Connect with us

Dvgsuddi Kannada | online news portal | Kannada news online

ಪ್ರವಾಹ ಪ್ರದೇಶಗಳ ಅಧ್ಯಯನ; ಸೆ. 07 ರಂದು ರಾಜ್ಯಕ್ಕೆ  ಕೇಂದ್ರ ತಂಡ: ಆರ್ . ಅಶೋಕ್  

ಪ್ರಮುಖ ಸುದ್ದಿ

ಪ್ರವಾಹ ಪ್ರದೇಶಗಳ ಅಧ್ಯಯನ; ಸೆ. 07 ರಂದು ರಾಜ್ಯಕ್ಕೆ  ಕೇಂದ್ರ ತಂಡ: ಆರ್ . ಅಶೋಕ್  

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಿಂದ  ಪ್ರವಾಹ ಉಂಟಾಗಿ  ಆಗಿರುವ ನಷ್ಟದ ಅಧ್ಯಯನ ನಡೆಸಲು ಸೆ. 7 ರಂದು ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಬರಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಹಿರಿಯ ಅಧಿಕಾರಿ ಕೆ.ವಿ.ಪ್ರತಾಪ್‌ ಅವರ ನೇತೃತ್ವದಲ್ಲಿ ಆರು ಮಂದಿ ಅಧಿಕಾರಿಗಳನ್ನು ಒಳಗೊಂಡ ತಂಡ ಬರಲಿದೆ.  ಸೆ. 7 ರಂದು ಮುಖ್ಯಮಂತ್ರಿಯರ ಜತೆ ಚರ್ಚೆ ನಡೆಸಲಿದ್ದು,  ಸೆ. 8 ರಂದು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಿದೆ. ಸೆ.9 ರಂದು ಕೇಂದ್ರದ ತಂಡದ ಮತ್ತೆ ಚರ್ಚೆ ನಡೆಸಿ, ರಾಜ್ಯಕ್ಕೆ 4,800 ಕೋಟಿ ಬಿಡುಗಡೆಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

ಸಿಎಂ ವೈಮಾನಿಕ  ಸಮೀಕ್ಷೆ ನಂತರ  ಕೇಂದ್ರ ಸರ್ಕಾರಕ್ಕೆ  ಅಧಿಕಾರಿಗಳವನ್ನು ಕಳುಹಿಸುವಂತೆ ಮನವಿ ಮಾಡಲಾಗಿತ್ತು.  ನಮ್ಮ ಮನವಿಗೆ ಸ್ಪಂದಿಸಿದೆ ಕೇಂದ್ರ ಅಧಿಕಾರಿಗಳನ್ನು ಕಳುಹಿಸಿದೆ.  ಕೊಡಗು, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದೆ ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top