
ಚಿತ್ರದುರ್ಗದ ಮುರುಘಾ ಮಠದ `ಶರಣ ಸಂಸ್ಕೃತಿ ಉತ್ಸವ’ ಮುಗಿಸಿಕೊಂಡು ಕನಕ ಪೀಠದ ಶ್ರೀ ನಿರಂಜನಂದ ಪುರಿ ಸ್ವಾಮೀಜಿ ಮತ್ತು ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಚಿತ್ರದುರ್ಗ-ಹೊಳಲ್ಕೆರೆ ಮಾರ್ಗ ಮಧ್ಯೆ ತೆರಳುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದ ನರಿಯನ್ನು ಕಂಡ ಶ್ರೀಗಳು ಕಾರನ್ನು ನಿಲ್ಲಿಸಿ ನೀರುಣಿಸಿ ಉಪಚರಿಸಿದರು.



