Connect with us

Dvgsuddi Kannada | online news portal | Kannada news online

ದಿನದ 24  ತಾಸು ಕೆಲಸ ಮಾಡಲು ಸಿದ್ಧನಿದ್ದೇನೆ; ಬಿಜೆಪಿ ಬಂಡಾಯ ಅಭ್ಯರ್ಥಿ ಅಥೀತ್ ರಾವ್ ಅಂಬರ್ ಕರ್

Home

ದಿನದ 24  ತಾಸು ಕೆಲಸ ಮಾಡಲು ಸಿದ್ಧನಿದ್ದೇನೆ; ಬಿಜೆಪಿ ಬಂಡಾಯ ಅಭ್ಯರ್ಥಿ ಅಥೀತ್ ರಾವ್ ಅಂಬರ್ ಕರ್

ಡಿವಿಜಿ ಸುದ್ದಿ, ದಾವಣಗೆರೆ : ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ  ಬಂಡಾಯದ ಬಿಸಿ ತುಸು ಹೆಚ್ಚಾಗಿದೆ. ಒಟ್ಟು 15 ಕಡೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅದರಲ್ಲಿ 24 ನೇ ವಾರ್ಡ್ ಕೂಡ ಒಂದು.

24 ನೇ ವಾರ್ಡ್ ನ ಬಿಜೆಪಿ ಬಂಡಾಯ  ಅಭ್ಯರ್ಥಿಯಾಗಿ ಯುವ ಮುಖಂಡ ಅತೀಥ್ ‍ರಾವ್ ಅಂಬರ್ ಕರ್  ಸ್ಪರ್ಧೆಗೆ ಇಳಿದಿದ್ದಾರೆ. ಇನ್ನು ಬಿಜೆಪಿಯಿಂದ ಪ್ರಸನ್ನ ಕುಮಾರ್ ಮತ್ತು ಕಾಂಗ್ರೆಸ್ ನಿಂದ ನಲ್ಲೂರು  ರಾಘವೇಂದ್ರ ಸ್ಪರ್ಧೆಗೆ ಇಳಿದ್ದಾರೆ.

atith dvgsuddi

ಯುವ ಮುಖಂಡ ಬಿಜೆಪಿ  ಬಂಡಾಯ ಅಭ್ಯರ್ಥಿ  ಅಥೀತ್ ರಾವ್  ಅಂಬರ್ ಕರ್  ಬೆಳಗ್ಗೆಯಿಂದಲೇ  ಮನೆ ಮನೆ ತೆರಳಿ ಪ್ರಚಾರ ಮಾಡಿದರು. ಎಂಸಿಸಿ  ಎ ಬ್ಲ್ಯಾಕ್ ಮತ್ತು ಪಿಜೆ ಬಡಾವಣೆಯಲ್ಲಿ ಪ್ರದೇಶದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು.   ಉಳುಮೆ ಮಾಡುತ್ತಿರುವ ರೈತನ ಗುರುತಿಗೆ ಮತ ಹಾಕುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

athiti dvgsuddi

ಭರ್ಜರಿ ಪ್ರಚಾರದ ಮಧ್ಯೆ ಡಿವಿಜಿ ಸುದ್ದಿಯೊಂದಿಗೆ ಮಾತನಾಡಿವರು, ನಾನು ಸ್ಥಳೀಯನಾಗಿದ್ದು, ನಾಲ್ಕೈದು ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿ ನನಗೆ ಟಿಕೆಟ್ ನೀಡದೆ, ಅನ್ಯಾಯ ಮಾಡಲಾಗಿದೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ನಾನು ದಿನದ 24 ತಾಸು ಜನರ ಸೇವೆ ಮಾಡಲು ಸಿದ್ಧನಿದ್ದೇನೆ. ನಿಮ್ಮ ಮನೆ ಮಗನೆಂದು ತಿಳಿಸಿದು ಯುವ ಮುಖಂಡನನ್ನು ಬೆಂಬಲಿಸಿ ಎಂದು ಕೇಳಿಕೊಂಡರು.

ನಾನು ಯಾವುದೇ ಹಣ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿಲ್ಲ. ಜನ ಸೇವೆಯೇ ನನ್ನ ಮುಖ್ಯ ಉದ್ದೇಶವಾಗಿದ್ದು, ಈ ಬಾರಿ ನೂರಕ್ಕೆ ನೂರಷ್ಟು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top