ಡಿವಿಜಿ ಸುದ್ದಿ, ದಾವಣಗೆರೆ: ನವ ಚೈತನ್ಯ ಸೇವಾ ಸಂಸ್ಥೆ ಯಿಂದ ಕರೂರ್ ಕ್ರಾಸ್ , ತೋಟಗಾರಿಕೆ ಇಲಾಖೆ , ಐಎಂಎ ರಸ್ತೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಬಂದ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತು, ಕುಡಿಯುವ ನೀರು, ಆಹಾರ ಕಿಟ್ ವಿತರಿಸಲಾಯಿತು.
ಸಾಹಿತಿ, ನ್ಯಾಯವಾದಿ ರೇವಣ್ಣ ಬಳ್ಳಾರಿ ಅವರ ನೇತೃತ್ವದಲ್ಲಿ ಈ ಸೇವಾ ಕಾರ್ಯ ನಡೆದಿದೆ. ಜನಪ್ರಿಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಜೊತೆ ಕೈ ಜೋಡಿಸಿದ ಜಿಲ್ಲಾ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರಿಗೆ,ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ, ಕಂದಾಯ , ಬ್ಯಾಂಕ್,ಪೊಲೀಸ್, ಮುಂತಾದ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅರ್.ಬಸವರಾಜ್, ರಮೇಶ್, ಮಲ್ಲಿಕಾರ್ಜುನ, ಪ್ರಸಾದ್, ಗಿರೀಶ್ ಉಪಸ್ಥಿತರಿದ್ದರು.



