ಡಿವಿಜಿ ಸುದ್ದಿ, ಹರಿಹರ: ಶ್ರೀ ಸಿದ್ದೇಶ್ವರ ಸೇವಾ ಬಳಗದಿಂದ ಕಳೆದ ಒಂದು ವಾರದಿಂದ ಲಾಕ್ ಡೌನ್ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ನಗರದ ಸರ್ಕಾರಿ ಅಧಿಕಾರಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಬಗಳಗದ ಸದಸ್ಯರು ಪ್ರತಿ ದಿನ ಒಬ್ಬರಂತೆ ಸ್ವಯಂ ಪ್ರೇರಣೆಯಿಂದ ದಾಸೋಹ ವ್ಯವಸ್ಥೆ ಮಾಡಿದ್ದಾರೆ. ನಗರಸಭೆ ಸಿಬ್ಬಂದಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಶಾಸಕ ಎಸ್. ರಾಮಪ್ಪ, ಎಂ.ಆರ್. ಸತ್ಯನಾರಾಯಣ, ಶರತ್ ,ಶಶಿಕುಮಾರ್,ವಿಜಯ ಕುಮಾರ್ ಹುಲ್ಮನಿ, ಸತೀಶ್, ಅನಂತರಾಮ ಶ್ರೇಷ್ಠಿ, ಜಿ.ಸಿ ಹಿರೇಮಠ, ನಾಗಡಗೌಡ, ಡಾ. ಎಸ್. ಎಚ್. ಪ್ಯಾಟಿ, ಸಿ.ಎನ್. ಹುಲಿಗೇಶ್, ನಾಗೇಂದ್ರಪ್ಪ, ಖಲೀಲ್ ಸಾಬ್, ಬಸಪ್ಪ ಸೇರಿದಂತೆ ಇನ್ನು ಅನೇಕರು ಕೈ ಜೋಡಿಸಿದ್ದಾರೆ



