Connect with us

Dvgsuddi Kannada | online news portal | Kannada news online

ಬುಧವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಬುಧವಾರದ ರಾಶಿ ಭವಿಷ್ಯ

ಬುಧವಾರ-ಮಾರ್ಚ್-04,2020
ಸೂರ್ಯೋದಯ: 06:37, ಸೂರ್ಯಸ್ತ : 18:25

ವಿಕಾರಿ ನಾಮ ಸಂವತ್ಸರ
ಫಾಲ್ಗುಣ ಮಾಸ ಉತ್ತರಾಯಣ
ತಿಥಿ: ನವಮೀ – 13:59 ವರೆಗೆ
ನಕ್ಷತ್ರ: ಮಾರ್ಗಶಿರ – 11:23 ವರೆಗೆ
ಯೋಗ: ಪ್ರೀತಿ – 11:26 ವರೆಗೆ
ಕರಣ: ಕೌಲವ – 13:59 ವರೆಗೆ ತೈತಲೆ – 25:45+ ವರೆಗೆ
ದುರ್ಮುಹೂರ್ತ: 12:07 – 12:54
ವರ್ಜ್ಯಂ: 19:48 – 21:24
ರಾಹು ಕಾಲ: 12:31 – 13:59
ಯಮಗಂಡ: 08:05 – 09:34
ಗುಳಿಕ ಕಾಲ: 11:02 – 12:31
ಅಮೃತಕಾಲ: 25:25 27:01
ಅಭಿಜಿತ್ ಮುಹುರ್ತ.

ಮೇಷ ರಾಶಿ:
ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಆದ್ಯತೆ ನೀಡಿ. ಯೋಗ, ಧ್ಯಾನ, ವ್ಯಾಯಾಮದಂತಹ ಚಟುವಟಿಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಕನಸಿನ ಕಾರ್ಯಗಳು ಇಂದು ನನಸಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದು ಸಾಧು-ಸಂತರ ದರ್ಶನ ಭಾಗ್ಯ ನಿಮಗೆ ಸಿಗಲಿದೆ.
ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಈ ಹಿಂದೆ ಅನುಭವಿಸಿದ ಕಷ್ಟ ಕಾರ್ಪಣ್ಯಗಳು, ವ್ಯವಹಾರಿಕ ಹಿನ್ನಡೆ, ಉದ್ಯೋಗ ಹುಡುಕಾಟ ಇಂದು ಮುಕ್ತಿ ಹೊಂದುವ ಕಾಲ ಬಂದಿದೆ. ಪದೇ ಪದೇ ಕಾಡಿದ ಕಾಯಿಲೆಗಳು, ಎಷ್ಟೇ ಸಾರಿ ವೈದ್ಯರ ಬಳಿ ತೋರಿಸಿದರೂ ಗುಣಮುಖವಾಗದ ಕಾಯಿಲೆಗಳು ಇಂದು ಚೇತರಿಕೆ ಕಾಣಲಿದೆ. ಹೃದಯರೋಗ ಇದ್ದರೂ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತದೆ. ಹಿರಿಯರ ಆಸ್ತಿ ವಿಚಾರದಲ್ಲಿ ಸಮಾಧಾನವಾಗಿ ಸಮಸ್ಯೆ ಪರಿಹಾರವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ವೃಷಭ ರಾಶಿ:
ಬಂಡವಾಳದ ಸಮಸ್ಯೆಗಳು ದೂರವಾಗಲಿದೆ. ನಿಮ್ಮ ಸಂಗಾತಿಯ ಮನಸ್ಥಿತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ವಾಗಿರುವುದು ಕಂಡುಬರುತ್ತದೆ. ಆರ್ಥಿಕ ವ್ಯವಹಾರದಲ್ಲಿ ಜಾಗೃತೆಯಿರಲಿ. ಕುಟುಂಬಸ್ಥರೊಂದಿಗೆ ಮನಸ್ತಾಪ ಬರಬಹುದಾದ ಸಾಧ್ಯತೆ.
