Connect with us

Dvgsuddi Kannada | online news portal | Kannada news online

ಈರುಳ್ಳಿ ರಪ್ತು ನಿಷೇಧ  ಖಂಡಿಸಿ ಪ್ರತಿಭಟನೆ

ದಾವಣಗೆರೆ

ಈರುಳ್ಳಿ ರಪ್ತು ನಿಷೇಧ  ಖಂಡಿಸಿ ಪ್ರತಿಭಟನೆ

ಡಿವಿಜಿಸುದ್ದಿ.ಕಾಂ, ಜಗಳೂರು: ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧ ಮಾಡಿರುವುದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲೂಕು ಕಛೇರಿಯ ಮುಂಭಾಗ ರೈತರು ಪ್ರತಿಭಟನೆ ನಡೆಸಿ  ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.  ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧಕ್ಕೆ ಇತ್ತೀಚೆಗೆ  ಸೆ.29  ರಂದು ಆದೇಶ ಮಾಡಿದ್ದರಿಂದ ರೈತರು ಅಲ್ಪ ಸ್ವಲ್ಪ ಮಳೆಗೆ ಬೆಳೆದ ಈರುಳ್ಳಿಗೆ ಉತ್ತಮ ಬೆಲೆ ಸಿಗದೇ ನಷ್ಟ ಅನುಭವಿಸುವಂತಾಗಿದೆ.

ಬೆಳೆದ ಬೆಳೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗದೆ ಬಿತ್ತನೆ ಮಾಡಲು ತಂದ ಸಾಲವನ್ನು ಸಹ ತೀರಿಸಲಾಗದಂತಹ ಪರಿಸ್ಥಿತಿ ಉದ್ಭವಿಸಿದ್ದು ಕೇಂದ್ರ ಸರಕಾರ ಈರುಳ್ಳಿ ರಪ್ತು ನಿಷೇಧ ಮಾಡಿರುವುದು ಅವೈಜ್ಞಾನಿಕವಾಗಿದ್ದು ಪ್ರತಿ ಕ್ವಿಂಟಾಲ್ ಈರುಳ್ಳಿಯನ್ನು ಬೆಳೆಯಲು ರೈತರು 1 ಸಾವಿರದಿಂದ ಒಂದುವರೆ ಸಾವಿರದವರೆಗೂ ಖರ್ಚು ಆಗಲಿದ್ದು ಪ್ರತಿ ಎಕರೆಗೆ 35 ಸಾವಿರದಿಂದ 40 ಸಾವಿರ ಖರ್ಚು ತಗುಲಿದೆ .

ಆದರೆ ಕೇಂದ್ರ ಸರಕಾರ  ಈರುಳ್ಳಿ ರಪ್ತು ನಿಷೇಧ ಮಾಡಿದ್ದರಿಂದ ಕೇಂದ್ರ ಸರಕಾರ ಪ್ರತಿ ಕ್ವಿಂಟಾಲ್‌ಗೆ 3500 ರಿಂದ 4000 ರೂ ಬೆಂಬಲ ಬೆಲೆ ನೀಡಬೇಕು. ಈ ಜತೆ ಈರುಳ್ಳಿ ಮೇಲಿನ ರಪ್ತು ನಿಷೇಧವನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top