ಡಿವಿಜಿ ಸುದ್ದಿ, ದಾವಣಗೆರೆ: ತಾಲ್ಲೂಕಿನ ಕಾಡಜ್ಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹುಟ್ಟು ಹಬ್ಬದ ಹಿನ್ನೆಲೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾಡಜ್ಜಿ ಸುತ್ತಮುತ್ತಲಿನ ಗ್ರಾಮಸ್ಥರು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದರು.
ದಾವಣಗೆರೆ ಉತ್ತರ ವಿಧಾನಸಭಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ ಪರುಶುರಾಮ್ , ತಾಲೂಕು ಪಂಚಾಯತ್ ಸದಸ್ಯೆ ಆಶಾ ಮುರಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಸಿ. ಚಂದ್ರಪ್ಪ, ಉಪಾಧ್ಯಕ್ಷ ಸುಧಾ ಕರಿಬಸಪ್ಪ, ವೈದ್ಯಾಧಿಕಾರಿ ಡಾ. ಆಶಾ ಭಾನುಪ್ರಕಾಶ್, ಡಾ. ಮೀನಾಕ್ಷಿ, ಡಾ. ದೇವರಾಜ್, ಡಾ. ಮುರಳಿಧರ್, ಡಾ. ಗೀತಾ, ಡಾ. ದ್ಯಾವನ ಗೌಡ್ರು, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಶಾಲಾ ಸಿಬ್ಬಂದಿ ವರ್ಗ ಗ್ರಾಮ ಪಂಚಾಯತಿ ಸರ್ವಸದಸ್ಯರು, ವಿಎಸ್ ಎಸ್ ಎನ್ ಅಧ್ಯಕ್ಷ ಉಮೇಶಯ್ಯ, ಎಸ್ ಡಿಎಂಸಿ ಅಧ್ಯಕ್ಷ ಕೆ.ಎನ್. ನಾಗರಾಜ್ ಕಾಂಗ್ರೆಸ್ ಮುಖಂಡರಾದ ದಾಳ ಜರ್ ಹನುಮಂತಪ್ಪ, ದ್ಯಾಮಪ್ಪ,ನಾಗರಾಜಯ್ಯ, ಇಟಗಿ ರಾಜಪ್ಪ ,ಡಿ ತಿರುಪತಿ ,ಪರಶುರಾಮ್, ಮಹೇಶಪ್ಪ, ಭೀಮೇಶ್ ,ನಾಗರಕಟ್ಟೆ ಈಶಣ್ಣ ,ರವಿ ನಾಯ್ಕ ,ದೇವರಾಜ್ ನಾಯ್ಕ ,ಮಂಜುನಾಯ್ಕ ರೈತ ಸಂಘದ ಪ್ರಕಾಶ್ ರಾಂಪುರ ಮರುಳಪ್ಪ,ಕಲ್ಪನಹಳ್ಳಿ ನಾಗರಾಜ್ ,ಯುವ ಕಾಂಗ್ರೆಸ್ ಕಾರ್ಯಕರ್ತರಾದ ಸಿದ್ದೇಶ್, ನಾರದಮುನಿ, ಚಂದ್ರು, ಮೈಲಜ್ಜಾರ ರಾಜು,ಗ್ರಾಮಸ್ಥರು ಉಪಸ್ಥಿತರಿದ್ದರು.