ಅತ್ಯಂತ ಶುಭದಾಯಕ ಆಕಸ್ಮಿಕ ಧನಲಾಭ , ವಿವಾಹ ಯೋಗ, ಧನಲಾಭ, ಸಮಾಜದಲ್ಲಿ ಸ್ಥಾನಮಾನ ಸಂಭವ, ವ್ಯಾಪಾರದ ಅಭಿವೃದ್ಧಿ. ಪತ್ನಿಯ ಮೂಲಕ ಧನಲಾಭ. ಆರೋಗ್ಯದಲ್ಲಿ ತೊಂದರೆ ಶ್ವಾಸಕೋಶದ ಸಂಬಂಧಿಸಿರುವ ಕಾಯಿಲೆಗಳು ಕಾಡುವವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಪ್ರೇಮಿಗಳನ್ನು ಮನಸ್ತಾಪ ಗೊಳ್ಳುವ ಸಮಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಮಿಥುನ ರಾಶಿ:
ನಿಮ್ಮ ಮನಸ್ಸಿನ ಏಕಾಗ್ರತೆ ಭಂಗ ವಾಗಲಿದೆ, ಹಾಗೂ ಇತರೇ ಆಸಕ್ತಿ ವಿಷಯಾಸಕ್ತಿ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ. ಆರೋಗ್ಯದ ಕಡೆ ಗಮನ ನೀಡಿ. ನಿಮಗೆ ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರಿಸುತ್ತದೆ. ಅಧಿಕ ಹಣ ಗಳಿಕೆಗಾಗಿ ಅಡ್ಡದಾರಿ ಹಿಡಿಯುವುದು ಬೇಡ. ಸಹವಾಸ ದೋಷದಿಂದ ನಿಮ್ಮ ಪ್ರಗತಿ ಕುಂಠಿತವಾಗುತ್ತದೆ ಆದಷ್ಟು ಅದನ್ನು ತಡೆಗಟ್ಟಿ.
ಸೋಮಾರಿತನ ಆಗಬೇಡಿ. ಕುಟುಂಬದಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪ. ಸಂತಾನ ಭಾಗ್ಯ ನಿರೀಕ್ಷಣೆ ಮಾಡುವಿರಿ. ಬೇರೊಬ್ಬರ ಜೊತೆ ಅನಾವಶ್ಯಕವಾಗಿ ಕದನ ಮಾಡಬೇಡಿ. ಉದ್ಯೋಗ ಹುಡುಕಾಟ ಮಾಡುವವರು ಉದ್ಯೋಗದ ಭಾಗ್ಯ ಸಿಗಲಿದೆ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವವರು ಮಕ್ಕಳ ಮದುವೆ ಯೋಗ ಕೂಡಿ ಬರಲಿದೆ. ದಿನಸಿ ಅಂಗಡಿ, ಹಾರ್ಡ್ವೇರ್ ಶಾಪ್, ಕಬ್ಬಿಣದ ಅಂಗಡಿ, ಹೊಸ ಉದ್ಯಮ ಪ್ರಾರಂಭ ಮಾಡುವವರಿಗೆ ಶುಭದಾಯಕ ವಾಗಲಿದೆ. ಎಲ್ಲಾ ವ್ಯಾಪಾರಸ್ಥರಿಗೆ ಉತ್ತಮ ಲಾಭಾಂಶ ದೊರಕಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಕರ್ಕಾಟಕ ರಾಶಿ:
ವ್ಯವಹಾರದಲ್ಲಿ ಲಾಭಂಶದ ಲೆಕ್ಕಾಚಾರ ಮಾಡಿ ಕಾರ್ಯನಿರ್ವಹಿಸಿ. ನಿಮ್ಮ ಸಾಧನೆಗೆ ಉತ್ತಮ ವೇದಿಕೆ ಸಿಗುವ ಅವಕಾಶ ಇಂದು ಕಂಡುಬರಲಿದೆ. ಅತಿಯಾದ ಮಾತುಗಳು ಆತ್ಮೀಯರಲ್ಲಿ ವೈಮನಸ್ಸು ಸೃಷ್ಟಿಸಬಹುದು. ಆರ್ಥಿಕವಾಗಿ ಪ್ರಾರಂಭಿಕ ಹಂತದ ಜಯ ಕಾಣುವಿರಿ, ಮುಂದೆ ಸಾಕಷ್ಟು ಲಾಭಾಂಶ ಪಡೆಯಲು ಶ್ರಮಿಸಬೇಕಾಗಿದೆ. ಸಂಶೋಧನೆಗಳಲ್ಲಿ ಉತ್ತಮ ಕ್ರಿಯಾಶೀಲತೆ ತೋರಿಸುವ ಸಾಧ್ಯತೆ ಇದೆ.
