ಡಿವಿಜಿ ಸುದ್ದಿ, ಚನ್ನಗಿರಿ: ತಾಲೂಕಿನ ಚಿಕ್ಕ ಕೋಗಲೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಧರ್ಮಸ್ಥಳ ಗ್ರಾಮೀಣ ಯೋಜನೆಯಿಂದ 1.5 ಲಕ್ಷ ರೂ ಹಣದ ಚೆಕ್ ನ್ನು ಧರ್ಮಸ್ಥಳ ಗ್ರಾಮೀಣಾ ಜಿಲ್ಲಾ ಯೋಜನಾಧಿಕಾರಿ ಜಯಂತ್ ಪೂಜಾರಿ ವಿತರಿಸಿದರು.
ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ರವರು ರಾಜ್ಯವನ್ನು ಮದ್ಯಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಕೆಲ ಸ್ಥಳಗಳಲ್ಲಿ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ರಾಜಶೇಖರ ಎಂ. ಆರ್, ಕಾರ್ಯದರ್ಶಿ ಡಿ. ಶಿವಪ್ಪ ತಣಿಗೆರೆ ವೃತ್ತ ಮೇಲ್ವಿಚಾರಕಿ ಎನ್ ಪ್ರೇಮಾ , ಚೇತನ್ , ಸೇರಿದಂತೆ ಸುನಿಲ್ . ಹಾಲಸ್ವಾಮಿ ಸೇರಿದಂತೆ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



