Connect with us

Dvgsuddi Kannada | online news portal | Kannada news online

ಕವಿತೆ: ಪೂಜೆ – ಸಜೆ

ಅಂಕಣ

ಕವಿತೆ: ಪೂಜೆ – ಸಜೆ

(ಹಾಸ್ಯ ದೃಷ್ಟಿಯಿಂದ ಮಾತ್ರ ನೋಡಿರಿ,

   ಅನ್ಯಥಾ ಅನರ್ಥ ಭಾವಿಸದೀರಿ)

ಗಂಡಾಂತರಗಳ ಗುಂಡಿಗೆ
ಬಿದ್ದು ಒದ್ದಾಡುವನು ಗಂಡನು
ಹೆಂಡವ ಅತಿ ಕುಡಿಯುವ ಗಂಡಿನ
ಜೀವ ಹಿಂಡುವಳು ಹೆಂಡತಿಯು.

ಮಡದಿ ಆರ್ಭಟದ ಪ್ರಳಯಕೆ
ದಂ ಕಳೆದುಕೊಂಡವನು ಪತಿ
ಮನೆ ಮಡದಿ ಮಕ್ಕಳ ರಂಪಾಟಕೆ
ಮೂಕ ಕಿವುಡನಾಗುವ ಪಶುಪತಿ.

ವರುಷವೆಲ್ಲ ಗಂಡನ
ಹರುಷವೆಲ್ಲ ಕಿತ್ತುಕೊಂಡು
ಪುರುಷೋತ್ತಮರ ಪೂಜಿಸುವ
ಪರಮ ಪತಿವ್ರತೆಯರ ದಿನವು ಬಂತು.

ಭೀಮನ ಅಮಾವಾಸ್ಯೆಯಂದು
ನೇಮ ನಿಷ್ಠೆಯಿಂದ ಪೂಜೆಗೈದು
ಪ್ರೇಮ ಪ್ರೀತಿಯ ಮಾತನಾಡುವ
ಧರ್ಮಪತ್ನಿಯರ ದಿನವು ಬಂತು.

ವರ್ಷಕ್ಕೊಮ್ಮೆ ಆದರದ ಸಂಸ್ಕಾರ
ವರ್ಷಧಾರೆಯಂಗೆ ಪತ್ನಿಯ ಸತ್ಕಾರ
ದಾಂಪತ್ಯ ನ್ಯಾಯಾಲಯದಿ ನಿತ್ಯ ಸಜೆ
ಈ ನೆಪದಲ್ಲಾದರೂ ಪತಿಗಿರಲಿ ಪೂಜೆ.

ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9740050150.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top