Connect with us

Dvgsuddi Kannada | online news portal | Kannada news online

ಶಾಸಕ ರವೀಂದ್ರನಾಥ್ ಮೊಮ್ಮಗನ ಕಾರು ಅಪಘಾತ :ತಪ್ಪಿದ ಭಾರೀ ಅನಾಹುತ

ಪ್ರಮುಖ ಸುದ್ದಿ

ಶಾಸಕ ರವೀಂದ್ರನಾಥ್ ಮೊಮ್ಮಗನ ಕಾರು ಅಪಘಾತ :ತಪ್ಪಿದ ಭಾರೀ ಅನಾಹುತ

ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆ ರಾತ್ರಿ ಶಾಸಕ ಎಸ್ .ಎ ರವೀಂದ್ರನಾಥ್ ಮೊಮ್ಮಗನ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಮನೆಯ ಮೇಲೆ ಬಿದ್ದಿದ್ದು ಭಾರೀ ಅನಾಹುತ ತಪ್ಪಿದಂತಾಗಿದೆ. ದಾವಣಗೆರೆ ಹೊರ ವಲಯದ ಶಾಮನೂರಿನಲ್ಲಿ ಈ ಘಟನೆ ನಡೆದಿದೆ.

car accident

ಶಾಸಕರ ಪುತ್ರಿ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪನವರ ಪುತ್ರ ಅರುಣ್  ಕಾರು ಚಾಲನೆ ಮಾಡುತ್ತಿದ್ದು, ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ರೊಚ್ಚಿಗೆದ್ದ ಜನರು ಶಾಸಕನ ಅರುಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಅಲ್ಲಿನ ಜನರಿಗೆ ಅವಾಜ್ ಹಾಕಿ , ಶಾಸಕರ ಪಾಸ್ ಕಾರಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

car accident 5

ಬೆಳಗ್ಗೆ ಕಾರು ತಗೆದುಕೊಂಡು ಹೋಗಲು ಬಂದಿದ್ದ ಪೊಲೀಸರೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿದ್ದಾರೆ.  ಶಾಸಕರ ಪಾಸ್ ಇರುವ ಕಾರಣ ಸ್ಥಳಕ್ಕೆ ಶಾಸಕರು ಬರುವಂತೆ ಆಗ್ರಹಿಸಿದರು. ಇದರಿಂದ ಸ್ವಲ್ಪ ಹೊತ್ತು  ಪೊಲೀಸರು ಪರದಾಟ ನಡೆಸಿದರು. ಕೊನೆಗೆ ಮನೆ ಮಾಲೀಕನ ಮನವೊಲಿಸಿ ಕಾರು ಸ್ಥಳಾಂತರ ನಡೆಸಿದರು.

car accident 6 1

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top