ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ನಟ ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಅಂಗವಾಗಿ ಗಾನಸುಧೆ ಕಲಾ ಬಳಗವು ಮಹಾನಗರ ಪಾಲಿಕೆ ಆವರಣದಲ್ಲಿ ನಾಳೆ ಸಂಜೆ 6 ಗಂಟೆಗೆ ಜೂನಿಯರ್ ವಿಷ್ಣುವರ್ಧನ್ ಅವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಉದ್ಘಾಟನೆಯನ್ನು ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬಿ ಜಿ ಅಜಯ್ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರವೇ ಜಿಲ್ಲಾಧ್ಯಕ್ಷ ಎಂ ಎಸ್ ರಾಮೇಗೌಡ್ರು, ಗೌರವಾಧ್ಯಕ್ಷ ವಾಸುದೇವರಾಯ್ಕರ್, ಶ್ರೀನಿವಾಸ ,ಚಿನ್ನಿಕಟ್ಟಿ ಮಹೇಶ್ವರಪ್ಪ, ತಿಮ್ಮೇಶ್, ಹನುಮಂತು, ಲೋಕೇಶ್, ಗೋಪಾಲ ದೇವರಮನೆ, ಪಾಮನಹಳ್ಳಿ ನಾಗರಾಜ್, ಚಿಂದೋಡಿ ಶಂಭುಲಿಂಗಪ್ಪ, ಕೆಎಸ್ ಗೋವಿಂದರಾಜ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಗಾನಸುಧೆ ಕಲಾ ಬಳಗದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ತಿಳಿಸಿದ್ದಾರೆ.