ಹಿರಿಯರಿಂದ ಧನಾಗಮನ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ತಮ್ಮ ದುಡುಕಿನ ಸ್ವಭಾವದಿಂದ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳುವಿರಿ. ಇದಕ್ಕೆ ತಾವೇ ನೇರ ಹೊಣೆ. ಆಸ್ತಿ ವಿಚಾರಕ್ಕಾಗಿ ಸಹೋದರ-ಸಹೋದರಿಯ ಕಡೆಯಿಂದ ಮನಸ್ತಾಪ. ಪತ್ನಿಯೊಂದಿಗೆ ಜಗಳ. ವ್ಯಾಪಾರದಲ್ಲಿ ಮುಂದುವರೆದ ನಷ್ಟ. ಪ್ರೇಮಿಗಳಲ್ಲಿ ಬುದ್ಧಿ ಸ್ಥಿರ ಇರುವುದಿಲ್ಲ ಚಂಚಲ ಸೃಷ್ಟಿಯಾಗುತ್ತದೆ. ಆರೋಗ್ಯದ ಗಮನವಿರಲಿ. ಜನರ ಕಡೆಯಿಂದ ಮಾನಸಿಕವಾಗಿ ಭಯ. ಸ್ನೇಹಿತರ ಕಡೆಯಿಂದ ಮನಸ್ತಾಪ. ವಿದ್ಯಾರ್ಥಿಗಳು ಜಾಗ್ರತೆಯಿಂದ ವಾಹನ ಚಲಾಯಿಸಿ ಅಪಘಾತವಾಗುವ ಸಂಭವ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಸಿಂಹ ರಾಶಿ:
ಕುಟುಂಬಸ್ಥರು ಪ್ರಯಾಣದ ಸಿದ್ಧತೆ ನಡೆಸುವಿರಿ. ಮೋಜು-ಮಸ್ತಿ ಗಳಿಂದ ದೂರವಿರುವುದು ಒಳಿತು. ವ್ಯವಹಾರದಲ್ಲಿ ಕೌಶಲ್ಯತೆ ಉತ್ತಮ ಮಟ್ಟದಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸರಿದಾರಿಗೆ ಬಂದಿದ್ದು ಅನಗತ್ಯವಾಗಿ ದುಂದುವೆಚ್ಚಗಳಿಗೆ ಕೈಹಾಕಿ ನಷ್ಟ ಮಾಡಿಕೊಳ್ಳಬೇಡಿ.
ಮನೆಯಲ್ಲಿ ಶುಭವಾರ್ತೆ ಪದೇಪದೇ ಕೇಳುವಿರಿ. ವಿವಾಹಯೋಗ. ನೂತನ ಉದ್ಯೋಗ ಬಡ್ತಿಯೋಗ.ಹೀಗೆ ಅನೇಕ ಶುಭ ಘಟನೆಗಳು ಕಂಡುಬರುತ್ತದೆ. ಮಾತಾಪಿತೃ ದೂರವಾಗುವ ಸಂಭವ ಇದೆ. ಮನೆಗೆ ನೂತನ ಸದಸ್ಯ ಸೇರ್ಪಡೆಯಾಗಲಿದ್ದಾರೆ. ಪ್ರೇಮಿಗಳು ಪಚ್ಚಾತಾಪ ಪ್ರಾಯಶ್ಚಿತ್ತ ಅನುಭವಿಸುವರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಕನ್ಯಾ ರಾಶಿ:
ತಾಂತ್ರಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯದಲ್ಲಿ ಉತ್ತಮ ವ್ಯವಸ್ಥೆ ಮತ್ತು ಶ್ರದ್ಧೆ ಕಾಣಬಹುದಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗಲಿವೆ. ಅನಿರೀಕ್ಷಿತವಾಗಿ ಧನಾಗಮನ ವೃದ್ಧಿಯಾಗುತ್ತದೆ. ಉತ್ಪನ್ನ ವಲಯದಲ್ಲಿ ಆರ್ಥಿಕ ಪ್ರಗತಿ ಕಾಣಬಹುದು. ವೈಯಕ್ತಿಕ ವಿಷಯಗಳನ್ನು ಆದಷ್ಟು ಗೌಪ್ಯತೆಯಾಗಿ ಕಾಪಾಡಿಕೊಳ್ಳಿ.
