ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನಬಾರ್ಡ್ ಭರ್ಜರಿ ಕೊಡುಗೆ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಬೆಂಗಳೂರುನಬಾರ್ಡ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ರೈತರ ಸೇವಾ ಕೇಂದ್ರಗಳಾಗಿ ಪರಿವರ್ತಿಸಿ ಕೃಷಿಗೆ ಸಂಬಂಧಿಸಿದ ವಿವಿಧ ಸಾಲ ಸೌಲಭ್ಯ  ಒದಗಿಸುವ ಯೋಜನೆ ರೂಪಿಸಿದೆ.

ನಬಾರ್ಡ್  2020–21ನೇ ಸಾಲಿಗೆ ದೇಶದ 35 ಸಾವಿರ ಕೃಷಿ ಪತ್ತಿನ ಸೊಸೈಟಿಗಳನ್ನು ಆಯ್ಕೆ ಮಾಡಿದ್ದು,  ವಾಣಿಜ್ಯ  ಬ್ಯಾಂಕ್‌ಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಿದೆ. ರೈತರಿಗೆ ಅಗತ್ಯವಾದ ಕೃಷಿ ಸಂಬಂಧಿ ಸೌಲಭ್ಯವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಏಕಗವಾಕ್ಷಿಯಡಿ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಈ ಯೋಜನೆ ಅಡಿ ಕೃಷಿ ಯಂತ್ರೋಪಕರಣ ಸೇವೆ, ಬಿತ್ತನೆ ಬೀಜ ಉತ್ಪಾದನೆ ತಾಂತ್ರಿಕತೆ, ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಗೋದಾಮು ನಿರ್ಮಾಣ, ಮಾರುಕಟ್ಟೆ ಸೌಲಭ್ಯ, ಸರಕು ಸಾಗಣೆ ವಾಹನ ಖರೀದಿ, ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಶೈತ್ಯಾಗಾರ ಸೇರಿದಂತೆ ಅಗತ್ಯ ಸೇವೆಗಳಿಗೆ ನಬಾರ್ಡ್‌ ಸಾಲ ನೀಡಲಿದೆ.ಕೃಷಿ ಚಟುವಟಿಕೆ ಜೊತೆಗೆ ಸಂಘಗಳು ಬಲವರ್ಧನೆಗೆ  ವ್ಯಾಕ್ಸಿಂಗ್, ಪಾಲಿಷಿಂಗ್, ಪ್ರೀಕೂಲಿಂಗ್ ಚೇಂಬರ್ಸ್, ಕೋಳಿ ಮಾಂಸದ ಫ್ಯಾಕಿಂಗ್, ಅಕ್ಕಿ ಗಿರಣಿ, ಫ್ಲೋರ್ ಮಿಲ್, ವಾಣಿಜ್ಯ ಸಮುಚ್ಚಯ, ಅಡುಗೆ ಅನಿಲ ಏಜೆನ್ಸಿ, ಪೆಟ್ರೋಲ್ ಬಂಕ್ ಆರಂಭಕ್ಕೆ ನಬಾರ್ಡ್‌ ಸಾಲ ನೀಡಲಿದೆ.

ಯೋಜನೆಯ ಅಂದಾಜು ವೆಚ್ಚದ ಸಂಬಂಧ ಕ್ರಿಯಾ ಯೋಜನೆ ರೂಪಿಸಿ ಡಿಸಿಸಿ ಬ್ಯಾಂಕ್‌ ಹಾಗೂ ರಾಜ್ಯ ಅಫೆಕ್ಸ್ ಬ್ಯಾಂಕ್‌ನ ಅನುಮೋದನೆ ಪಡೆದು ನಬಾರ್ಡ್‌ಗೆ ಸಲ್ಲಿಸಬೇಕು. ಬಳಿಕ ಯೋಜನೆಯ ಅಂದಾಜು ವೆಚ್ಚ ಆಧರಿಸಿ ನಬಾರ್ಡ್‌ ಹಣಕಾಸು ನೆರವು ನೀಡಲಿದೆ. ಯೋಜನೆ ಜಾರಿಗೆ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಶೇ 10ರಷ್ಟು ಉಚಿತ ಹಣಕಾಸಿನ ನೆರವು ನೀಡಲಿದೆ.

ನಬಾರ್ಡ್ ಸಾಲಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರ ನಿಗದಿಪಡಿಸಿದೆ. ಈ ಪೈಕಿ ಶೇ 3ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ವಾಪಸ್‌ ನೀಡಲಿದ್ದು, ಉಳಿಕೆ ಶೇ 1ರಷ್ಟು ಬಡ್ಡಿಯನ್ನು ಭರಿಸಬೇಕು. ಸಾಲ ಮರು ಪಾವತಿಗೆ 7 ವರ್ಷಗಳ ಕಾಲಾವಕಾಶವಿದೆ. ನಬಾರ್ಡ್‌ ಈ ಯೋಜನೆಯಿಂದ ಪಡಿತರ ಮತ್ತು ಸಾಲ ವಿತರಣೆ ಜೊತೆಗೆ ಕೃಷಿಪತ್ತಿನ ಸಹಕಾರ ಸಂಘಗಳು ರೈತರ ಸೇವಾ ಕೇಂದ್ರಗಳಾಗಲಿವೆ.

 

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *