Connect with us

Dvgsuddi Kannada | online news portal | Kannada news online

ಪ್ರಾದೇಶಿಕ ಸಮಗ್ರ  ಅರ್ಥಿಕ ಮುಕ್ತ ವ್ಯಾಪಾರ ಒಪ್ಪಂದಿಂದ  ತಯಾರಿಕ ವಲಯಕ್ಕೆ ಹೊಡೆತ; ಯು.ಟಿ. ಖಾದರ್

ದಾವಣಗೆರೆ

ಪ್ರಾದೇಶಿಕ ಸಮಗ್ರ  ಅರ್ಥಿಕ ಮುಕ್ತ ವ್ಯಾಪಾರ ಒಪ್ಪಂದಿಂದ  ತಯಾರಿಕ ವಲಯಕ್ಕೆ ಹೊಡೆತ; ಯು.ಟಿ. ಖಾದರ್

ಡಿವಿಜಿ ಸುದ್ದಿ, ದಾವಣಗೆರೆ: ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ  ಅರ್ಥಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಆರ್‌ಸಿಇಪಿ) ಸಹಿ ಹಾಕಿದರೆ ದೇಶದ ತಯಾರಿಕಾ ವಲಯ ಮತ್ತು ರೈತರಿಗೆ ಭಾರೀ ಹೊಡೆತ ಬೀಳಲಿದೆ ಎಂದು ಕಾಂಗ್ರೆಸಿನ ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಮಾರುವಂತಹ ಪರಿಸ್ಥಿತಿಗೆ ತಂದಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಯೋಜನ ಆಗುವಂತಹ  ಯಾವೊಂದು ಯೋಜನೆ  ಜಾರಿಗೆ ತಂದಿಲ್ಲ. ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ನೋಟ್ ಬ್ಯಾನ್, ಜಿಎಸ್‌ಟಿ ಯಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗಿದೆ.

ಆರ್ಥಿಕ ತಜ್ಞರ ಜೊತೆ ಚರ್ಚೆ ಮಾಡದೇ ಜಿಎಸ್‌ಟಿ, ನೋಟ್ ಬ್ಯಾನ್ ಮಾಡಿರುವುದು ಆರ್ಥಿಕ ಪರಿಸ್ಥಿತಿಗೆ ಕುಂಠಿತವಾಗಿದೆ. ಇದೀಗ ಆರ್‌ಸಿಇಪಿ  ಒಪ್ಪಂದಕ್ಕೆ  ಸಹಿ ಹಾಕಿದರೆ ಸ್ವಾಮಾಭಿನ ಬದುಕು ಕಷ್ಟಕರವಾಗುತ್ತದೆ ಎಂದು ಆರೋಪಿಸಿದರು. ಹೈನುಕಾರಿಕೆ ಮಾಡುವ ರೈತರಿಗೆ ತುಂಬಾ ನಷ್ಟ ಉಂಟಾಗುತ್ತದೆ. ಈ ಎಲ್ಲ ಸಮಾಸ್ಯೆಗಳ ಬಗ್ಗೆ ಸಾಧಕ-ಬಾಧಕಗಳನ್ನು ಚರ್ಚೆ ಮಾಡದೆ,  ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಒತ್ತಾಯ ಮಾಡಿದರು.

ಆರ್‌ಸಿಇಪಿ ಬಗ್ಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸಿನಿಂದ ದೊಡ್ಡ ಹೋರಾಟವೇ ನಡೆಯಲಿದೆ. ಬಿಜೆಪಿ ಅವರ ಬಾಯಿಯಲ್ಲಿ ಮಾತ್ರ ಸ್ವದೇಶಿ ಮಾತು. ಆದರೆ, ಅವರು ಮಾಡುವುದೆಲ್ಲ ವಿದೇಶಿ ಕೆಲಸವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರೆ ಸಂತ್ರರಿಗೆ ಆತ್ಮಸ್ಥೈರ್ಯ ತುಂಬುವಂತ ಕೆಲಸ ಮಾಡಲಿಲ್ಲ.

ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಕಳೆದ 5 ವರ್ಷಗಳಲ್ಲಿ ಪಾಲಿಕೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಸಾಕಷ್ಟು ಅಭಿವೃದ್ದಿ ಕೆಲಗಳನ್ನು ಮಾಡಿದ್ದು,ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತಹಾಕಿ ಎಂದರು.

ಸಿಬಿಐ ತನಿಖೆಗೆ ವಹಿಸಲಿ

ಯಡಿಯೂರಪ್ಪ ಅವರ ಆಡೀಯೋ ವಿಚಾರ ಸಂವಿಧಾನ ಬಾಹಿರ ಕೃತ್ಯ. ಇದರ ವಿರುದ್ಧ ಹೋರಾಡುತ್ತವೆ. ಯಯೂಡಿರಪ್ಪನವರು ಆಡೀಯೋ ಪ್ರಕರಣ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರ ಬಗ್ಗೆ ಸಿಬಿಐ ತನಿಖೆಗೆ ವಹಿಸಲಿ. ಬಿಜೆಪಿಯವರು ಯಾವುದೇ ಪ್ರಕರಣವನ್ನು 5 ನಿಮಿಷಗಳಲ್ಲಿ ಸಿಬಿಐಗೆ ವಹಿಸುತ್ತಾರೆ. ಇದನ್ನು ಸಿಬಿಐಗೆ ವಹಿಸಲಿ. ಯಾರು ತಪ್ಪು ಮಾಡುತ್ತಿದ್ದಾರೆ ಎನ್ನುವುದು ಜನತೆಗೆ ಗೋತಾಗಲಿ ಎಂದು ಹೇಳಿದರು.

ಟಿಪ್ಪುವಿನ ಇತಿಹಾಸ ಅಳಿಸಲು ಸಾಧ್ಯವಿಲ್ಲ

ಟಿಪ್ಪುವಿನ ಬಗ್ಗೆ ಪಠ್ಯ ಪುಸ್ತಕದಿಂದ ಕೈಬಿಡಲು ಹೊರಟಿದ್ದಾರೆ. ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ. ಟಿಪ್ಪುವಿನ ಇತಿಹಾಸ ಮತ್ತು ವ್ಯಕ್ತಿತ್ವ ರಾಜ್ಯಕ್ಕೆ ಅಷ್ಟೇ ಸಿಮೀತವಾಗಿಲ್ಲ. ಬೇರೆ ದೇಶಗಳಲ್ಲಿ ಹಾಗೂ ಇಂಗ್ಲೇಂಡಿನ ಮ್ಯೂಸಿಯಂನಲ್ಲಿ ಇಡಲಾಗಿದೆ. ಟಿಪ್ಪುವಿನ ಇತಿಹಾಸ ಪಠ್ಯ ಪುಸ್ತಕ ತಗೆದು ಹಾಕುವುದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತದೆ. ಟಿಪ್ಪುವಿನ ಇತಿಹಾಸ ಅಳಿಸಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್, ಚಮನ್ ಸಾಬ್, ವಿಜಯ್ ಅಕ್ಕಿ, ಅಯೂಬ್ ಪೈಲ್ವಾನ್, ಮುಜಾಹಿದ್ ಇದ್ದರು.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top