Connect with us

Dvgsuddi Kannada | online news portal | Kannada news online

ಕೊರೊನಾ ಕವಚ್, ಕೊರೊನಾ ರಕ್ಷಕ್ ವಿಮೆ ಯೋಜನೆ  ಜಾರಿ; ಯೋಜನೆ ಉಪಯೋಗ ಏನು ಇಲ್ಲಿದೆ ಮಾಹಿತಿ..!

Home

ಕೊರೊನಾ ಕವಚ್, ಕೊರೊನಾ ರಕ್ಷಕ್ ವಿಮೆ ಯೋಜನೆ  ಜಾರಿ; ಯೋಜನೆ ಉಪಯೋಗ ಏನು ಇಲ್ಲಿದೆ ಮಾಹಿತಿ..!

ನವದೆಹಲಿ : ಕೊರೊನಾ ಮಹಾಮಾರಿ ಇಡೀ ಜಗತ್ತಿನಲ್ಲಿ ತಲ್ಲಣ ಸೃಷ್ಠಿಸಿದೆ. ಆರ್ಥಿಕ ಪರಿಸ್ಥಿತಿಯಂತೂ ಕುಸಿದು ಹೋಗಿದೆ. ಅದರಲ್ಲೂ ಭಾರತದಲ್ಲಿ ಜನ ಸಾಮಾನ್ಯ ಜೀವನದಲ್ಲಿ ಕಷ್ಟಕರವಾಗಿದೆ.   ಜನ ಸಾಮಾನ್ಯರ ಕೊರೊನಾ ಚಿಕಿತ್ಸಾ ವೆಚ್ಚ ಭರಿಸಲು ಅನುಕೂಲ ಆಗುವಂತಹ ಕೊರೊನಾ ಕವಚ್, ಕೊರೊನಾ ರಕ್ಷಕ್ ವಿಮೆ ಸೌಲಭ್ಯಗಳು ಇಂದಿನಿಂದ ಜಾರಿಗೆ ಬಂದಿವೆ.

ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳು ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವಂತಹ ಪ್ರತ್ಯೇಕ ವಿಮೆ ಪಾಲಿಸಿಗಳನ್ನು ಕಡ್ಡಾಯವಾಗಿ ರೂಪಿಸಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸೂಚಿಸಿತ್ತು. ಅದರಂತೆ ಕೊರೊನಾ ಕವಚ್‌ ಮತ್ತು ಕೊರೊನಾ ರಕ್ಷಕ್‌‌ ವಿಮಾ ಸೌಲಭ್ಯಗಳು ಸಿದ್ಧಗೊಂಡಿವೆ.

ದೇಶದಾದ್ಯಂತ  ಕೊರೊನಾ  ಸೋಂಕು  ಹೆಚ್ಚಾಗುತ್ತಿರುವುದರಿಂದ  ವಿಶೇಷ ವಿಮಾ ಸೌಲಭ್ಯ ಆರಂಭಿಸುವಂತೆ ಸೂಚನೆ ನೀಡಿದ್ದ ಐಆರ್‌ಡಿಎಐ, ಜುಲೈ 10 ಯೋಜೆನ  ಜಾರಿಗೆ ಬರುವಂತೆ ಸೂಚಿಸಿತ್ತು.

ಈ ವಿಮೆಯ ಅವಧಿ ಮೂರುವರೆ, ಆರೂವರೆ ಹಾಗೂ ಒಂಬತ್ತೂವರೆ ತಿಂಗಳ ಅವಧಿಯ ಪಾಲಿಸಿಗಳಾಗಿವೆ. ಇವುಗಳ ಅಡಿಯಲ್ಲಿ ವಿಮಾದಾರನ ಆಸ್ಪತ್ರೆಯ ವೆಚ್ಚವನ್ನು ಆತನ ಪಾಲಿಸಿ ಮೊತ್ತಕ್ಕೆ ಅನುಗುಣವಾಗಿ ವಿಮಾ ಕಂಪೆನಿಯು ಭರಿಸಲಿವೆ.

ಕೊರೊನಾ ಕವಚ್‌‌ 

ಈ ಯೋಜನೆಗಳು  ದೇಶ ವ್ಯಾಪಿ ಜಾರಿಗೆ ಬರಲಿದೆ. ಐಆರ್‌ಡಿಎಐ ಮಾರ್ಗಸೂಚಿ ಪ್ರಕಾರ ಕೊರೊನಾ ಕವಚ್‌‌ ವಿಮೆ ಪರಿಹಾರ ಮೊತ್ತವು ಕನಿಷ್ಠ  50 ಸಾವಿರದಿಂದ ಗರಿಷ್ಠ  5 ಲಕ್ಷದವರೆಗೆ ಇರಬೇಕು. ಇದರಲ್ಲಿ ಆರೋಗ್ಯ ಕಾರ್ಯಕರ್ತರಿಗೆ  ಶೇ. 5ರಷ್ಟು ರಿಯಾಯಿತಿ ನೀಡಲಾಗಿದೆ.

ಕೊರೊನಾ ರಕ್ಷಕ್‌ 

ಈ ಪಾಲಿಸಿ ಪರಿಹಾರ ಮೊತ್ತವು, ಕನಿಷ್ಠ  50 ಸಾವಿರದಿಂದ ಗರಿಷ್ಠ  2.5 ಲಕ್ಷದವರೆಗೆ ಇರಬೇಕು. ಕೊರೊನಾ ಕವಾಚ್ ಪಾಲಿಸಿಯು ನಷ್ಟ ಪರಿಹಾರ ಕಲ್ಪಿಸಲಿದೆ. ಆಯುಷ್‌ ಚಿಕಿತ್ಸೆಯನ್ನೂ ಒಳಗೊಂಡಂತೆ ಪಿಪಿಇ ಕಿಟ್‌ಗಳು, ಕೈಗವಸು, ಮುಖಗವಸು, ಇತರ ವೆಚ್ಚ ಭರಿಸಲಿದೆ.

ಕೊರೊನಾ ಕವಚ್‌‌ ಪಾಲಿಸಿ 14 ದಿನಗಳ ಕ್ವಾರಂಟೈನ್‌ ಅವಧಿಯ ವೆಚ್ಚವನ್ನೂ ತುಂಬಲಿದೆ. ವಿಮಾದಾರನಿಗೆ ಕೋವಿಡ್‌–19 ದೃಢವಾಗಿ ಆತ ಕನಿಷ್ಠ 72 ಗಂಟೆ ಸಮಯ ಆಸ್ಪತ್ರೆಯಲ್ಲಿದ್ದರೂ, ಕೊರೊನಾ ರಕ್ಷಕ್‌‌ ವಿಮೆಯ ಪೂರ್ಣ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

ದಾವಣಗೆರೆ

Advertisement
Advertisement Enter ad code here

Title

To Top