Connect with us

Dvgsuddi Kannada | online news portal | Kannada news online

ಭರತ ಹುಣ್ಣಿಮೆ: ಉಚ್ಚಂಗಿದುರ್ಗಕ್ಕೆ ಹೆಚ್ಚುವರಿ 40 ಬಸ್ ಸೌಲಭ್ಯ ಕಲ್ಪಿಸಿದ ಕೆಎಸ್ಆರ್ ಟಿಸಿ

ಪ್ರಮುಖ ಸುದ್ದಿ

ಭರತ ಹುಣ್ಣಿಮೆ: ಉಚ್ಚಂಗಿದುರ್ಗಕ್ಕೆ ಹೆಚ್ಚುವರಿ 40 ಬಸ್ ಸೌಲಭ್ಯ ಕಲ್ಪಿಸಿದ ಕೆಎಸ್ಆರ್ ಟಿಸಿ

ಡಿವಿಜಿ ಸುದ್ದಿ, ದಾವಣಗೆರೆ: ಫೆ.08 ರಿಂದ 10 ರವರೆಗೆ ಹರಪನಹಳ್ಳಿ ತಾಲ್ಲೂಕಿನ ಶ್ರೀ ಕ್ಷೇತ್ರ ಉಚ್ಚoಗಿದುರ್ಗದಲ್ಲಿ ಭರತ ಹುಣ್ಣಿಮೆ ಹಿನ್ನೆಲೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು, ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕೆಎಸ್ ಆರ್ ಟಿಸಿ ಜಾತ್ರೆ ವಿಶೇಷವಾಗಿ 40 ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಕಲ್ಪಿಸಿದೆ.

ಕೆಎಸ್ ಆರ್ ಟಿಸಿ   ದಾವಣಗೆರೆ ವಿಭಾಗದಿಂದ ರಾಜ್ಯದ ವಿವಿಧ ಭಾಗಕ್ಕೆ 40 ಬಸ್ ಬಿಟ್ಟಿದೆ.    ದಾವಣಗೆರೆಯಿಂದ ಉಚ್ಚoಗಿದುರ್ಗ, ಜಗಳೂರಿನಿಂದ ಉಚ್ಚoಗಿದುರ್ಗಕ್ಕೆ,ಹಾಗೂ ಅಣಜಿ ಕ್ರಾಸ್ ನಿಂದ ಅನಗೋಡಿಗೆ 2 ಬಸ್ಸುಗಳನ್ನು ಬಿಡಲಾಗಿದೆ.  ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ಸುಗಳನ್ನು ಬಿಡಲು ಸಂಸ್ಥೆ ತಯಾರಿದೆ ಎಂದು ವಿಭಾಗೀಯ ನಿಯಂತ್ರಣಧಿಕಾರಿ ಸಿದ್ದೇಶ್ವರ ಹೆಬ್ಬಾಳ್  ತಿಳಿಸಿದ್ದಾರೆ.

ಇದಲ್ಲದೆ ಹರಪನಹಳ್ಳಿಯಿಂದ ಉಚ್ಚoಗಿದುರ್ಗಕ್ಕೂ ಹೆಚ್ಚುವರಿ 14 ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ಭಕ್ತರ ಸಂಖ್ಯೆ ಹೆಚ್ಚದಲ್ಲಿ ಇನ್ನಷ್ಟು ಬಸ್ಸುಗಳ ವ್ಯವಸ್ಥೆ ಮಾಡಲು ಸಂಸ್ಥೆ ತಯಾರಿದೆ ಎಂದು ಹರಪನಹಳ್ಳಿ ಕೆಎಸ್ಆರ್ ಟಿಸಿ ದೀಪೋ ವ್ಯವಸ್ಥಾಪಕರಾದ ಸಚಿನ್ ಎಂ ಗೌಡ ತಿಳಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top