Connect with us

Dvgsuddi Kannada | online news portal | Kannada news online

ನ.2ರಂದು  ಎಂ.ಪಿ.ರವೀಂದ್ರ ಪುಣ್ಯ ಸ್ಮರಣೆ

ಹರಪನಹಳ್ಳಿ

ನ.2ರಂದು  ಎಂ.ಪಿ.ರವೀಂದ್ರ ಪುಣ್ಯ ಸ್ಮರಣೆ

ಡಿವಿಜಿಸುದ್ದಿ.ಕಾಂ, ಹರಪನಹಳ್ಳಿ: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಪುತ್ರ   ಎಂ.ಪಿ. ರವೀಂದ್ರ ಅವರ  ಪ್ರಥಮ ವರ್ಷದ ಪುಣ್ಯ ಸ್ಮರಣೆ  ನ.2 ರಂದು ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್,  ನ. 2 ರಂದು ಹರಪನಹಳ್ಳಿಯಲ್ಲಿ ಎಂ.ಪಿ.ರವೀಂದ್ರ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ  ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್, ಮಾಜಿ ಸ್ವೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ, ಸಿ.ಎಂ ಇಬ್ರಾಹಿಂ ಸೇರಿದಂತೆ  ಪಕ್ಷ ಮುಖಂಡರು, ಶಾಸಕರು, ಬಳ್ಳಾರಿ ದಾವಣಗೆರೆ  ಜಿಲ್ಲೆಯ ರಾಜಕೀಯ ಮುಖಂಡರು,  ರವೀಂದ್ರ ಅವರ ಹಿತೈಷಿಗಳು  ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯಲ್ಲಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಹರಪನಹಳ್ಳಿ ತಾಲೂಕಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ 371ಜೆ  ಸೌಲಭ್ಯ ಒದಗಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರು ತಾಲೂಕಿನ ಜನತೆ ಮರೆಯದಂತಹ ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಸಹೋದರ ಎಂ.ಪಿ.ರವೀಂದ್ರ ಅವರು ಹರಪನಹಳ್ಳಿ ತಾಲೂಕಿಗೆ 371ಜೆ ಸೌಲಭ್ಯ, 60 ಕೆರೆಗಳಿಗೆ ತುಂಗಭದ್ರ ನದಿಯಿಂದ ನೀರು ತುಂಬಿಸುವುದು, ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆಯಂತಹ ಮೂರು ಶಾಶ್ವತವಾದ ಯೋಜನೆಗಳನ್ನು ಜಾರಿಗೊಳಿಸಿ  ಜನರ ಋಣ ತೀರಿಸಿದ್ದಾರೆ. ಅವರ ಅಗಲಿಕೆ ನಂತರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ  ಕಾರ್ಯಕ್ರಮ‌ ನಡೆಸಲು ಹೃದಯ ಭಾರವಾಗಿದೆ‌ ಎಂದರು.

ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಡಿ.ಅಬ್ದುಲ್ ರಹಿಮಾನ್, ಚಿಕ್ಕೇರಿ ಬಸಪ್ಪ, ಜಾವೀದ್, ಮುತ್ತಿಗಿ ಜಂಬಣ್ಣ, ಎಸ್.ಜಾಕೀರ್ ಹುಸೇನ್, ಉದಯಶಂಕರ್, ವಸಂತಪ್ಪ, ಕಿತ್ತೂರು ಕೊಟ್ರಪ್ಪ, ತಾಲೂಕು ಪಂಚಾಯತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಅರುಣ್ ಪೂಜಾರ್,  ಮೈದೂರ್ ರಾಮಪ್ಪ, ನೀಲಗುಂದ ವಾಗೇಶ್, ತೆಲಗಿ ಉಮಾಕಾಂತ್, ಹಳ್ಳಿಕೇರಿ ರಾಜಪ್ಪ, ಎಲ್.ಮಂಜ್ಯಾನಾಯ್ಕ ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top