Connect with us

Dvgsuddi Kannada | online news portal | Kannada news online

ಡಿ. 1ರಿಂದ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ

ದಾವಣಗೆರೆ

ಡಿ. 1ರಿಂದ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ

ಡಿವಿಜಿ ಸುದ್ದಿ, ದಾವಣಗೆರೆ :  ಜಿಲ್ಲೆಯಲ್ಲಿ ಗಂಟಲುಮಾರಿ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನವನ್ನು  ಡಿ.11 ರಿಂದ ಡಿ.31 ವರೆಗೆ ಜಿಲ್ಲಾದ್ಯಂತ ಶಾಲೆಗಳಲ್ಲಿ ಕೈಗೊಂಡು ಶೇ.90 ರಷ್ಟು ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ನ.26 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಇಂದ್ರಧನುಷ್ ಲಸಿಕಾ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಪ್ರತಿ ಮಕ್ಕಳಿಗೂ ಈ ಲಸಿಕೆ ನೀಡಬೇಕು. ಶಾಲೆಯಲ್ಲಿರುವ ಮತ್ತು ಶಾಲೆಯಿಂದ ಹೊರಗುಳಿದ ಪ್ರತಿ ಮಗುವಿಗೂ ಈ ಲಸಿಕಾ ಅಭಿಯಾನ ತಲುಪಬೇಕು. ಈ ಅಭಿಯಾನಕ್ಕೆ ಎಲ್ಲಾ ಇಲಾಖೆಯವರು ಸಹಕಾರ ನೀಡುವುದರ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ಏಜೆನ್ಸಿಗೆ ನೋಟಿಸ್

ಜಿಲ್ಲಾ ಆಸ್ಪೆತ್ರಗಳಲ್ಲಿ ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ವಿಳಾಂಬ ಬಗ್ಗೆ ತರಾಟೆ ತಗೆದುಕೊಂಡ ಜಿಲ್ಲಾಧಿಕಾರಿಗಳು, ಉದ್ಯೋಗಿಗಳಿಗೆ ಸರಿಯಾಗಿ ಸಂಬಳ ನೀಡದ   ಬಯೋ ಮೆಡಿಕಲ್ ಏಜೆನ್ಸಿಗೆ ನೋಟಿಸ್ ನೀಡಿ. 48 ಗಂಟೆಗಳಲ್ಲಿ ಕೆಲಸಗಾರರ ಖಾತೆಗೆ ಸಂಬಳ ಪಾವತಿಸಬೇಕು. ಇಲ್ಲವಾದರೆ ಅಂತಹ ಏಜನ್ಸಿಗಳನ್ನು ರದ್ದುಗೊಳಿಸಿ, ಹೊಸ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.

ಜಿಲ್ಲೆಯ 2 ರಿಂದ 3 ತಾಲ್ಲೂಕುಗಳಲ್ಲಿ ಟೆಂಡರ್‍ದಾರರು ಕೆಲಸಗಾರಿಗೆ ಸಿಯಾಗಿ ಸಂಬಳ ಪಾವತಿಸುತ್ತಿಲ್ಲ. ಇದರಿಂದಾಗಿ ಸಿಬ್ಬಂದಿಗಳು ತಾಜ್ಯ ವಿಲೇವಾರಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳಿ ಮಾಹಿತಿಗೆ ಗರಂ ಆದ ಜಿಲ್ಲಾಧಿಕಾರಿ, ಏಜೆನ್ಸಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು.

ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಪ್ರತಿ ತಿಂಗಳು ಸರಿಯಾಗಿ ಬಿಲ್ ಪಾವತಿಸದ ಸುಶೃತ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ ಏಜೆನ್ಸಿಗೆ ನೋಟಿಸ್ ನೀಡಿ. 48 ಗಂಟೆಗಳಲ್ಲಿ ಕೆಲಸಗಾರರ ಖಾತೆಗೆ ಸಂಬಳ ಪಾವತಿಸಬೇಕು. ಇಲ್ಲವಾದರೆ ಅಂತಹ ಏಜನ್ಸಿಗಳನ್ನು ರದ್ದುಗೊಳಿಸಿ, ಹೊಸ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.

ಎಸ್‍ಎಂಓ ಡಾ.ಶ್ರೀಧರ್ ಮಾತನಾಡಿ, , ಜಿಲ್ಲೆಯಲ್ಲಿರುವ 02 ವರ್ಷದಿಂದ 16 ವರ್ಷದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿರುವ ಸ್ಲಂ ಏರಿಯಾ, ಇಟ್ಟಿಗೆ ಭಟ್ಟಿ, ಕೊಳಚೆ ಪ್ರದೇಶ ಹಾಗೂ ಇತರೆ ಸ್ಥಳಗಳಲ್ಲಿ ವಾಸಿಸುವ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ನೀಡಬೇಕೆಂಬ ಕಡ್ಡಾಯ ಗುರಿ ನಿಗದಿಪಡಿಸಲಾಗಿದೆ. ಚುಚ್ಚುಮದ್ದು ವಂಚಿತ ಮಕ್ಕಳಿಗೆ ಹನ್ನೊಂದು ಮಾರಕ ರೋಗಗಳ ವಿರುದ್ದ ಈ ಲಸಿಕೆ ನೀಡಲಾಗುವುದು.

ಆರ್‍ಸಿಹೆಚ್‍ಓ ಡಾ.ಶಿವಕುಮಾರ್ ಮಾತನಾಡಿ, ಈ ಅಭಿಯಾನವನ್ನು ‘ಶಾಲಾ ಲಸಿಕಾ ಅಭಿಯಾನ’ ಎಂಬ ಹೆಸರಿನ ಮೂಲಕ ಅನುಷ್ಠಾನಗೊಳುಸಲಾಗುವುದು. ಶಾಲೆಯವರ ಸಹಭಾಗಿತ್ವದಲ್ಲಿ ಅಭಿಯಾನ ನಡೆಸಲಾಗುವುದು. ಈ ಲಸಿಕಾ ಅಭಿಯಾನ ಯಶಸ್ಸು ಸಾಧಿಸಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬೆಸ್ಕಾಂ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯವರ ಸಹಕಾರ ಅವಶ್ಯವಾಗಿದ್ದು, ಎಲ್ಲಾ ಇಲಾಖೆಯವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಅಭಿಯಾನ ಅನುಷ್ಟಾನದಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮುಖ್ಯವಾಗಿದೆ. ಡಿ.11 ರಿಂದ ಡಿ.31 ರವರೆಗೆ ಶಾಲಾ ಲಸಿಕಾ ಅಭಿಯಾನವನ್ನು ಆರಂಭಿಸಲಾಗುವುದು. ಈ ಸಮಯದಲ್ಲಿ ಪ್ರತಿಯೊಂದು ಶಾಲೆಯವರು ಸಹಕಾರ ನೀಡಬೇಕುಲಸಿಕೆ ನೀಡುವ ದಿನ ಶಾಲೆಯ ಎಲ್ಲಾ ಮಕ್ಕಳು ಹಾಜರಿರುವಂತೆ ಮುಖ್ಯೋಪಾಧ್ಯಾಯರು ಸೂಚಿಸಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ವಿಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಡಾ.ಪ್ರಕಾಶ್, ಜಿಲ್ಲಾ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ವೃತ್ತಿ ನಿರತ ವೈದ್ಯರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top