Connect with us

Dvgsuddi Kannada | online news portal | Kannada news online

3.5 ಲಕ್ಷ ಮೌಲ್ಯ ಚಿನ್ನದ ಮಾಸ್ಕ್ ಧರಿಸಿದ  ಉದ್ಯಮಿ …!

ಪ್ರಮುಖ ಸುದ್ದಿ

3.5 ಲಕ್ಷ ಮೌಲ್ಯ ಚಿನ್ನದ ಮಾಸ್ಕ್ ಧರಿಸಿದ  ಉದ್ಯಮಿ …!

 ಭುವನೇಶ್ವರ: ಕೊರೊನಾ ಮಹಾಮಾರಿಗೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಅದರಲ್ಲೂ ಭಾರತದಲ್ಲಿ ಲಾಕ್ ಡೌನ್ ಪರಿಣಾಮ ಆರ್ಥಿಕತೆ ಕುಸಿದು ಹೋಗಿದೆ. ಇನ್ನು ಜನ ಸಾಮಾನ್ಯರಂತೂ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆ ಇಲ್ಲೊಬ್ಬ ಉದ್ಯಮಿ 3.5 ಲಕ್ಷದ  ಚಿನ್ನದ ಮಾಸ್ಕ್ ಧರಿಸಿದ್ದಾನೆ.

ಕೊರೊನಾ ವೈರಸ್ ದೇಶಕ್ಕೆ ಎಂಟ್ರಿ ಕೊಟ್ಟಾಗಿನಿಂದ  ಸ್ಯಾನಿಟೈಸರ್,  ಮಾಸ್ಕ್ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಮಾಸ್ಕ್ ಇಲ್ಲದೆ ಹೊರಗಡೆ ಓಡಾಡುವಂತಿಲ್ಲ. ಕೆಲವೆಡೆ ಪೊಲೀಸರು ಮಾಸ್ಕ್ ಧರಿಸಿದ್ದಕ್ಕೆ ದಂಡ ಹಾಕುತ್ತಿದ್ದಾರೆ. ಇದರ ಮಧ್ಯೆ ಮಾಸ್ಕ್ನಲ್ಲಿಯೂ  ಫ್ಯಾಶನ್ ಕಂಡುಬಂದಿದ್ದು, ಉದ್ಮಿಗಳು  ಚಿನ್ನದ ಮಾಸ್ಕ್ ಮೊರೆ ಹೋಗುತ್ತಿದ್ದಾರೆ .

ಇತ್ತೀಚೆಗೆ ಪುಣೆ ವ್ಯಕ್ತಿಯಯೊಬ್ಬ ಚಿನ್ನದ ಮಾಸ್ಕ್ ಧರಿಸಿ ಸುದ್ದಿಯಾಗಿದ್ದ.  ಇದೀಗ ಒಡಿಶಾದ ಕತಕ್ ಮೂಲದ ಉದ್ಯಮಿ ಅಲೋಕ್ ಮೊಹಂತಿ 3.5 ಲಕ್ಷದ ಮಾಸ್ಕ್ ತಯಾರಿಸಿ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.ಸೂರತ್ ನ ಕೆಲ ಚಿನ್ನದ ವ್ಯಾಪಾರಿಗಳು ಕೂಡ ಸರಿಸುಮಾರು 4 ಲಕ್ಷ ಬೆಲೆ ಬಾಳುವ ವಜ್ರ ಹಾಗೂ ಚಿನ್ನ ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಕಟಕ್ ನ ಕೇಶರಪುರ ಪ್ರದೇಶದ ನಿವಾಸಿಯಾಗಿರುವ ಅಲೋಕ್ ಅವರು ಮುಂಬೈನ ಝಾವೇರಿ ಬಜಾರ್ ನಲ್ಲಿ ಚಿನ್ನದ ಮಾಸ್ಕ್ ಖರೀದಿಸಿದ್ದಾರೆ.

ಕಳೆದ 30-40 ವರ್ಷಗಳಿಂದ ನಾನು ಮೈ ತುಂಬಾ ಒಡವೆಗಳನ್ನು ಧರಿಸುತ್ತಿದ್ದೇನೆ. ಚಿನ್ನ ಧರಿಸುವುದು ನನ್ನ ದೊಡ್ಡ ವೀಕ್ನೆಸ್. ಚಿನ್ನದ ಮಾಸ್ಕ್ ಧರಿಸಿದ್ದ ಪುಣೆ ವ್ಯಕ್ತಿಯನ್ನು ನೋಡಿ ನನಗೂ ಮಾಸ್ಕ್ ತಯಾರಿಸಿ ಧರಿಸಬೇಕೆಂಬ ಆಸೆ ಉಂಟಾಯಿತು. ಕೂಡಲೇ ನನಗೊಂದು ಮಾಸ್ಕ್ ಡಿಸೈನ್ ಮಾಡಿಕೊಡುವಂತೆ ಚಿನ್ನದ ವ್ಯಾಪಾರಿ ಮನವಿ ಮಾಡಿಕೊಂಡೆ ಎಂದು ಅಶೋಕ್ ಹೇಳಿದ್ದಾರೆ.

ಈ ಚಿನ್ನದ ಮಾಸ್ಕ್  ಎನ್95  ಆಗಿದ್ದು, ಇದರಲ್ಲಿ ಉಸಿರಾಟ ಮಾಡಲು ರಂಧ್ರಗಳನ್ನು ಮಾಡಲಾಗಿದ್ದು, 90 ರಿಂದ 100 ಗ್ರಾಂ ಚಿನ್ನದ ಎಳೆಗಳನ್ನು ಬಳಸಲಾಗಿದೆ. ಇದನ್ನು ತಯಾರಿಸಲು 22 ದಿನ ಬೇಕಾಗಿದೆ. ಇದರ ಬೆಲೆ ಸುಮಾರು 3.5ಲಕ್ಷ ಆಗಿದೆ.

ಅಲೋಕ್ ಮೊಹಂತಿ ಅವರು ಪೀಠೋಪಕರಣಗಳ ಅಂಗಡಿ ಮಾಲೀಕರನಾಗಿದ್ದು, ಬೀದಿಬದಿ ಪ್ರಾಣಿಗಳಿಗೆ ಆಹಾರ ನೀಡುವುದು ಅವರ ಹವ್ಯಾಸವಾಗಿದೆ. ಚಿನ್ನವೆಂದರೆ ಪಂಚ ಪ್ರಾಣವಾಗಿರುವ ಅಲೋಕ್ ಗೆ ಕೈ ತುಂಬಾ ಚಿನ್ನದ ಉಂಗುರ, ಕುತ್ತಿಗೆ ತುಂಬಾ ಸರ ಹಾಗೂ ಕೈಗೆ ಖಡಗಗಳನ್ನು ತೊಟ್ಟಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top