ಡಿವಿಜಿ ಸುದ್ದಿ, ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಡುಗಡೆ ಮಾಡಿದ್ದಾರೆ. ಈ ನೂತನ ಪಟ್ಟಿಯಲ್ಲಿ ಈ ಹಿಂದೆ ಹಿನ್ನೆಲೆಗೆ ಸರಿದಿದ್ದವರು. ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಮೂಲಕ ಪಕ್ಷ ಸಂಘಟನೆಗಾಗಿ ಹೊಸ ಪದಾಧಿಕರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಯಾರಿಗೆ ಯಾವ ಹುದ್ದೆ
- ಉಪಾಧ್ಯಕ್ಷರು: ಅರವಿಂದ ಲಿಂಬಾವಳಿ (ಬೆಂಗಳೂರು)
- ನಿರ್ಮಲಕುಮಾರ್ ಸುರಾನ (ಬೆಂಗಳೂರು)
- ಶೋಭಾ ಕರಂದ್ಲಾಜೆ (ಉಡುಪಿ)
- ಮಾಲೀಕಯ್ಯ ಗುತ್ತೇದಾರ (ಕಲಬುರ್ಗಿ)
- ತೇಜಸ್ವಿನಿ ಅನಂತಕುಮಾರ್ (ಬೆಂಗಳೂರು)
- ಪ್ರತಾಪ ಸಿಂಹ (ಮೈಸೂರು)
- ಎಂ.ಬಿ. ನಂದೀಶ್ (ತುಮಕೂರು)
- ಬಿ.ವೈ. ವಿಜಯೇಂದ್ರ (ಬೆಂಗಳೂರು)
- ಎಂ. ಶಂಕರಪ್ಪ (ಬೆಂಗಳೂರು)
- ಎಂ. ರಾಜೇಂದ್ರ (ಮೈಸೂರು)
ಪ್ರಧಾನ ಕಾರ್ಯದರ್ಶಿಗಳು
ಎನ್. ರವಿಕುಮಾರ್ (ದಾವಣಗೆರೆ), ಸಿದ್ಧರಾಜು( ಮೈಸೂರು), ಅಶ್ವತ್ಥನಾರಾಯಣ (ಬೆಂಗಳೂರು), ಮಹೇಶ ಟೆಂಗಿನಕಾಯಿ (ಧಾರವಾಡ)
ರಾಜ್ಯ ಕಾರ್ಯದರ್ಶಿಗಳು
- ಸತೀಶ ರೆಡ್ಡಿ (ಬೆಂಗಳೂರು)
- ತುಳಸಿ ಮುನಿರಾಜುಗೌಡ (ಬೆಂಗಳೂರು)
- ಎಸ್. ಕೇಶವಪ್ರಸಾದ್ (ಬೆಂಗಳೂರು)
- ಜಗದೀಶ ಹಿರೇಮನಿ (ಬಾಗಲಕೋಟೆ)
- ಸುಧಾ ಜಯರುದ್ರೇಶ್ (ದಾವಣಗೆರೆ)
- ಭಾರತಿ ಮಗ್ದುಂ (ಬೆಳಗಾವಿ ಗ್ರಾಮಾಂತರ)
- ಉಜ್ವಲಾ ಬಡವಣ್ಣಾಜೆ (ಬೆಳಗಾವಿ ನಗರ)
- ಕೆ.ಎಸ್. ನವೀನ್ (ಚಿತ್ರದುರ್ಗ)
- ವಿನಯ್ ಬಿದರೆ (ತುಮಕೂರು)
ರಾಜ್ಯ ಖಜಾಂಚಿಗಳು
ಸುಬ್ಬ ನರಸಿಂಹ (ಬೆಂಗಳೂರು), ಲಹರ್ ಸಿಂಗ್ ಸರೊಯಾ (ಬೆಂಗಳೂರು)
ಕಾರ್ಯಾಲಯ ಕಾರ್ಯದರ್ಶಿ: ಲೋಕೇಶ್ ಅಂಬೇಕಲ್ಲು (ಬೆಂಗಳೂರು)
ರಾಜ್ಯ ವಕ್ತಾರ: ಗಣೇಶ ಕಾರ್ಣಿಕ್ (ದಕ್ಷಿಣ ಕನ್ನಡ)
ಪ್ರಕೋಷ್ಠಗಳ ಸಂಯೋಜಕರು
ಎಂ.ಬಿ. ಭಾನುಪ್ರಕಾಶ್ (ಶಿವಮೊಗ್ಗ), ಎ.ಎಚ್. ಶಿವಯೋಗಿಸ್ವಾಮಿ (ದಾವಣಗೆರೆ).
ಮೋರ್ಚಾಗಳ ಅಧ್ಯಕ್ಷರು
- ಡಾ. ಸಂದೀಪ್ (ಬೆಂಗಳೂರು)– ಯುವಮೋರ್ಚಾ
- ಗೀತಾ ವಿವೇಕಾನಂದ (ಬೆಂಗಳೂರು)– ಮಹಿಳಾ ಮೋರ್ಚಾ
- ಈರಣ್ಣ ಕಡಾಡಿ (ಬೆಳಗಾವಿ ಗ್ರಾಮಾಂತರ)– ರೈತ ಮೋರ್ಚಾ
- ಅಶೋಕ ಗಸ್ತಿ (ರಾಯಚೂರು)– ಹಿಂದುಳಿದವರ್ಗಗಳ ಮೋರ್ಚಾ
- ಛಲವಾದಿ ನಾರಾಯಣಸ್ವಾಮಿ (ಬೆಂಗಳೂರು)–ಎಸ್.ಸಿ. ಮೋರ್ಚಾ
- ತಿಪ್ಪರಾಜು ಹವಾಲ್ದಾರ್ (ರಾಯಚೂರು)– ಎಸ್.ಟಿ. ಮೋರ್ಚಾ
- ಮುಜ್ಹಾಮಿಲ್ ಬಾಬು (ಬೆಂಗಳೂರು)– ಅಲ್ಪಸಂಖ್ಯಾತ ಮೋರ್ಚಾ



