ಕವಿತೆ -ಗೆದ್ದವಳು…!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಅಮ್ಮನಾಗಿ ಜನ್ಮವ
ನೀಡಿ ಜಗಕ್ಕೆ ತಂದವಳು
ಅಕ್ಕನಾಗಿ ಅಕ್ಕರೆ ಕೊಟ್ಟು
ಆರೈಕೆಯ ಮಾಡಿದವಳು.

ತಂಗಿಯಾಗಿ ತರಲೇ ಮಾಡಿ
ಮಮತೆ ನೀಡಿದವಳು
ಅಜ್ಜಿಯಾಗಿ ಜೀವನ ಮೌಲ್ಯಗಳ
ಒರತೆ ನಿಧಿಯಾದವಳು.

ಅತ್ತೆಯಾಗಿ ಮಗಳ ಬಾಳ
ಸಂಗಾತಿಯಾಗಲು ಧಾರೆರೆದವಳು
ಸೊಸೆಯಾಗಿ ಸ್ನೇಹ ಪ್ರೀತಿಯ
ಜಲಧಾರೆಯ ಸುಧೆಯಾದವಳು.

ಅತ್ತಿಗೆಯಾಗಿ ಹಿರಿಯಕ್ಕನಂತೆ
ಮನೆಗೆ ಬಂದು ಪೊರೆದವಳು
ನಾದಿನಿಯಾಗಿ ಕಿರಿಕ್ತಂಗಿಯಂತೆ
ನಮಗೆ ನಲ್ಮೇಯ ತಂದವಳು.

ದೊಡ್ಡಮ್ಮ ಚಿಕ್ಕಮ್ಮಳಾಗಿ
ಒಲ್ಮೇಯಿಂದ ಸಲುಹಿದವಳು
ಗುರುವಾಗಿ ವಿದ್ಯೆ ಬುದ್ಧಿಯ
ನೀಡಿ ಜೀವನ ಬೆಳಕಾದವಳು.

ಸಹೋದ್ಯೋಗಿಯಾಗಿ ವೃತ್ತಿ
ಸಲಹೆ ಸೂಚನೆಗಳ ಕೊಟ್ಟವಳು
ಗೆಳತಿಯಾಗಿ ಸರಿ ತಪ್ಪುಗಳ
ತಿದ್ದಿ ತೀಡಿ ಜೊತೆಯಾದವಳು.

ಮಡದಿಯಾಗಿ ಮನೆತನದ
ಗೌರವ ಬೆಳಸಲು ಬಂದವಳು
ಮಗಳಾಗಿ ಬಾಳಿನ ಜವಾಬ್ದಾರಿ
ಹೊಣೆಗಾರಿಕೆಯ ತಿಳಿಸಿದವಳು.

ತನ್ನ ತಾನು ಸುಟ್ಟುಕೊಂಡು ತನ್ನವರಿಗೆ
ಬಾಳ ಬೆಳಕ ನೀಡುವ ಜ್ಯೋತಿಯಾದವಳು
ಬಾಳ ಪಯಣದ ಪ್ರತಿ ಹಂತಹಂತದಲ್ಲೂ
ತನ್ನೆಲ್ಲ ಪಾತ್ರವ ನಿರ್ವಹಿಸಿ ಗೆದ್ದವಳು.

 

ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
9740050150

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *