ಡಿವಿಜಿ ಸುದ್ದಿ, ದಾವಣಗೆರೆ :ಹರಪನಹಳ್ಳಿ ತಾಲೂಕಿನ ಚಿಗಟೇರಿಯ ಇತಿಹಾಸ ಪ್ರಸಿದ್ಧ ಶ್ರೀ ನಾರದಮುನಿ ಸ್ವಾಮಿಯ ರಥೋತ್ಸವ ವನ್ನು ರದ್ದುಪಡಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದ್ದಾರೆ.
ಇದೇ 13ರ ಸೋಮವಾರದಂದು ರಥೋತ್ಸವವು ಜರುಗಬೇಕಾಗಿತ್ತು. ಕೋರೋನ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ರಥೋತ್ಸವವನ್ನು ನೆರವೇರಿಸದಿರಲು ಶ್ರೀ ನಾರದಮುನಿಸ್ವಾಮಿ ಸೇವಾ ಟ್ರಸ್ಟ್ ನ ಸಭೆಯಲ್ಲಿ ಸದಸ್ಯರೆಲ್ಲರೂ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಭಕ್ತರು ಅಂದು ದೇವರ ದರ್ಶನಕ್ಕೆಂದು ಚಿಗಟೇರಿಗೆ ಹೋಗದಿರಲು ಟ್ರಸ್ಟ್ ನ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