Connect with us

Dvgsuddi Kannada | online news portal | Kannada news online

ಉಪ ಚುನಾವಣೆ ನಂತ್ರ ಆಪರೇಷನ್ ಕಮಲ ಮಾಡಿದ್ರೆ ಜನ್ರೇ ಅಟ್ಟಾಡಿಸಿ ಹೊಡಿತ್ತಾರೆ: ಸಿದ್ದರಾಮಯ್ಯ

ರಾಜಕೀಯ

ಉಪ ಚುನಾವಣೆ ನಂತ್ರ ಆಪರೇಷನ್ ಕಮಲ ಮಾಡಿದ್ರೆ ಜನ್ರೇ ಅಟ್ಟಾಡಿಸಿ ಹೊಡಿತ್ತಾರೆ: ಸಿದ್ದರಾಮಯ್ಯ

ಡಿವಿಜಿ ಸುದ್ದಿ, ಬಾಗಲಕೋಟೆ: ಉಪಚುನಾವಣೆ ಬಳಿಕ  ಬಿಜೆಪಿಯವರು ಆಪರೇಷನ್ ಕಮಲ ಶುರು ಮಾಡಿದ್ರೆ, ರಾಜ್ಯದ ಜನ್ರೇ ಅವರನ್ನ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು  ವಿಪಕ್ಷ  ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ತಾಲ್ಲೂಕಿನ ಕೆರೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏಕಾಂಗಿ ಎಂಬುದೆಲ್ಲಾ ಸುಳ್ಳು. ಬಿಜೆಪಿಯವರು ಪ್ರಚಾರಕ್ಕಾಗಿ  ಆ ರೀತಿ ಹೇಳುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಲಕ್ಷಾಂತರ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದರು.

ಅವನ್ಯಾರೋ ರಮೇಶ್ ..!

ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುತ್ತೇವೆ ಎಂಬ ಅನರ್ಹ ಶಾಸಕ  ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಅವನ್ಯಾರೊ ರಮೇಶ್. ಅವರಿಗೆ ಐಡಿಯಾಲಜಿ ಗೊತ್ತಿಲ್ಲ. ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ. ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಜವಾಬ್ದಾರಿಯಿದ್ದರೆ ಹೀಗೆಲ್ಲ ಮಾತನಾಡಲ್ಲ. ರಾಜಕಾರಣದಲ್ಲಿ ಹುಡುಗಾಟಿಕೆ ಆಡಬಾರದು. ನನ್ನ ಜೀವನವೇ ಕೋಮುವಾದಿ ಶಕ್ತಿ ವಿರುದ್ಧದ ಹೋರಾಟ.  ಮಾತನಾಡುವಾಗ ಗಂಭೀರತೆ ಇರಲಿ ಎಂದು ಕಿಡಿಕಾರಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಜಕೀಯ

To Top