ಡಿವಿಜಿಸುದ್ದಿ.ಕಾಂ. ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ವೈದ್ಯರಿಲ್ಲದೆ ರೋಗಿಗಳು ಪರದಾಟ ನಡೆಸಿದ್ದಾರೆ. ಬೆನ್ನು ಮೂಳೆ ಮುರಿದ ತಾಯಿಯ ನೋವು ಕಂಡ ಮಗ ಕಣ್ಣೀರು ಹಾಕುತ್ತಾಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ನೋವು ತೋಡಿಕೊಂಡಿದ್ದಾನೆ.
ಕೆರೆ ಗುಡಿಹಳ್ಳಿ ಗ್ರಾಮದ ಯಂಕಮ್ಮ ಬೆನ್ನು ಮೂಳೆ ಮುರಿದಕೊಂಡ ರೋಗಿಯಾಗಿದ್ದು, ರಾತ್ರಿ ವೇಳೆ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ರೋಗಿಯನ್ನು ಯಾರು ಕೇಳೋರಿಲ್ಲದೆ ಪರದಾಟ ನಡೆಸಿದ್ದಾರೆ. ನೈಟ್ ಶಿಫ್ಟ್ ಗೆ ವೈದ್ಯರನ್ನು ಹಾಕಿದ್ದರು. ಯಾರು ಕೂಡ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದರಿಂದ ಪ್ರಥಮ ಚಿಕಿತ್ಸೆ ನೀಡುವವರೇ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಸೆಲ್ಫಿ ವೀಡಿಯೋ ಮಾಡಿ ಸರ್ಕಾರಿ ಆಸ್ಪತ್ರೆಯ ಸ್ಥಿತಿಯನ್ನು ಯುವಕ ತೋಡಿಕೊಂಡಿದ್ದಾನೆ. ಈ ವಿಡಿಯೋ ರಾಜ್ಯದ ಆರೋಗ್ಯ ಇಲಾಖೆಯ ದುಸ್ಥಿತಿಯನ್ನು ತೋರಿಸುವಂತಿದೆ. ಹೋಬಳಿ ಮಟ್ಟದ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಕರುಣಾಜನಕ ಸ್ಥಿತಿಯನ್ನು ಈ ಒಂದು ವಿಡಿಯೋ ತೋರಿಸುವಂತಿದೆ.
ಬಳ್ಳಾರಿ ಬಿಜೆಪಿ ಸಂಸದರ ತರವರು ಊರಲ್ಲಿಯೇ ಇಂತಹ ದುಸ್ಥಿತಿಗೆ ಕಾರಣವಾಗಿದ್ದು, ಆರೋಗ್ಯ ಸಚಿವರೇ ಇದಕ್ಕೆಲ್ಲ ಉತ್ತರಿಸಬೇಕಿದೆ.



