ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ತೌಡೂರು ತಾಂಡದ ನಿಂಗನಾಯ್ಕ ಅವರ ಮನೆಯಲ್ಲಿ ಕಳ್ಳರೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದೆ ವೇಳೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಅಡಿಗೆ ಭಟ್ಟರಾಗಿರುವ ನಿಂಗನಾಯ್ಕ ಕೆಲಸಕ್ಕೆ ಹೋಗಿದ್ದರು, ಅವರ ಪತ್ನಿ ರಾತ್ರಿ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಸಮಯಕ್ಕಾಗಿ ಕಾದು ಮನೆಗೆ ಬಂದಿರುವ ಕಳ್ಳರು, ಕಬ್ಬಿಣದ ಸಲಾಕೆಯಿಂದ ಬಾಗಿಲು ಮುರಿದು ಒಳ ನುಗ್ಗಿ, ಕೋಣೆಯಲ್ಲಿದ್ದ ₹ 18,000 ರೂ ನಗದು ಜತೆಗೆ 30 ಸಾವಿರ ಮೌಲ್ಯದ ಚಿನ್ನದ ಕಿವಿಯೋಲೆ, 10 ಸಾವಿರ ಮೌಲ್ಯ ಬೆಳ್ಳಿ ಸಾಮಾನುಗಳನ್ನು ದೋಚಿದ್ದಾರೆ ಎಂದು ನಿಂಗನಾಯ್ಕ ತಿಳಿಸಿದ್ದಾರೆ . ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



