ಡಿವಿಜಿ ಸುದ್ದಿ, ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಅಡಿಕೆ ಬೆಳೆ ಸಮಗ್ರ ನಿರ್ವಹಣೆಯ ಬಗ್ಗೆ ವೈಜ್ಞಾನಿಕ ಕ್ಷೇತ್ರ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಗ್ರಾಮದ ಆಯ್ದ ಅಡಿಕೆ ತೋಟಗಳಿಗೆ ಭೇಟಿ ನೀಡಿ ವೈಜ್ಞಾನಿಕ ಮಾಹಿತಿಯನ್ನು ನೀಡಿದರು. ಪ್ರಸ್ತುತ ಉತ್ತಮ ಮಳೆಯಾಗುತ್ತಿದ್ದು ಪೋಷಕಾಂಶಗಳನ್ನು ನೀಡಲು ಸೂಕ್ತ ಸಮಯವಾಗಿದೆ. ರೈತರು ೧೦ ವರ್ಷ ಮೇಲ್ಪಟ್ಟ ಗಿಡಗಳಿಗೆ 15:15:15-150 UÁæA, MOP-100 ಗ್ರಾಂ ಮತ್ತು ಲಘು ಪೋಷಕಾಂಶದ (All Micronutrient Mix)-100 ಗ್ರಾಂ ಪ್ರತೀ ಗಿಡಕ್ಕೆ ನೀಡುವುದು ಉತ್ತಮವೆಂದು ತಿಳಿಸಿದರು.
ಗೊಬ್ಬರವನ್ನು ಗಿಡದಿಂದ ಎರಡು ಅಡಿ ಅಂತರದಲ್ಲಿ ಹಾಕಿದರೆ ಉತ್ತಮ. ನಂತರ ಹಸಿರೆಲೆಗೊಬ್ಬರದ ಗಿಡಗಳಾದ ಸೆಣಬು, ಡಯಾಂಚ, ಅವರೆ ಅಥವಾ ವೆಲೆವೆಟ್ ಬೀನ್ಸ್ಗಳನ್ನು ಬೆಳೆಯಬಹುದು. ಇದರಿಂದ ತೋಟದ ಫಲವತ್ತತೆ ಹೆಚ್ಚುವುದಲ್ಲದೆ ಕಳೆಯ ನಯಂತ್ರಣ ಸಾಧ್ಯವೆಂದು ತಿಳಿಸಿದರು.
ಕೆಲವು ತೋಟಗಳಲ್ಲಿ ಸುಳಿ ತಿಗಣೆಯ ಭಾದೆ ಕಂಡು ಬಂದಿದ್ದು ಅದರ ನಿಯಂತ್ರಣಕ್ಕೆ ಕ್ಲೋರ್ಪೈರಿಫಾಸ್ 2 ಮಿಲೀ ಅಥವಾ ಡೈಮಿಥೋಯೇಟ್ 2 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಹಾಗೆಯೇ ಅಣಬೆರೋಗ ನಿಯಂತ್ರಣಕ್ಕೆ ಈ ಸಮಯದಲ್ಲಿ ಅರ್ಕಾ ಸೂಕ್ಷಾö್ಮಣು ಜೀವಿಗಳ ಮಿಶ್ರಣವನ್ನು 10 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಪ್ರತೀ ಗಿಡದ ಬುಡಕ್ಕೆ 4 ಲೀಟರ್ ದ್ರಾವಣವನ್ನು ಹಾಕಬೇಕೆಂದು ರೈತರಿಗೆ ಮಾಹಿತಿ ನೀಡಿದರು.
ಸಂದರ್ಭದಲ್ಲಿ ಆನಗೋಡು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ರವಿ, ನವೀನ್, ರೈತರಾದ ವಸಂತಕುಮಾರ್, ಚನ್ನಪ್ಪ, ಕೊಟ್ರಪ್ಪ, ಕಲ್ಲೇಶಪ್ಪ, ಚಂದ್ರಪ್ಪ ಉಪಸ್ಥಿತರಿದ್ದರು.



