Connect with us

Dvgsuddi Kannada | online news portal | Kannada news online

ಅ.13 ರಂದು ಸಾಮೂಹಿಕ ಶ್ರೀ ಗಾಯತ್ರಿ ಪೂಜೆ  ಕಾರ್ಯಕ್ರಮ

ದಾವಣಗೆರೆ

ಅ.13 ರಂದು ಸಾಮೂಹಿಕ ಶ್ರೀ ಗಾಯತ್ರಿ ಪೂಜೆ  ಕಾರ್ಯಕ್ರಮ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಗರದ ಶ್ರೀಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಶಿಗೀ ಹುಣ್ಣಿಮೆ ಅಂಗವಾಗಿ ಅ. 13 ರಂದು ಬೆಳಗ್ಗೆ 7 ಗಂಟೆಗೆ  ಶ್ರೀ ಶಂಕರ ಮಠದಲ್ಲಿ  ಸಾಮೂಹಿಕ ಶ್ರೀ  ಗಾಯತ್ರಿ ಪೂಜೆ, ಉಪಾಸನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ ಶೆಣೈ ತಿಳಿಸಿದ್ದಾರೆ.

ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ನಡೆಯುವ ಈ ಆಧ್ಯಾತ್ಮ ಸಮಾರಂಭವನ್ನು ಈ ಬಾರಿಯ ಉತ್ತಮ್‌ಚಂದ್ ಗಾಂಧಿ ಮತ್ತು ಕುಟುಂಬ ನಡೆಸಿಕೊಡಲಿದೆ. ಕಳೆದ  19  ವರ್ಷಗಳಿಂದಲೂ ನಿರಂತರವಾಗಿ ಪ್ರತಿ ಪೂರ್ಣಿಮೆಯಂದು ನಡೆಯುವ ಈ ಧಾರ್ಮಿಕ ಪ್ರಕ್ರಿಯೆ ನಡೆಯಲಿದೆ. ಯಾವುದೇ ಜಾತಿ, ಮತ, ವರ್ಣ, ಲಿಂಗ ಬೇಧವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಮಿತಿ ಕೋರಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top