ಡಿವಿಜಿಸುದ್ದಿ.ಕಾಂ, ತುಮಕೂರು: ಒಬ್ಬ ಸಾಮಾನ್ಯ ವ್ಯಕ್ತಿ ಜೀವನ ನೋಡುವ ದೃಷ್ಟಿಕೋನಕ್ಕೂ ಕಲಾವಿದ ನೋಡುವ ದೃಷ್ಟಿಕೋನಕ್ಕೂ ವಿಭಿನ್ನವಾಗಿರುತ್ತದೆ ಎಂದು ಹಿರಿಯ ಸಾಹಿತಿ ಮತ್ತು ನ್ಯಾಯವಾದಿ ಬಳ್ಳಾರಿ ರೇವಣ್ಣ ಅಭಿಪ್ರಾಯಪಟ್ಟರು.
ತುಮಕೂರು ಬಾಲ ಭವನದಲ್ಲಿ ಆಯೋಜಿಸಿದ್ದ ರಂಗ ತೇರುಗಳ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ರಂಗ ಕ್ಷೇತ್ರವೆಂದರೆ ನಮ್ಮೆಲ್ಲರ ಬದುಕು ಬಿಚ್ಚಿಡುವ ಅದ್ಭುತ ಕಲಾ ವೇದಿಕೆ. ಒಬ್ಬ ಸಾಮಾನ್ಯ ವ್ಯಕ್ತಿ ಜೀನವನ್ನು ನೋಡುವ ಬಗೆಗೂ, ಒಬ್ಬ ಕಕಲಾವಿದ ಜೀವನ ನೋಡುವ ದೃಷ್ಟಿಕೋನಕ್ಕೂ ತುಂಬಾ ವ್ಯತ್ಯಾಸವಿರುತ್ತದೆ ಎಂದರು.
ಇದನ್ನೇ ಸಾಹಿತಿ ಬೀ.ಚಿ. ಅವರು ಕಲಾವಿದ ಎಲ್ಲರಂತೆ ಜೀವನ ನೋಡುವುದಿಲ್ಲ. ತನಗೆ ತಿಳಿದಂತೆ ತಾನು ನೋಡುತ್ತಾನೆ ಎಂದಿದ್ದಾರೆ. ಇನ್ನು ಇಂಗ್ಲಿಷ್ ಕವಿ ಶೇಕ್ಸ್ ಪಿಯರ್ ಹೇಳುವಂತೆ ರಂಗ ವೇದಿಕೆ ಎಲ್ಲರ ಮುಖಗಳನ್ನು ತೆರೆದಿಡುತ್ತದೆ ಎಂದು ತಿಳಿಸಿದರು.
ಬ್ರೆಕ್ಟ್, ಗ್ರೀಕ್ ನಾಟಕಗಳು ಅತ್ಯುತ್ತಮ ನಾಟಕಗಳಾಗಿ ಹೊರಹೊಮ್ಮಿದ್ದು, ಅದೇ ಮಾರ್ಗದಲ್ಲಿ ನೀನಾಸo, ರಂಗಯಾಣ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಸಂಘಟಿತ, ಸಂಘಟಿತ ನಾಟಕಗಳ ಮುಖಾಂತರ ಮುಖ್ಯ ಮಂತ್ರಿ ಚಂದ್ರು, ಸಿ.ಆರ್.ಸಿಂಹ , ಶಂಕರ್ ನಾಗ್ ಯಶಸ್ವಿ ಆಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂ.ಎಲ್.ಎ ಜ್ಯೋತಿ ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



