Connect with us

Dvgsuddi Kannada | online news portal | Kannada news online

ಮದ್ಯಕ್ಕಾಗಿ ಬಾರ್ ಲಾಕ್ ಮುರಿದು ಕಳ್ಳತನ

ಪ್ರಮುಖ ಸುದ್ದಿ

ಮದ್ಯಕ್ಕಾಗಿ ಬಾರ್ ಲಾಕ್ ಮುರಿದು ಕಳ್ಳತನ

ಡಿವಿಜಿ ಸುದ್ದಿ, ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಮದ್ಯ‌ ಕೂಡ ನಿಷೇಧಿಸಲಾಗಿದೆ. ಮದ್ಯ ಪ್ರಿಯರು, ಮದ್ಯ ಸಿಗದೆ  ಪರದಾಡುತ್ತಿದ್ದು, ಬಾರ್ ಲಾಕ್ ಮುರಿದು  ಕಳ್ಳತನಾಡಿದ್ದಾರೆ.

ಮಂಗಳೂರಿನಲ್ಲಿ ಕೆಲ ಕುಡುಕರು ಮದ್ಯವಿಲ್ಲದೆ ಕಂಗೆಟ್ಟಿದ್ದರಿಂದ ಕಳ್ಳತನ ಮಾಡಿದ್ದಾರೆ. ನಗರದ ಹೊರವಲಯದ ದೇರಳಕಟ್ಟೆಯ ನಿತ್ಯಾನಂದನಗರದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಸ್ವಾಮ್ಯದ ಎಂಎಸ್ ಐಎಲ್ ಮದ್ಯದಂಗಡಿಯಲ್ಲಿ ಕಳವು ಮಾಡಿದ್ದಾರೆ. ಶಟರ್ ಮುರಿದು ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ.ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top