ಮನೆಗೆ ಬಂಧುಗಳ ಸಮಾಗಮ. ತಮ್ಮ ಮಕ್ಕಳ ಮದುವೆ ಕಾರ್ಯದ ಚಿಂತನೆ. ಪರ ಪುರುಷ ಅಥವಾ ಪರಸ್ತ್ರೀಯರ ಸಹವಾಸದಿಂದ ನಿಮಗೆ ತೊಂದರೆ ಕಾಡಲಿದೆ. ಕಾನೂನು ವ್ಯವಹಾರದಲ್ಲಿ ಜಯ. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ಶತ್ರುಗಳು ತಮ್ಮ ಬಗ್ಗೆ ಒಳಸಂಚು ನಡೆಸುವ ಸಾಧ್ಯತೆ ಇದೆ ಎಚ್ಚರವಹಿಸಿ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಅಧಿಕವಾಗುವುದು. ಸರಕಾರಿ ನೌಕರರರಿಗೆ ಅಧಿಕಾರಿ ವರ್ಗದಿಂದ ಅನುಕೂಲ. ಪ್ರೀತಿಸಿ ಮದುವೆಯಾದವರು ಗೋಳಾಟ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ತುಲಾ ರಾಶಿ:
ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಅನ್ನುವ ಹಾಗೆ ನಿಮ್ಮ ವಿಷಯದಲ್ಲಿ ಕೆಲವರು ಆಟ ಆಡಬಹುದು ಎಚ್ಚರವಿರಲಿ. ದುಂದು ವೆಚ್ಚದಿಂದ ನಿಮ್ಮ ಸ್ಥಾನ ಹೆಚ್ಚಾಗಬಹುದು ಆದರೆ ಪರಿಸ್ಥಿತಿ ಕಠಿಣವಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಮಕ್ಕಳ ವಿಷಯದ ಸಲುವಾಗಿ ಹಣಕಾಸು ಹೆಚ್ಚಾಗಿ ಖರ್ಚಾಗಬಹುದು.
ಚಿಂತಾಜನಕ ಅಧಿಕವಾಗುವುದು. ಸಾಲಭಾದೆಯಿಂದ ಗೋಳಾಟ ಅನುಭವಿಸುವಿರಿ. ಮಧ್ಯಸ್ತಿಕೆ ಜನರಿಂದ ಅವಮಾನವಾಗುವ ಸಂಭವ. ಅಕ್ಕಪಕ್ಕದ ಜನರ ಕಿರಿಕಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ವಾಯು ಸಂಬಂಧಿ ರೋಗದಿಂದ ನರಳುವಿರಿ. ಮಾತಾಪಿತೃ ಸಹಾಯ ತಮಗೆ ಸಿಗಲಿದೆ. ಪತ್ನಿಯ ಸಂಬಂಧಿಕರ ಕಡೆಯಿಂದ ಧನ ಸಹಾಯ ಸಿಗಲಿದೆ. ಹೆಂಡತಿಯ ಸಹಾಯದಿಂದ ಮನೆ ಕಟ್ಟಡ ಪ್ರಾರಂಭವಾಗುವುದು. ಪಾಲುದಾರಿಕೆಯಲ್ಲಿ ವ್ಯವಹಾರ ಬೇಡ. ಆಕಸ್ಮಿಕವಾಗಿ ಜಾಮೀನು ನೀಡುವ ಸಮಯ ಬರುತ್ತದೆ ಜಾಗೃತಿ ವಹಿಸಿ. ವಿವಾಹ ಕಾರ್ಯದಲ್ಲಿ ವಿಘ್ನ. ಉದರ, ಎದೆ,ಮೂಲವ್ಯಾದಿ ನೋವಿನಿಂದ ನರಳುವಿರಿ. ಹಿರಿಯರ ವಿರೋಧದಿಂದ ಪ್ರೇಮಿಗಳು ಮನಸ್ತಾಪ ವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ವೃಶ್ಚಿಕ ರಾಶಿ:
ಉತ್ತಮ ಸವಿರುಚಿಯ ಭೋಜನ ಈ ದಿನ ನಿಮ್ಮದಾಗಲಿದೆ. ಸಂಗಾತಿಯ ಬಯಕೆಯನ್ನು ಪೂರೈಸುವ ಹಠ ನಿಮ್ಮಲ್ಲಿ ಮೂಡುತ್ತದೆ. ಚಿಕ್ಕ ಸಮಸ್ಯೆಯನ್ನು ಸಹ ದೊಡ್ಡಮಟ್ಟದಾಗಿ ಬೆಳೆಸಬೇಡಿ, ಸಮಸ್ಯೆಗಳು ಕಠಿಣವಾಗಲಿದೆ.
