Connect with us

Dvgsuddi Kannada | online news portal | Kannada news online

ಭಾರತ- ಪಾಕ್  ಕ್ರಿಕೆಟ್ ಸರಣಿ: ಅಖ್ತರ್ ಹೇಳಿಕೆಗೆ  ತಿರುಗೇಟು ನೀಡಿದ ಕಪೀಲ್ ದೇವ್

ಪ್ರಮುಖ ಸುದ್ದಿ

ಭಾರತ- ಪಾಕ್  ಕ್ರಿಕೆಟ್ ಸರಣಿ: ಅಖ್ತರ್ ಹೇಳಿಕೆಗೆ  ತಿರುಗೇಟು ನೀಡಿದ ಕಪೀಲ್ ದೇವ್

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತ- ಪಾಕ್ ಸರಣಿ ಆಯೋಜನೆ ಮೂಲಕ ಹಣ ಸಂಗ್ರಹಿಸಬಹುದೆಂದು ಹೇಳಿಕೆ ನೀಡಿದ್ದ ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಗೆ ಭಾರತದ ಮಾಜಿ ಕ್ರಿಕೆಟರ್ ಕಪೀಲ್ ದೇವ್  ತಿರುಗೇಟು ನೀಡಿದ್ದಾರೆ. ಭಾರತಕ್ಕೆಹಣದ ಅವಶ್ಯಕತೆ ಇಲ್ಲ, ಜೀವನಕ್ಕೆ ಕುತ್ತು ತರುವ ಕೆಲಸ ಕೈ‌ ಹಾಕಬಾರದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಹಣಕ್ಕಾಗಿ ಪಾಕಿಸ್ತಾನ ಮತ್ತು ಇಂಡಿಯಾ ಮತ್ತೆ ಸರಣಿ ಆಡಬೇಕು ಎಂದು ಶೋಯೆಬ್ ಹೇಳಿದ್ದರು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ಭಾರತಕ್ಕೆ ಹಣ ಬೇಕಾಗಿಲ್ಲ. ನಾವು ಏಕೆ ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ದೂಡಬೇಕು. ಈಗ ಮನೆಯಲ್ಲೇ ಕುಳಿತು ವಿಶ್ರಾಂತಿ ಪಡೆಯಿರಿ. ಜೀವಕ್ಕೆ ಕುತ್ತು ತರುವ ಕೆಲಸಕ್ಕೆ ಯಾಕೆ ಕೈಹಾಕಬೇಕು.

ಈ ವಿಚಾರದಲ್ಲಿ ನಮಗೆ ಯಾರ ಸಲಹೆಯು ಬೇಕಾಗಿಲ್ಲ. ನಮ್ಮಲ್ಲಿ ಜನರನ್ನು ಸುರಕ್ಷಿತವಾಗಿ ಇಡಲು ಅಧಿಕಾರಿಗಳು ಬಹಳ ಕಷ್ಟಪಡುತ್ತಿದ್ದಾರೆ.‌ಮನೆಯಲ್ಲಿಯೇ ಇದ್ದು ಸಹಕರಿಸೋಣ. ಈ ರೀತಿಯ ವಿಚಾರಗಳನ್ನು ಹೇಳುವುದು ಸುಲಭ. ಆದರೆ ಆಯೋಜನೆ ಮಾಡುವುದು ಕಷ್ಟ ಎಂದು ಕಪಿಲ್ ಅಖ್ತರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top