ಈ ಮಳೆಗಾಲದಲ್ಲಿ ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ಮಧ್ಯೆ ಈಗ ಕೊರೋನಾ ಬೇರೆ ಬಂದು ಬಿಟ್ಟಿದೆ. ಮಳೆಗಾಲದಲ್ಲಿ ಶೀತ, ಕೆಮ್ಮು, ಗಂಟಲು ಕೆರೆತ ಸಾಮಾನ್ಯ. ಈಗ ಕೊರೊನಾ ಸಮಸ್ಯೆಯೋ ಅಥವಾ ಸಾಮಾನ್ಯ ಶೀತ ಕೆಮ್ಮು ಬಂದಿದೆಯೋ ಎನ್ನುವುದು ಗೊತ್ತಾಗುವುದಿಲ್ಲ.

ಇನ್ನು ಶ್ವಾಸಕೋಶದ ಸಮಸ್ಯೆ ಇರುವವರಂತೂ ತಮ್ಮ ಆರೋಗ್ಯದ ಬಗ್ಗಷ್ಟೇ ಗಮನ ಹರಿಸದೆ ಇದ್ದರೆ, ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತದೆ. ಈ ಎಲ್ಲಾ ರೋಗಗಳಿಗೆ ಶುಂಠಿಯೇ ಮನೆಯ ಮದ್ದು.
ಒಣ ಕೆಮ್ಮುಗೆ ಏನು ಮಾಡಬೇಕು..?
ಒಂದು ವೇಳೆ ನಿಮಗೆ ಶೀತ, ಕೆಮ್ಮು, ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬಂದರೆ ಈ ರೀತಿ ಮಾಡಿ; ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಕಾಣಲು ಮರೆಯಬೇಡಿ. ಒಣ ಕೆಮ್ಮು ಕಂಡು ಬಂದರೆ ಶುಂಠಿ ರಸಕ್ಕೆ ಜೇನು, ತುಳಸಿ ರಸ ಹಾಗು ಕರಿಮೆಣಸಿನ ಪುಡಿ ಹಾಕಿ ಸೇವಿಸಿ. ಇದರಿಂದ ಒಣ ಕೆಮ್ಮು
ನಿವಾರಣೆಯಾಗುತ್ತದೆ.

ಕಫ ನಿವಾರಣೆ ಹೇಗೆ
ಶುಂಠಿ ರಸ ಮತ್ತು ದಾಳಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದಿಷ್ಟು ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಈ ನೀರನ್ನು ತಣ್ಣಗಾದ ಮೇಲೆ ಸೇವಿಸಿ. ಇದರಿಂದ ಕಫ ನಿವಾರಣೆಯಾಗುತ್ತದೆ.
ಗಂಟಲು ನೋವು ನಿವಾರಣೆ
ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ, ಅದಕ್ಕೆ ಅರ್ಧ ಹೆಚ್ಚಿದ ಈರುಳ್ಳಿ, ಬೆಲ್ಲ, ಕರಿಮೆಣಸು ಹಾಕಿ ಕುದಿಸಿ ಸೋಸಿ ಕುಡಿದರೆ ಗಂಟಲು ನೋವು,ಕೆಮ್ಮು, ಶೀತ, ಗಂಟಲು ಕೆರೆತ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.



