ಡಿವಿಜಿ ಸುದ್ದಿ, ದಾವಣಗೆರೆ: ಪತ್ರಕರ್ತ ಬಸಯ್ಯ ಹೊಸೂರಮಠ (34) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ದಾವಣಗೆರೆ ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಒಂದು ವರ್ಷದಿಂದ ಉಪನ್ಯಾಸ ವೃತ್ತಿ ಬಿಟ್ಟು ಆನ್ ಲೈನ್ ಸುದ್ದಿ ಜಾಲ ನಡೆಸುತ್ತಿದ್ದ ಬಸಯ್ಯ ಅವರು ಪತ್ನಿ, ಮೂರು ತಿಂಗಳ ಪುತ್ರ, ತಂದೆ-ತಾಯಿ ಹಾಗೂ ಓರ್ವ ಸಹೋದರನ್ನ ಅಗಲಿದ್ದಾರೆ. ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದವರಾಗಿದ್ದರು. ಪ್ರಸ್ತುತ ಇವರು ನಗರದ ಡಿಸಿಎಂ ಟೌನ್ ಶಿಪ್ ನಲ್ಲಿ ವಾಸವಾಗಿದ್ದರು.



