ಡಿವಿಜಿ ಸುದ್ದಿ, ಜಗಳೂರು: ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆ ಪಟ್ಟಣದಲ್ಲಿ ತಾತ್ಕಾಲಿಕವಾಗಿ ಗುರುಭವನದ ಆವರಣದಲ್ಲಿ ಸಾಮಾಜಿಕ ಅಂತರದ ಮೂಲಕ ತರಕಾರಿ ಮಾರಾಟಕ್ಕೆ ಪಟ್ಟಣ ಪಂಚಾಯತಿ ವ್ಯವಸ್ಥೆ ಕಲ್ಪಿಸಿದೆ.
ಪಟ್ಟಣದಲ್ಲಿ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸರಕಾರಿ ನಿಯಮದ ಪ್ರಕಾರ ಗುರುತುಗಳನ್ನು ಹಾಕಿದ್ದು , ಜನರು ಬಾಕ್ಸ್ ನಲ್ಲಿ ನಿಂತು ತರಕಾರಿ ತಗೆದುಕೊಂಡು ಹೋದರು.

ಈ ಸಂದರ್ಭದಲ್ಲಿ ಸಿಪಿಐ ದುರುಗಪ್ಪ, ಪಿಎಸ್.ಐ. ಉಮೇಶ್ ಬಾಬು, ಮುಖ್ಯಾಧಿಕಾರಿ ಡಿ.ರಾಜು ಬಣಕಾರ್, ಆರೋಗ್ಯಾಧಿಕಾರಿ ಟೀಪು ಸಾಬ್, ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.



