Connect with us

Dvgsuddi Kannada | online news portal | Kannada news online

ಅಖಿಲ ಭಾರತ ವಕೀಲರ ಸಂಘ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ದಾವಣಗೆರೆ

ಅಖಿಲ ಭಾರತ ವಕೀಲರ ಸಂಘ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಡಿವಿಜಿ,ಸುದ್ದಿ, ದಾವಣಗೆರೆ:  ಅಖಿಲ ಭಾರತ ವಕೀಲರ ಸಂಘದ 8ನೇ  ರಾಜ್ಯ ಸಮ್ಮೇಳನದ ಪೋಸ್ಟರ್‌ ಅನ್ನು  ಅಖಿಲ ಭಾರತ ವಕೀಲರ ಸಂಘದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಎಲ್.ಹೆಚ್.ಅರುಣ್ ಕುಮಾರ್ ಮತ್ತು  ಪೀಪಲ್ಸ್ ಲಾಯರ್ಸ್  ಗಿಲ್ಡ್  ಅಧ್ಯಕ್ಷ  ಅನೀಸ್ ಪಾಷಾ ಅವರ  ಬಿಡುಗಡೆಗೊಳಿಸಿದರು.

ಈ  ಸಂದರ್ಭದಲ್ಲಿ  ಮಾತನಾಡಿದ  ನ್ಯಾಯವಾದಿ ಎಲ್.ಹೆಚ್. ಅರುಣ್ ಕುಮಾರ್ ಅವರು, ಅಖಿಲ ಭಾರತ ವಕೀಲರ ಸಂಘದ  ರಾಜ್ಯ ಸಮ್ಮೇಳನ ಡಿ.14 ಮತ್ತು 15 ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ  ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸಮ್ಮೇಳನವನ್ನು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ  ಉದ್ಘಾಟಿಸಲಿದ್ದಾರೆ. ಅಖಿಲ ಭಾರತ  ವಕೀಲರ  ಸಂಘವು ದೇಶದಲ್ಲಿ  ಬಹುದೊಡ್ಡ   ಸಂಘಟನೆಯಾಗಿದ್ದು,  ವಕೀಲರ ಹಿತರಕ್ಷಣೆಗಾಗಿ ಪರಿಣಾಮಕಾರಿಯಾಗಿ ಶ್ರಮಿಸುತ್ತಿದೆ. ಸಮ್ಮೇಳನದಲ್ಲಿ  ವಕೀಲರ ಹಲವು ಬೇಡಿಕೆಗಳನ್ನು  ಮಂಡಿಸಲಾಗುವುದು ಎಂದು ತಿಳಿಸಿದರು.

ಪ್ರಮುಖವಾಗಿ ದೇಶಾದ್ಯಂತ  ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆ ಹಾಗೂ ದೌರ್ಜನ್ಯ ತಡೆಗಟ್ಟಲು  ಕೇಂದ್ರ ಹಾಗೂ  ರಾಜ್ಯ ಸರ್ಕಾರಗಳು ವಕೀಲರ ಸಂರಕ್ಷಣಾ ಕಾಯ್ದೆ ರೂಪಿಸಿ, ಜಾರಿಗೊಳಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಪೀಪಲ್ಸ್ ‍ಲಾಯರ್ಸ್ ಗಿಲ್ಡ್  ಅಧ್ಯಕ್ಷ , ನ್ಯಾಯವಾದಿ ಅನೀಸ್ ಪಾಷಾ  ಮಾತನಾಡಿ,ವಕೀಲರ ಹಿತರಕ್ಷಣೆಗಾಗಿ   ಕೇಂದ್ರ  ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಲು ಹಾಗೂ  ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ  ವಕೀಲರ ಸಂಘಗಳಿಗೆ 10 ಲಕ್ಷ , ತಾಲ್ಲೂಕು ಕೇಂದ್ರಗಳಲ್ಲಿರುವ ತಾಲ್ಲೂಕು   ವಕೀಲರ ಸಂಘಗಳಿಗೆ 5 ಲಕ್ಷ ರೂ. ವಾರ್ಷಿಕ ಅನುದಾನವನ್ನು  ಸರ್ಕಾರಗಳು ಒದಗಿಸಲು ಒತ್ತಾಯಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಕೀಲರುಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು.ಈ  ಸಂದರ್ಭದಲ್ಲಿ  ವಕೀಲರುಗಳಾದ ಕೆ. ಮಂಜುಳಾ, ಜ್ಯೋತಿ ಲಕ್ಷ್ಮೀ,  ಜಸ್ಟಿನ್ ಜಯಕುಮಾರ್, ಸಿರಾಜುದ್ದೀನ್, ಉಷಾ ಕೈಲಾಸದ್, ಸುಧಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top