನ ಸ್ಥಿತಿ ಕೊಂಚ ನೆಮ್ಮದಿ. ಸಂಬಂಧಿಕರು ಸಾಲಕ್ಕಾಗಿ ಬರಬಹುದು. ಮೂಳೆ ತೊಂದರೆ ಇರುವವರು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಬಂಧುಗಳ ಮನೆಗೆ ಹೋದಾಗ ಅನಿರೀಕ್ಷಿತ ಪ್ರೇಮದಲ್ಲಿ ಸಿಲುಕುವ ಸಾಧ್ಯತೆ. ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ. ಕೃಷಿ ಉಪಕರಣಗಳ ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ. ವಾರಾಂತ್ಯಕ್ಕೆ ಧಾರ್ಮಿಕ ಪ್ರವಾಸ. ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಉದ್ಯಮ ಪ್ರಾರಂಭದ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಕುಂಭ
ರಾಜಕೀಯದಲ್ಲಿ ಪ್ರವೇಶಕ್ಕಾಗಿ ವಿರೋಧಿಗಳಿಂದ ವಿರೋಧ ಸಂಭವ.
ಉದರ ಶಸ್ತ್ರಚಿಕಿತ್ಸೆ ಸಂಭವ. ವ್ಯವಹಾರದಲ್ಲಿ ಚೇತರಿಕೆ ಸ್ವಲ್ಪ ಸಮಯ ಬೇಕಾಗುವುದು. ಮಾತಾಪಿತೃ ಆರೋಗ್ಯಕ್ಕಾಗಿ ಖರ್ಚು–ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ. ಬಹುದಿನಗಳ ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಣೆಯತ್ತ ಸಾಗುತ್ತದೆ. ಸಂಗಾತಿಯು ನಿಮ್ಮ ಚಟುವಟಿಕೆಗಳಿಗೆ ಸಹಕಾರ ನೀಡುವರು,ಆದರೆ ಮದುವೆ ವಿಳಂಬ ಏಕೆ ?ಉದ್ಯಮಿಗಳಿಗೆ ಸರ್ಕಾರದಿಂದ ಸೌಲಭ್ಯ. ಕೆಲಸದಲ್ಲಿ ಹೆಚ್ಚಿನ ಹುಮ್ಮಸ್ಸಿನಿಂದ ತೊಡಗುವಿರಿ. ಧರ್ಮಕಾರ್ಯ ಮಾಡುವಿರಿ. ನಿಮ್ಮ ನೇತೃತ್ವದಲ್ಲಿ ಆತ್ಮೀಯ ಮಕ್ಕಳ ಮದುವೆ ಸಂಭವ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

ಮೀನ
ಸಾಲಗಾರರ ಜೊತೆ ಮನಸ್ತಾಪ.
ರಾಜಕಾರಣದಲ್ಲಿ ಪ್ರವೇಶ ಪ್ರಯತ್ನ ಮಾಡುವಿರಿ.
ಕಿರಾಣಿ ಅಂಗಡಿ ಬಟ್ಟೆಯಂಗಡಿ ವ್ಯಾಪಾರದಲ್ಲಿ ಸುಧಾರಣೆಯತ್ತ ಸಾಗುವುದು. ನಿಮ್ಮ ಒಣ ಜಂಭದ ಮಾತಿನಿಂದ ಹಿರಿಯರನ್ನು ನಿಷ್ಠುರ ಮಾಡಿಕೊಳ್ಳುವಿರಿ. ಎಲ್ಲರ ಸಮ್ಮುಖದಲ್ಲಿ ಅವಮಾನ ಸಾಧ್ಯತೆ. ನಿಮ್ಮ ವರ್ತನೆಯ ಬಗ್ಗೆ ನಿಮ್ಮವರಲ್ಲೇ ಅಸಮಾಧಾನ ಇರುತ್ತದೆ. ಕಣ್ಣಿನ ಸೋಂಕಿನ ಕಾಣಿಸಿಕೊಳ್ಳಲಿದೆ. ವ್ಯವಹಾರದಲ್ಲಿ ಸಾಲಗಾರರು ವಸೂಲಿಗೆ ಬರುವರು ಅವರ ಜೊತೆಗೆ ಜಗಳ. ಸಂಗಾತಿಯಿಂದ ಸಾಲ ತೀರಿಸಲು ಸಹಕಾರ. ಹಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಆಸ್ತಿ ವಿಚಾರದಲ್ಲಿ ನಿಮಗೆ ಲಾಭವಿದೆ. ಮಕ್ಕಳ ಮದುವೆ ವಿಳಂಬ ಕಾಡಲಿದೆ. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ. ಮಕ್ಕಳ ಸಂತಾನದ ಬಗ್ಗೆ ಸಮಸ್ಯೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top