Connect with us

Dvgsuddi Kannada | online news portal | Kannada news online

ವಸೂಲಿಗಿಳಿದ ಗಿರಾಕಿಗೆ ಕ್ಲಾಸ್ ತಗೆದುಕೊಂಡ ಪಿಡಿಒ

ಪ್ರಮುಖ ಸುದ್ದಿ

ವಸೂಲಿಗಿಳಿದ ಗಿರಾಕಿಗೆ ಕ್ಲಾಸ್ ತಗೆದುಕೊಂಡ ಪಿಡಿಒ

ಡಿವಿಜಿ ಸುದ್ದಿ, ದಾವಣಗೆರೆ: ಗ್ರಾಮ ಪಂಚಾಯತಿಗೆ ಬರ್ತೀನಿ ನಮ್ಮನ್ನು ಸ್ವಲ್ಪ ನೋಡಿಕೊಳ್ಳಬೇಕು ಎಂದುವಸೂಲಿಗಿಳಿದ ವ್ಯಕ್ತಿಯನ್ನು ಪಿಡಿಒ  ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ  ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.

ಭ್ರಷ್ಟಾಚಾರ ವಿರೋಧಿ ರಾಜ್ಯ ಉಪಾಧ್ಯಕ್ಷ ಜೊತೆಗೆ ಪತ್ರಕರ್ತ ಹೇಳಿಕೊಂಡ ಮಂಜುನಾಥ್ ಎನ್ನುವ ವ್ಯಕ್ತಿ,  ಚನ್ನಗಿರಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯ್ತಿ ಪಿಡಿಓ ಗಣೇಶ್ ಅವರಿಗೆ ಕಾಲ್ ಮಾಡಿ,ನಮ್ಮ ನೋಡಿಕೊಳ್ಳಬೇಕು ಎಂದು ವಸೂಲಿಗೆ ಇಳಿದಿದ್ದಾನೆ.

ನೋಡಿಕೊಳ್ಳಿ ನೋಡಿ ಎಂದ್ರೆ ಏನು ನೋಡಿಕೊಳ್ಳಬೇಕಾಪ್ಪ. ಎಂದಾಗ ನಾನು ಪ್ರೆಸ್ ರಿಪೋರ್ಟರ್ ಇದ್ದೀನಿ. ಜೊತೆಗೆ  ಭ್ರಷ್ಟಾಚಾರ ವಿರೋಧಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಇದ್ದೀನಿ. ನಮ್ಮನ್ನು ನೋವು ನೋಡಿಕೊಳ್ಳಬೇಕು.

ನಿಮ್ಮ ಗ್ರಾಮ ಪಂಚಾಯ್ತಿಗೆ ಬರ್ತೀನಿ ನಮ್ಮನ್ನು ನೋಡಿಕೊಳ್ಳಬೇಕು ಎಂದಾಗ ಪಿಡಿಓ ,ಬನ್ನಿರೀ ಅದಕ್ಕೇನಂತೆ ನೋಡುತ್ತೀವೆ. ನೋಡದಕ್ಕೇನಂತೆ ಎಂದಿದ್ದಾರೆ. ನಿಮಗೆ ಬರುವುದರಲ್ಲಿ ನಮಗೂ ಸ್ವಲ್ಪ ಕೊಡಬೇಕು ಎಂದು ಹೇಳಿದ್ದೇ ತಡ, ಪಿಡಿಒ ಗಣೇಶ್ ವಸೂಲಿಕೋರನಿಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

ಪಿಡಿಒ ಎಂದ ಮೇಲೆ ಸಾಕಷ್ಟು ಆದಾಯ ಬರುತ್ತದೆ. ಅದರಲ್ಲಿ ನಮ್ಮನ್ನೂ ಅಲ್ಪಸ್ವಲ್ಪ ನೋಡಿಕೊಳ್ಳಬೇಕು, ನಾನು ಡಿಗ್ರಿ ಮುಗಿಸಿದ್ದೇನೆ. ಎಲ್ಲಾ ಪಿಡಿಒಗಳಿಗೂ ಕಾಲ್ ಮಾಡ್ತಿದ್ದೀನಿ, ನಿಮ್ಮ ಗ್ರಾಮ ಪಂಚಾಯ್ತಿಗೆ ಬರ್ತೀನಿ ನೀವು ನಮ್ಮನ್ನು ನೋಡಿಕೊಳ್ಳಬೇಕು ಎಂದಿದ್ದಾನೆ. ಇದರಿಂದ ಕೆಂಡಮಂಡಲವಾದ ಪಿಡಿಒ ಗಣೇಶ್, ಏನ್ ನೋಡ್ಕೋಬೇಕು… ಪತ್ರಕರ್ತ, ಭ್ರಷ್ಟಾಚಾರ ವಿರೋಧಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಂತೀರಾ, ವಸೂಲಿ ಮಾಡ್ತೀರಾ, ನಾಚಿಕೆಯಾಗೋದಿಲ್ವಾ ನಿಮಗೆ . ದುಡಿದು ತಿನ್ನಬಿಟ್ಟು ಈ ರೀತಿ ಕೆಲಸಕ್ಕೆ ನಿಂತಿಯಲ್ಲ ಅಂದು ಕ್ಲಾಸ್ ತಗೆದುಕೊಂಡಿದ್ದಾರೆ. ಈ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top