ಡಿವಿಜಿ ಸುದ್ದಿ, ದಾವಣಗೆರೆ: ನಗರದ ಪಿ. ಬಿ.ರಸ್ತೆಯ ಕೃಷಿ ಇಲಾಖೆ ಎದುರು ವಾಸಿಸುವ ಕೂಲಿ ಕಾರ್ಮಿಕರಿಗೆ ನವಚೈತನ್ ಸೇವಾ ಸಂಸ್ಥೆಯ ಗೌರವ ಅಧ್ಯಕ್ಷ , ನ್ಯಾಯವಾದಿ ರೇವಣ್ಣ ಬಳ್ಳಾರಿ ಅವರು ಆಹಾರ ಕಿಟ್ ವಿತರಿಸಿದರು.
ವಿನಾಯಕ ಬಡಾವಣೆ,ಡಬ್ಬಲ್ ರಸ್ತೆ, ಐಎಂ ಎ ಹಾಲ್ ಮುಂದೆ ವಾಸಿಸುವ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಕಾರ್ಯನಿರತ ಪೊಲೀಸರು, ಪೆಟ್ರೋಲ್ ಬಂಕ್ ಸಿಬ್ಬಂದಿಗೂ ಸಹ ನವಚೈತನ್ಯ ಸೇವಾ ಸಂಸ್ಥೆ ಯಿಂದ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆರ್.ಬಸವರಾಜ್, ಮಲ್ಲಿಕಾರ್ಜುನ, ರಮೇಶ್, ಪ್ರಸನ್ನ, ಡೋಲಿ ಚಂದ್ರು, ಪ್ರಸಾದ್ ಸಾಥ್ ನೀಡಿದರು. ಕಳೆದ ಮೂರು ದಿನಗಳಿಂದ ಸೇವಾ ಸಂಸ್ಥೆ ಮೂಲಕ ಸತತವಾಗಿ ಆಹಾರ ಕಿಟ್ ನೀಡಲಾಗುತ್ತಿದೆ.



