ಡಿವಿಜಿ.ಸುದ್ದಿ.ಕಾಂ,ದಾವಣಗರೆ: ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜನಹಳ್ಳಿ ಹನುಮಂತಪ್ಪ ಛತ್ರದ ಪಕ್ಕ ಇರುವ ಪಾದಚಾರಿ ಮಾರ್ಗದಲ್ಲಿಯೇ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಫುಟ್ ಪಾತ್ ಹೂವಿನ ವ್ಯಾಪಾರಿ ಸಂಘದಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
ಅನೇಕ ವರ್ಷದಿಂದ ರಾಜನಹಳ್ಳಿ ಹನುಮಂತಪ್ಪ ಛತ್ರದ ಪಕ್ಕದ ಪಾದಚಾರಿ ಮಾರ್ಗದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಬಂದಿದ್ದು, ಕಳೆದ ವರ್ಷ ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸಿದ್ದರು. ಇದರಿಂದ ಹೂವಿನ ವ್ಯಾಪಾರಿಗಳು ತುಂಬಾ ನಷ್ಟವನ್ನು ಅನುಭವಿಸಿದ್ದರು. ಹೀಗಾಗಿ ಈಗಿರುವ ಸ್ಥಳದಲ್ಲಿಯೇ ಹೂವು ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಟಿ. ಅಜ್ಜೀಶಿ, ಬಿ. ಕರಿಬಸಪ್ಪ, ಅಸ್ಲಂ ಭಾಷಾ, ಸರ್ವ ಮಂಗಳಮ್ಮ, ಕಾಕಡ ರಘು, ಹೆಚ್. ರಘುನಾಥ್, ಗುಲಾಬಿ ಯೋಗೀಶ್, ಗುಲಾಬಿ ಮಂಜು, ಸಿದ್ಧಣ್ಣ ಬಾಳೇಕಾಯಿ ಸೇರಿದಂತೆ ಅನೇಕರು ಉಪಸ್ಥತಿರಿದ್ದರು.



