Connect with us

Dvgsuddi Kannada | online news portal | Kannada news online

ಬೆಂಗಳೂರು, ಬೆಳಗಾವಿಗೆ ಅರ್ಧದಷ್ಟು ಸ್ಥಾನ ಕೊಟ್ಟರೆ ಹೇಗೆ..?: ಸಚಿವ ಸ್ಥಾನ ಸಿಗದಿದ್ದಕ್ಕೆ ತಿಪ್ಪಾರೆಡ್ಡಿ ಅಸಮಾಧಾನ

ಪ್ರಮುಖ ಸುದ್ದಿ

ಬೆಂಗಳೂರು, ಬೆಳಗಾವಿಗೆ ಅರ್ಧದಷ್ಟು ಸ್ಥಾನ ಕೊಟ್ಟರೆ ಹೇಗೆ..?: ಸಚಿವ ಸ್ಥಾನ ಸಿಗದಿದ್ದಕ್ಕೆ ತಿಪ್ಪಾರೆಡ್ಡಿ ಅಸಮಾಧಾನ

ಡಿವಿಜಿ ಸುದ್ದಿ, ಚಿತ್ರದುರ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗೆ ಅರ್ಧದಷ್ಟು ಪಾಲು ಸಿಕ್ಕಿದ್ದು,  ಚಿತ್ರದುರ್ಗ ಸೇರಿ ಅನೇಕ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಇದು ಸಹಜವಾಗಿ ಬೇಸರ ಮೂಡಿಸಿದೆ. ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಲ್ಲ ಎಂದು  ಜಿ. ಎಚ್ . ತಿಪ್ಪಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ ಮಾಡಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ಸುಭದ್ರಗೊಳಿಸಿದವರಿಗೆ ಮಂತ್ರಿ ಸ್ಥಾನ ನೀಡಿರುವುದು ಸ್ವಾಗತಾರ್ಹ. ಆದರೆ,  ನಾನು ಮಂತ್ರಿಯಾಗಬೇಕೆಂಬುದು ಜನರ ಬಯಕೆಯಾಗಿತ್ತು. ಇನ್ನು 8 ಮಂತ್ರಿ ಸ್ಥಾನ ನೀಡಿದರೆ ಒಳಿತಾಗುತ್ತಿತ್ತು ಎಂದಿದ್ದಾರೆ.

ಲೋಕಸಭೆಯಿಂದ ಹಿಡಿದು ಸ್ಥಳೀಯ ಸಂಸ್ಥೆ ಚುನಾವಣೆ ವರೆಗೂ ಎಲ್ಲಾ ಹಂತದಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಇನ್ನೆರಡು ತಿಂಗಳು ಸುಧಾರಿಸಿಕೊಳ್ಳುವಂತೆ ಮುಖ್ಯಮಂತ್ರಿ ಹೇಳಿದ್ದಾರೆ. ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸಬರಿಗೆ  ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top