ಚೇತರಿಕೆ ಸಮಯ ಬಂದಿರುತ್ತದೆ. ಅಡೆತಡೆ ಯಾಗಿರುವ ಎಲ್ಲಾ ಕಾರ್ಯಗಳು ಸಫಲವಾಗುವದು. ಸಾಲದಿಂದ ಹಂತಹಂತವಾಗಿ ಋಣಮುಕ್ತಿ ಆಗುವಿರಿ. ಹೊಸ ಉದ್ಯಮ ಪ್ರಾರಂಭ ಮಾಡುವುದು ಉತ್ತಮ ಮತ್ತು ಅದರಲ್ಲಿ ಯಶಸ್ಸುಗಳಿಸುವಿರಿ. ದುಡುಕಿ ಮಾತನಾಡಿ ಯಾರನ್ನು ವಿರೋಧ ಮಾಡಿಕೊಳ್ಳಬಾರದು. ಯಾರು ನಿಮಗೆ ಅಪಮಾನ ಅವಮಾನ ಮಾಡುವವರು ಅವರ ಜೊತೆ ಜಗಳ ಮಾಡಿಕೊಡದು ಆ ಮಾತುಗಳಿಂದ ತಮಗೆ ಗುರಿ ಮುಟ್ಟಲು ಸಾಧಿಸಲು ಪ್ರೇರೇಪಣೆ. ಕುಟುಂಬದ ವಿರೋಧದಿಂದ ಬೇರೆ ಕೆಲಸಕ್ಕೆ ಕೈಹಾಕಬಾರದು. ವ್ಯಾಪಾರಸ್ಥರಿಗೆ ಸಾಲಭಾದೆ ನಿವಾರಣೆಯಾಗಲಿದೆ. ಪ್ರೇಮಿಗಳು ಹೆಚ್ಚಿನ ಲೈಂಗಿಕ ಆಸಕ್ತಿ ಮತ್ತು ಮನಸ್ತಾಪವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸೋಮಶೇಖರ್ ಪಂಡಿತ್B.Sc
Mob.93534 88403

ಧನಸ್ಸು ರಾಶಿ:
ಶುಭ ಸುದ್ದಿಗಳು ಕೇಳುವ ಅವಕಾಶಗಳು ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಗಮನ ವಹಿಸುವಂತೆ ನಿಮ್ಮ ಸೂಚನೆ ಅಗತ್ಯವಿದೆ. ಆರ್ಥಿಕ ವ್ಯವಹಾರದಲ್ಲಿ ನಷ್ಟ ಆವರಿಸಬಹುದು ಆದಕಾರಣ ಯೋಜನೆಗಳಲ್ಲಿ ಆಯ್ಕೆಮಾಡುವಾಗ ಎಚ್ಚರಿಕೆ ಇರಲಿ. ಅನಗತ್ಯವಾದ ವಿಷಯಗಳಲ್ಲಿ ಕಾಲಹರಣ ಮಾಡಬೇಡಿ.
ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ. ಪತ್ನಿ ಆರೋಗ್ಯದಲ್ಲಿ ಉದರ ದೋಷ ಕಾಣಲಿದೆ. ವಿಶ್ರಾಂತಿ ಪಡೆಯದೆ ಮಾಡಿದ ಕೆಲಸದಿಂದ ಆರೋಗ್ಯದಲ್ಲಿ ತೊಂದರೆ ಕಾಡಲಿದೆ. ಅನಾವಶ್ಯಕವಾಗಿ ಮೇಲಿಂದ ಮೇಲೆ ಪ್ರಯಾಣ ಮಾಡುವಿರಿ. ಶೇರು ಮಾರುಕಟ್ಟೆಯಲ್ಲಿ ದುಡುಕಿನಿಂದ ಹಣ ಹಾಕಿ ನಷ್ಟ ಅನುಭವಿಸುವಿರಿ. ವ್ಯಾಪಾರಿಗಳಿಗೆ ಮಂದಗತಿಯಲ್ಲಿ ಪ್ರಗತಿ ಕಾಣುವಿರಿ. ಸಾಲಗಾರರಿಂದ ಮನಸ್ತಾಪ. ಹಿರಿಯ ಅಧಿಕಾರಿ ವರ್ಗದಿಂದ ನಿಮಗೆ ತೊಂದರೆ ಕಾಡಲಿದೆ. ಉದ್ಯೋಗದಲ್ಲಿ ದುರ್ಜನರಿಂದ ಕಿರಿಕಿರಿ. ಮರ, ಹಿಟ್ಟಿಗೆ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಪ್ರತಿಫಲ ಸಿಗುತ್ತದೆ. ಪ್ರೇಮಿಗಳಿಗೆ ವಿವಾಹ ಕಾರ್ಯಕ್ಕೆ ಹಿರಿಯರ ಕಡೆಯಿಂದ ವಿರೋಧ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಮಕರ ರಾಶಿ:
ಆತ್ಮೀಯರ ವಿಶ್ವಾಸವನ್ನು ವೃದ್ಧಿಸಿಕೊಳ್ಳಿ. ಕುಟುಂಬದೊಡನೆ ಒಡನಾಟವನ್ನು ಹೆಚ್ಚು ಪಡಿಸಿ ಕೊಳ್ಳುವುದು ಒಳ್ಳೆಯದು. ಈ ದಿನ ಪೂರ್ಣಪ್ರಮಾಣದ ಚೈತನ್ಯ ತುಂಬಿಕೊಂಡು ಕೆಲಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ದೇಗುಲಗಳ ಭೇಟಿಯು ನಿಮ್ಮ ಕಾರ್ಯ ಯಶಸ್ವಿಯಾಗಲು ಅದ್ಭುತ ಶಕ್ತಿಯನ್ನು ದಯಪಾಲಿಸಲಿದೆ.
ಹಿತ ಶತ್ರುಗಳ ಕಾಟ ಅಧಿಕ ಮತ್ತು ಒಳಸಂಚು ನಡೆಸುವವರು. ತಮ್ಮ ಸ್ವಂತ ಪ್ರಯತ್ನದಿಂದ ಕೆಲಸಕಾರ್ಯಗಳು ಕೂಡಿ ಬರುತ್ತವೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ತಾವು ಮಾಡುವಂತಹ ಕೆಲಸದ ಜಾಗದಲ್ಲಿ ಕಿರಿಕಿರಿ. ತಮಗೆ ಮೂಲವ್ಯಾದಿ ಮಲಬದ್ಧತೆ ಇತ್ಯಾದಿ ರೋಗಗಳಿಂದ ತೊಂದರೆಯಾಗುವುದು. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ತಮ್ಮ ಆತ್ಮೀಯರ ಸಹಾಯದಿಂದ ಮಕ್ಕಳ ವಿವಾಹ ಕಾರ್ಯಕ್ಕೆ ಸಹಕಾರಿಯಾಗುವುದು. ತುಂಬಾ ದಿನದಿಂದ ಸಂತಾನದ ಸಮಸ್ಯೆ ದೂರವಾಗಲಿದೆ ಹಾಗಾಗಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರಲಿದ್ದಾರೆ. ಹಣಕಾಸಿನಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ. ಹೊಸ ಆಸ್ತಿ ಅಥವಾ ನಿವೇಶನ ಮನೆ ಕಟ್ಟಡ ಬಗ್ಗೆ ಚಿಂತನೆ ಹಾಗೂ ಯಶಸ್ಸು. ಪ್ರೇಮಿಗಳು ಸರಸ-ಸಲ್ಲಾಪ ಗಳಿಂದ ಪ್ರಾಯಶ್ಚಿತ್ತ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಕುಂಭ ರಾಶಿ:
ಆರ್ಥಿಕ ವ್ಯವಹಾರವು ನಿಮ್ಮ ಇಚ್ಛೆ ಪ್ರಕಾರ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರ ಸಮ್ಮುಖದಲ್ಲಿ ನಿಮ್ಮ ಯೋಜನೆಯನ್ನು ಪ್ರಸ್ತಾಪ ಮಾಡುವಿರಿ ಅದಕ್ಕೆ ಸೂಕ್ತ ಬಂಡವಾಳವು ಸಹ ಈ ದಿನ ದೊರೆಯಲಿದೆ. ಕಚೇರಿ, ಬ್ಯಾಂಕುಗಳ ವ್ಯವಹಾರದಲ್ಲಿ ನಿಮ್ಮ ಕೆಲಸ ನಿಶ್ಚಿತವಾಗಿ ಜಯ ಕಾಣಲಿದೆ.
