ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಉಚ್ಚoಗಿದುರ್ಗದ ಕ್ಷೇತ್ರದಿಂದ ರಾಜಕುಮಾರ್ ಆಯ್ಕೆಯಾಗಿದ್ಧಾರೆ.
2020-21 ನೇ ಸಾಲಿನ ಬ್ಯಾಂಕ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು ಉಚ್ಚoಗಿದುರ್ಗ ಕ್ಷೇತ್ರದಿಂದ ಆಯ್ಕೆಯಾದ ರಾಜ್ ಕುಮಾರ್ ಉಚ್ಚoಗೆಮ್ಮನ ದೇವಸ್ಥನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನಂತರ ಗ್ರಾಮದ ಕಾಂಗ್ರೆಸ್ ಮುಖಂಡರು ಹೂವಿನಹಾರ ಹಾಕಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಳವಾರ ಮಂಜಪ್ಪ,ಅಂಜಿನಪ್ಪ,ಶಿವಕುಮಾರ್ ಸ್ವಾಮಿ, ಎಸ್ ಹಾಲಪ್ಪ, ಬಸವನಗೌಡ್ರು, ಹನುಮಂತಪ್ಪ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.