ನಿವೇಶನದಲ್ಲಿ ತೊಂದರೆ, ಆರೋಗ್ಯದಲ್ಲಿ ತೊಂದರೆ ,ದೂರದ ಪ್ರಯಾಣ ಬೇಡ .ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಬಂದು ಬಳಗ ಸ್ನೇಹಿತರ ಕಡೆಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ ವಿಚಾರದಲ್ಲಿ ಮುಂದೂಡುವುದು. ದೂರದ ಪ್ರಯಾಣ ಬೇಡ. ತುಂಬಾ ದಿನದಿಂದ ಕಾಡುವ ಸಮಸ್ಯೆಯನ್ನು ಬಗೆಹರಿಸುವ ಸನಿಹ ಬಂದಿರುತ್ತದೆ.ಕುಟುಂಬದಲ್ಲಿ ಕಲಹ ಅಣ್ಣತಮ್ಮಂದಿರಲ್ಲಿ ಕಲಹ ನಂಬಿ ದಲ್ಲಿ ಕಲಹ ಮನಸ್ತಾಪ ಆರೋಗ್ಯದಲ್ಲಿ ಏರುಪೇರು ದೂರದ ಪ್ರಯಾಣ ಬೇಡ ಯಾವುದೇ ವಾಹನ ಆಸ್ತಿ ವಿಚಾರದಲ್ಲಿ ಮನಸ್ತಾಪ ಕೋರ್ಟ್ ವಿಚಾರದಲ್ಲಿ ಮುಂದೆ ಹೋಗುವುದು ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

ಮೀನ ರಾಶಿ:
ಸಾಮಾಜಿಕ ಬದ್ಧತೆಯ ಕಾರ್ಯವು ತುಂಬಾ ಉತ್ತಮ ರೀತಿಯಲ್ಲಿ ಮೂಡಿಬರಲಿದೆ. ಉದ್ಯೋಗದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು, ಯಾವುದೇ ಕಾರಣಕ್ಕೂ ವಿಳಂಬ ಮಾಡುವುದು ಒಳ್ಳೆಯದಲ್ಲ.
ಸಂಗಾತಿಯ ಸಹಕಾರ ಪಡೆದು ಧೈರ್ಯದಿಂದ ಮುನ್ನುಗ್ಗಿ ಕಾರ್ಯಸಾಧನೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ತಂದುಕೊಡಲಿದೆ. ಸದಾ ಚಿಂತೆಯಿಂದ ಅನಿವಾರ್ಯವಾಗಿ ಆರೋಗ್ಯದಲ್ಲಿ ದುಷ್ಟ ಪರಿಣಾಮ ಬೀರಲಿದೆ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಈ ದಿನ ನಿಮ್ಮ ಆದಾಯವು ದ್ವಿಗುಣಗೊಳ್ಳುವ ಅದರಿಂದಾಗಿ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲವಾಗಿರುತ್ತದೆ. ರಾಜಕೀಯದಲ್ಲಿ ಯಶಸ್ಸು, ಗೌರವವನ್ನು ಕೊಡುತ್ತದೆ. ಆಂತರಿಕ ಸಮಸ್ಯೆಗಳು ಪರಿಹಾರಗೊಂಡು ನೆಮ್ಮದಿ ಮೂಡಿಬರಲಿದೆ. ಹಿರಿಯ ವಯಸ್ಕರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಮಕ್ಕಳ ಆರೋಗ್ಯದ ಸಮಸ್ಯೆ ತಮಗೆ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಕಾಣುವಿರಿ. ಹೊಸ ವಸ್ತುಗಳನ್ನು ಖರೀದಿಸುವಿರಿ. ಮಹಿಳೆಯರಿಗೆ ಸಾಮಾಜಿಕ ಗೌರವ ದೊರಕಲಿದೆ. ಹಿರಿಯರ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಪ್ರೇಮಿಗಳ ಮದುವೆ ಕಾರ್ಯ ವಿಳಂಬವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಜ್ಯೋತಿಷ್ಯರು
ಸೋಮಶೇಖರ್ ಪಂಡಿತ್B.Sc
Mob.93534 88403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top